ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -ಕೊನೆ ಭಾಗ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -ಕೊನೆ ಭಾಗ...

 ನಾಣಿ-

ಶೀನ-

ಕರಿಯ-

ಮುನಿಯ-

ಅರ್ಮುಗಂ  ಮತ್ತು ಬೋರ ಇದ್ದ ಗೂಡ್ಸ್ ಗಾಡೀನ, ಸೀದಾ ಕಮೀಷನರ ಆಫೀಸಿಗೆ ಹೊಯ್ದು ನಿಲ್ಲಿಸಿ, ರಾಜ ಟ್ಹೀವಿಯಿಂದ ಕೆಳಗಡೆ ಇಳಿದು ಅದಾಗಲೇ ಅಲ್ಲಿ ನೆರೆದಿದ್ದ ತನ್ನ ಸಹೋದ್ಯೋಗಿಗಳತ್ತ  ವಿಜಯದ ಹೆಮ್ಮೆಯ ನಗೆ ಬೀರಿದ ಕಾನ್ಸ್ಟೆಬಲು  ಗುಂಡಣ್ಣ..

ಎಲ್ರೂ ಮೇಲೆ ಮೇಲೆ ಹುಳ್ಳಗೆ ನಕ್ರೂ, ಮನಸಲ್ಲೇ ಆಹಾ  ಗುಂದಣನ್ ಒಳ್ಳೆ ಜಾಕು ಪಾಟೇ  ಹೊಡೆದು ಬಿಟ್ಟ, ನನ್ ಮಗಅದೆಂಗ್ ಕಂಡು ಹಿಡಿದನೋ  ಕಳ್ಳರನ್ನ, ನಮ್ಮ ಬುದ್ಧಿಗ್  ಅದೇನ್ ಗೆದ್ದಿಲು ಹಿಡಿದಿತ್ತೋ! ನಾವ್  ಹಿಡಿಯೋಕ್ ಮುಂಚೆನೇ ಅವ್ನೆ ಹಿಡಿದು ಬಿಟ್ನಲ್ಲ, ಈಗ ಅವ್ನು ಇನ್ಸ್ಪೆಕ್ಟರ್ ಬೇರೆ ಅಗ್ತವ್ನೆ, ತತ್! ನಮ್ದುಕೆ ಹಣೆ ಬರಹವೇ ಅಸ್ತು.. ಪ್ಚ  ಗೂಡ್ಸ್ ಗಾಡಿ ಹಿಂದಿನ ಬಾಗಿಲು ಓಪನ್ ಮಾಡಿ, ಅದರಲ್ಲಿ ಕೈ ಕಾಲು ಕಟ್ಟಿ ಬಿಸಾಕಿದ್ದ  ಎಲ್ರನ್ನೂ ಎತ್ತಿ ಹೊರ ಕರೆ ತಂದು ಒಂದು ಜೀಪಲ್ಲಿ ಹಾಕಿ ಪಕ್ಕದ ಸ್ಟೇಷನ್ನಿಗೆ ಚೆನ್ನಾಗಿ  'ರುಬ್ಬಲು' ಕರೆದೊಯ್ದರು...!!

ಕಮೀಶನರೆ ಹತ್ಗ್ತಿರ ಬಂದು ಗುಂಡಣ್ಣ ನ 'ಹೆಗಲ ಮೇಲೆ' ಕೈ ಹಾಕಿ 'ಆತ್ಮೀಯತೆಯಿಂದ'  ಮಾತಾಡಿಸುತ್ತ ತಮ್ಮ ಕಚೇರಿಗೆ  ಕರೆದೊಯ್ದಾಗಲಂತೂ ಎಲ್ರಿಗೂ ಹೊಟ್ಟೆಲಿ  'ನವಣೆ ' ಕುಟ್ಟಿದ ಹಾಗಾಯ್ತು:) ಈ ಗುಂಡಣ್ಣ ನನ್ನ ,ಇನ್ ಮೇಲೆ ಹಿಡಿಯೋರೆ  ಇಲ್ಲ, ಕತ್ತೆಗೂ ಒಂದು 'ಕಾಲ' ಬರ್ತೆ ಅಂತ ಅದ್ಕೆ ಹೇಳಿರಬೇಕು, ಎಲ್ರೂ ಪರಸಪರ ಮುಖ ನೋಡಿದಾಗ ಇದೆ ಅಭಿಪ್ರಾಯ ಮುಖದಲ್ಲಿ ಕಾಣಿಸಿತು...

