ಸಿರಿವಂತಿಕೆ

ಸಿರಿವಂತಿಕೆ

ಐಷಾರಾಮಿ ಜೀವನ ಅಂದರೆ ಏನು?ದೊಡ್ಡದಾದ ಬಂಗಲೆ,ಎ ಸಿ ಕಾರು,ಕೋಟಿಗಟ್ಟಲೇ ದುಡ್ಡು,ದೇಹದ ಮೇಲೆ ಹೊರಲಾರದಷ್ಟು ಚಿನ್ನ,ದೇಶ ವಿದೇಶ ಗಳಲ್ಲಿ ವಿಮಾನ ಪ್ರಯಾಣ,ಅವರ ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ,ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ (7ಸ್ಟಾರ್) ಊಟ,ಇಷ್ಟೆಲ್ಲಾ ಇದ್ದು ವಿಶ್ರಾಂತಿಗಾಗಿ ರೆಸಾರ್ಟ್ ಗಳು.ಇದೇ ನಾ ಐಷಾರಾಮಿ ಜೀವನ?



 


ಪ್ರತಿಯೊಬ್ಬರಿಗೂ ನಾನು ಶ್ರೀಮಂತನಾಗಬೇಕೆ ಎನ್ನು ಆಸೆ ಇದ್ದೆ ಇರುತ್ತದೆ.ಐಷಾರಾಮಿ ಜೀವನದ ಸಂಕೇತಗಳಾದ ಆಸ್ತಿ ಕಾರು ದುಡ್ಡು ಇವುಗಳಿಗಾಗಿ ಇವುಗಳನ್ನು ಪಡಯಲೇ ಬೇಕು ಎನ್ನುವ ಹಂಬಲದಿಂದ ಲಂಚವನ್ನು ಸ್ವೀಕರಿಸಿ ತನ್ನ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೆ ಲೋಕಯುಕ್ತ ದಾಳಿನಡೆಸಿ ಒಬ್ಬ ಸಾಮಾನ್ಯ ಗುಮಾಸ್ತ 40 ಕೋಟಿ ಆಸ್ತಿ ಹೊಂದಿರುವುದನ್ನು ನಂಬಲು ಅಸಾಧ್ಯ  ಸಾಮಾನ್ಯವಾಗಿ ಜೀವನ ನಡೆಸಲು ಬೇಕಾಗುವಷ್ಟು ಸಂಬಳವನ್ನು ಪಡೆಯುತ್ತಿದ್ದರೂ ಆತಂಹ ಸವಾಸಕ್ಕೆ ಕೈ ಹಾಕಿರುವುದು  ಎಷ್ಟು ವಿಚಿತ್ರ.



 


ಶ್ರೀಮಂತಿಕೆಯನ್ನು ಪ್ರತಿನಿಧಿಸುವ ವಸ್ತುಗಳನ್ನು ಪಡೆಯಲು ಜನರು ಏನೆಲ್ಲಾ ಮಾಡುತ್ತರೆ.ನೆನ್ನೆ ಕೂಡ ವಾರ್ತೆ ನೋಡಿದಾಗ ನನಗೆ ಬೇಜರಾಯಿತು ಏನೆಂದರೆ ಒಬ್ಬ ತಾಯಿ ತಾನು ಹೆತ್ತ ಮಕ್ಕಳನ್ನೇ ಮಕ್ಕಳು ಮಾರಾಟಕ್ಕೆ ಇವೆ ಎಂದು ಬ್ಯಾನರ್ ಕಟ್ಟಿಕೊಂಡು ಮಾರಟ ಮಾಡುತ್ತೀರುವ ದೃಶ್ಯ ನೋಡಿ ನನಗೆ ಮರುಕವಾಯಿತ್ತು ಆಕೆಯ ನೋವು ಎನಿತ್ತೋ ಆದರೆ ತಾನು ಹೆತ್ತ ಮಕ್ಕಳನ್ನು ಈ ರೀತಿಯಾಗಿ ಬೀದಿಯಲ್ಲಿ ಮಾರಟ ಮಾಡುವುದು ತಪ್ಪು.ಆಮಕ್ಕಳು ಅದು ಏನು ಪಾಪ ಮಾಡಿದರೋ ಆ ದೇವರೊಬ್ಬನೇ ತಿಳಿಯಬೇಕು.ನೀವು ನಿಮ್ಮ ತಾಯಿಯ ಜೊತೆ ಕಾಲವನ್ನು ಕಳೆದಾಗ ನಿಮಗೆ ಎಷ್ಟು ಸಂತಸವಾಗುತ್ತದೆ ಆ ಸಂತಸವನ್ನು ದುಡ್ಡಿನಿಂದ ಅಯಲು ಸಾಧ್ಯವೇ?ನಿಮ್ಮ ತಾಯಿ ಯಾವುದಾದರೂ ಊರಿಗೆ ಹೋಗಿ 2 ದಿನ ಬರಲಿಲ್ಲವೆಂದರೆ ನಿಮಗೆ ಉಂಟಾಗುವ ಕಳವಳ,ವೇದನೆ ಎಷ್ಟು ತಾಯಿ ಇಲ್ಲ ಎನ್ನುವ ನೋವನ್ನು ದುಡ್ಡು ತೀರಿಸಬಲ್ಲದೇ.