 

ಸೀ ಎಮ್ಮ 'ಕುರ್ಚೀನ' ಜತನವಾಗಿ ಕೆಳಗಡೆ ಇಳ್ಸಿ, ಕಮೀಷನರ ಕಚೇರಿಗೆ ಒಯ್ದು ಇಟ್ಟರು, ತಮ್ಮ ಕಚೇರಿಯಲ್ಲಿ ಗುಂಡಣ್ಣ ಜೊತೆ ಕುಳಿತು, ಆತ್ಮೀಯತೆಯಿಂದ ಮಾತಾಡುತ್ತ, ಗುಂಡಣ್ಣ, ಅಂತೂ ಕುರ್ಚೀನ ಕಷ್ಟ ಪಟ್ಟು ಹುಡುಕಿ, ನಮ್ಮ ಮಾನ ಉಳಿಸಿದಿರಿ, ಅದೆನರ ಸಿಗದೆ ಹೋಗಿದ್ದಾರೆ, ಇನ್ನೇನು ನಿವ್ರುತ್ತಿಗ್  ಕಾಯ್ತಿರೋ ನಂಗೆ ಒಳ್ಳೆ ತಲೆ ನೋವು, ಮತ್ತು  ಮಾನಸಿಕ ನೆಮದಿ ಕೆಟ್ಟು ಪೇಚಾಟ ಅಗ್ತಿತು, ಈಗ ಕುರ್ಚಿ ಸಿಕ್ಕಾಯ್ತಲ್ಲ,ಅದ್ನ ಮುಖ್ಯಮಂತ್ರಿಗಳ  ನಿವಾಸಕ್ಕೆ ಒಯ್ದು ತಲುಪಿಸೋಣ, ಕುರ್ಚಿ ಸಿಕ್ಕಿದ್ದು ಸಾಮಾನ್ಯ ವಿಷ್ಯ ಅಲ್ಲ, ಅದ್ಕೆ ಪ್ರೆಸ್ ಮೀಟ್ ಕರಡು, ಕಳ್ಳರನ್ನೆಲ್ಲ ತೋರ್ಸಿ,ಆಮೇಲೆ ಮುಖ್ಯಮಂತ್ರಿಗಳ ತಾವ 'ಬಹುಮಾನ' ಬಗ್ಗೆ ಮಾತಾಡೋಣ, ಹಾಗೆ ನಿನ್ನ ಪ್ರೋಮೊಷನ್ನು  ಅಲ್ಲೇ ನಿರ್ಧಾರ ಆಗುತ್ತೆ... 

ಕೊಂಚ ಸುಧಾರಿಸಿಕೊಂಡ ನಂತರ , ಕುರ್ಚಿ ಸಮೇತ  ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ  ಕುರ್ಚೀನ ಅವ್ರಿಗ್ ಒಪ್ಪಿಸಿ, ಅದು ಸಿಕ್ಕ ಬಗೆಯನ್ನ ತಾ ಅದನ್ನು ಕಷ್ಟ ಪಟ್ಟು ಹುಡುಕಿ ಕುರ್ಚಿ ಕಳ್ಳರನ್ ಹಿಡಿದ ಬಗೆಯನ್ನ ಗುಂಡಣ್ಣ ಉಪು-ಖಾರ-ಮಸಾಲೆ ಬೆರ್ಸಿ- ಸೇರ್ಸಿ  ಭಲೇ ಕುತೂಹಲಕಾರಿಯಾಗಿ ಹೇಳಿದ, ಕಥೆ ಕೇಳಿ ಮುಖ್ಯಮಂತ್ರಿಗಳು, ಓಹೋ ಗುಂಡಣ್ಣ ಹಾಗೋ?

 

ನೀ ಕುರ್ಚೀನ ಕಂಡು ಹಿಡಿಯಲೇ ಭಲೇ ಕಷ್ಟ ಪಟ್ಟಿದೀಯ, ನಾ ಅದಾಗಲೇ ಹೇಳಿದಂತೆ   ನಿಂಗೆ ಒಂದು ಕೋಟಿ ಬಹುಮಾನದ ಚೆಕ್   ನೀಡುವೆ, ಹಾಗೆಯೆ ನಿನ್ನ ಪ್ರೋಮೊಶನ್ನಿಗೆ  ಕಮೀಶನರಿಗೆ ಹೇಳಿ, ನೀ  ಕೋರೋ ಜಾಗಕ್ಕೆ  ನಿನ್ನ ಇನ್ಸ್ಪೆಕ್ಟರ್  ಮಾಡಿ ಕಳಿಸಲಾಗುವುದು.. ಈಗ ನೀ ನಮ ಮನೆಯಲ್ಲಿ ಊಟ ಮಾಡಿಕೊಂಡು ಹೊರಡು... ಡೀ ಆಯ ಜೀ ಗಳೇ ಅಂತೂ  ನಿಮ್ಮ ನಿವೃತ್ತಿಗೆ ಮುಂಚೆಯೇ  ಕುರ್ಚೀನ ಹುಡುಕಿ ಬಚಾವ್ ಆದಿರಿ ಎನ್ನಲು,ಅವ್ರು ಮಾತಿನ ವ್ಯಂಗ್ಯವನ್ ಗಣನೆಗೆ ತೆಗೆದುಕೊಳ್ಳದೆ  ನಿಮಗೇನು ಗೊತ್ತು ಪೋಸ್ಟ್ ಕಷ್ಟ? ಒಮ್ಮೆ ಅಲ್ಲಿ ಕೋರಿ ಆಗಲೇ ಗೊತ್ತಾಗುತ್ತೆ ಎಷ್ಟು ಕಷ್ಟ ಅಂತ -ಮನದಲ್ಲೇ ಹೇಳಿಕೊಂಡರು ...

 

ಚೆಕ್ ಕೊಟ್ಟ ಮುಖ್ಯಮಂತ್ರಿಗಳಿಗೆ ವಂದಿಸಿ, ಮನೆಗೆ ಹೊರಟ ಗುಂಡಣ್ಣ, ಅದಾಗಲೇ ಇವರೊಬ್ಬರೇ ಕುರ್ಚೀನ ಕಂಡು ಹಿಡಿದ    ಬಗ್ಗೆ ಗುಂಡಣ್ಣ ಹೆಂಡತಿ ಇಡೀ  ಪೋಲೀಸು ಅಪರ್ಟು ಮೆಂಟು ಗೆ ಟಾಂ ಟಾಂ ಮಾಡಿ  ಬೇರೆ ಪೋಲೀಸರ ಹೆಂಡತಿಯರ ಹೊಟ್ಟೆ ಕಿಚ್ಚು ಹೊತ್ತಿಸಿ, ಅವತ್ತು ಮನೆಗೆ  ಬಂದ ಪೊಲೀಸರಿಗೆ ಅವ್ರ ಹೆಂಡತೀರು  ಕುರಿತೇ ಹೇಳಿ, ನಿಂದಿಸಿ, ಊಟ ಕೊಡದೆ 'ಉಪವಾಸ' ಮಲಗಿಸಿದರು, ಆಗ ಅವರೆಲ್ಲರಿಗೂ ಗುಂಡಣ್ಣ ಮೇಲೆಯೇ ಕೋಪ ಬಂತು, ವಯ್ಯ ಕುರ್ಚೀನ 'ಒಬ್ನೇ' ಕಂಡು ಹಿಡಿದು 'ಬಹುಮಾನ' ಒಬ್ನೇ ತೆಗದುಕೊಂಡು ನಮನ್ನ 'ಉಪವಾಸ' ಮಲಗೋ ಹಾಗ್ ಮಾಡಿದನಲ್ಲ:(  ಅವ್ನ ಬಾಯಿಗ್ ಮಣ್ಣು ಹಾಕ!

 