 


 ಕಾರ್ಲಸ್ ಡೆವಿಡ್ ಎಂಬ ವ್ಯಕ್ತಿಗೆ 10 ಕೋಟಿ ಲಾಟರಿಯಲ್ಲಿ ಬಂತು ಅಂದೇ ಆತನ ತಾಯಿಯ ಮರಣ ಸಂಭವಿಸಿತ್ತು.ಕಾರ್ಲಸ್ ತನಗೆ ಬಂದ 10 ಕೋಟಿ ರೂಪಾಯಿಯನ್ನು ಒಂದು ಚಾರಿಟಬಲ್ ಗೆ ಬರೆದು ಬರಿಗೈಲಿ ಬಂದ ತನ್ನ ತಾಯಿಯೇ ಹೋದ ಮೇಲೆ ಆ ದುಡ್ಡು ಯಾವುದಕ್ಕೆ ಎಂದ ಕಾರ್ಲಸ್.ಶ್ರಿಮಂತನಿಗೆ ಚಿಂತೆಗಳು ಇರುವುದಿಲ್ಲ ಎನ್ನುವ ಭಾವನೆ ತಪ್ಪು ಆತನಿಗೆ ಇರುವ ಚಿಂತೆಗಳು ಒಬ್ಬ ಸಾಮಾನ್ಯ ಮನುಷ್ಯನಿಗಿರಲು ಸಾಧ್ಯವಿಲ್ಲ. ಚಿತೆ ಸತ್ತವರನ್ನು ಸುಡುತ್ತದೆ  ಆದರೆ  ಚಿಂತೆ ಬದುಕಿರುವವರನ್ನೂ ಸುಡುತ್ತದೆ.ದುಡ್ಡೇ ದೊಡ್ಡಪ್ಪ ಎನ್ನು ಗಾದೆಯಂತೆ ಜೀವನದಲ್ಲಿ ದುಡ್ಡೇ ಮುಖ್ಯವೆಂದು ಜನರ ಕಪಟಿಗಳಾಗಿ ವರ್ತಿಸುತ್ತೀರುವು ನುಂಗಲಾರದ ಕಹಿ ಸತ್ಯವಾಗಿದೆ.ಈ ಪ್ರಪಂಚದಲ್ಲಿ ದುಡ್ಡೇ ಮುಖ್ಯವೆನ್ನುವ ಜನರು ಒಂದು ಕಡೆ ಆದರೆ ದುಡ್ಡು ಮುಖ್ಯವಲ್ಲ ಎನ್ನುವ ಕಾರ್ಲಸ್ ನಂತವರು ಇನ್ನೋದು ಕಡೆ.



 


  ಈ ಆಸೆ ಹೋಗಿ ಲಂಚ ಎನ್ನುವ ಗೂಳಿ ಯಾವಾಗ ನಮ್ಮನ್ನು  ಬಿಟ್ಟು   ಹೋಗುತ್ತದೋ ನಾ ತಿಳಿಯೇ ನೀವೆನಾದರೂ ತಿಳಿದಿರಾ????  ಕೊನೆಯದಾಗಿ ಒಂದು ಮಾತು  ಈ ಪ್ರಪಂಚದಲ್ಲಿ ದುಡ್ಡಿಗಿಂತ ಸ್ನೇಹ-ಪ್ರೀತಿಯ ಭಾಂದವ್ಯಗಳು ಮುಖ್ಯವೆಂದು ಎಲ್ಲರೂ ಅರಿಯಬೇಕು.

Comments