ಅದೇಗೋ ಗುಂಡಣ್ಣ ನಿಗೆ ಬಹುಮಾನ ಬಂದ ಸುದ್ಧಿ ಕೇಳಿ  ಎಂದೆಂದೂ ಅವನ ಮನೆ ಕಡೆ ತಲೆ ಹಾಕದ, ಅವನ ಬಂಧು ಮಿತ್ರರೂ 'ಅಪಾರ' ಸಂಖ್ಯೆಯಲ್ಲಿ  ಮನೆ ಮುಂದೆ ನೆರೆದಿದ್ದರುಇಡೀ ಪೋಲೀಸು ವಸತಿ ಗೃಹದಲ್ಲಿ ಗುಂಡಣ್ಣ ಮನೆ  ಫೇಮಸ್ ಆಗಿ ಕಣ್ಣು ಕುಕ್ಕುತ್ತಿತ್ತು, ಬಹುಮಾನ ಬಂದ ಸುದ್ಧಿ ಕೇಳಿ  ಕೆಲ ಬ್ಯಾಂಕುಗಳವರು , ಇನ್ಸೂರೆನ್ಸು  ಎಜೆಂಟುಗಳು, ಜ್ಯೋತಿಷಿಗಳು,ಬುಡು ಬುಡುಕೆಯವರೂ, ಮತ್ತು ಹಲ ಗ್ರುಹೊಪೋಯೋಗಿ  ವಸ್ತುಗಳ ಕಂಪನಿಯವರು ಬಂದು ಗುಂಡಣ್ಣನ ಹೆಂಡತಿಗೆ ಏನೇನೋ ಆಶೆ ಆಮಿಷ ತೋರ್ಸಿ  ಒಂದು ಕೋಟಿ ಯನ್ನ ತಲಾ  'ಕಾಲು' ಭಾಗ ಹಂಚಿಕೊಂಡಿದ್ದರು:))

 

ಮನೆಗೆ ಬಂದ ಗುಂಡಣ್ಣ ತನ್ನ ಮನೆ ಮುಂದೆ ಹೊಸ ಕಾರು, ಬೈಕು, ಮತ್ತು ಅದೇ ತಾನೇ ಕೆಳಗಡೆ ಇಳಿಸುತ್ತಿದ್ದ  ವಾಶಿಂಗು ಮೆಶೀನು, ಫ್ರಿಜ್ಜು , ಎಲ್ ಸೀ ಡಿ- ಟೀ ವಿ, ಹೊಸ ಬೆಡ್ಡು ಮಂಚ ನೋಡಿ ಧಂಗಾಗಿ ಛೆ! ಇದು ನನ ಮನೆ ಆಗಿರಲಿಕ್ಕಿಲ್ಲನಾ ಯಾರ್ದೋ ಮನೆಗೆ ಬಂದಿರಬೇಕು, ಅಂತ ವಾಪಾಸು ಹೋಗಲು  , ಹೆಂಡತಿ  ರ್ರೀ ರೀ ಬನ್ರೀ ಒಳಗಡೆ  , ಎಲ್ಲಿಗ ಹೋಗ್ತಿದೀರ?    ಅಲ್ಲಿ ಒಳಗಡೆ ಬ್ಯಾಂಕಿನೋರುಇನ್ಶೂರೆನ್ಸು, ಎಲ್ರೂ ಬಂದವರೆ,   ನಾ ಅದಾಗಲೇ ಒಂದು ಕೋಟಿ ಎಲ್ರಿಗೂ ಹಂಚಿದೀನಿ, ನೀವು ಚೆಕ್ ಕೊಡಿ ಎನ್ನಲು, ಗುಂಡಣ್ಣ ನಿಗೆ ಭೂಮಿ ಬಾಯ್ ಬಿರಿಯಬರ್ದೆ ಎನಸಿತು:((

 

 

ಮುಖ ಕೈ ಕ್ಲೂ ತೊಳೆಯ ಗೊಡದೆ ಮೊದಲು ಚೆಕ್ಕು  ತೆಗದುಕೊಂಡು ಕೈ ಕುಲುಕಿ ಅಭಿನಂದನೆ ಹೇಳಿ ಹೋದ  ಬ್ಯಾಂಕಿನೋರು, ಮಾರನೆ ದಿನ  ಒಂದು ನೋಟೀಸು ಕಳಿಸಿದರು ಗುಂಡಣ್ಣ ಮನೆಗೆ,ನಿಮ್ಮ ಚೆಕ್ಕು ಅಕೌಂಟ್  ನಲ್ಲಿ ನಯ ಪೈಸೆ ಇಲ್ಲ, ಚೆಕ್ ಬೌನ್ಸೆ ಆಗಿದ್ದು, ಕೊಟ್ಟವರ ಮೇಲೆ ಮೊಖದ್ದಮೆ ಹೂಡಲಾಗುವುದು, ಶೀಘ್ರ ಮ್ಯಾನೇಜರ್ ಕಂಡು ಬಗೆ ವಿವರಣೆ ಕೊಟ್ಟು  ಉತ್ತರಿಸಿವುದು,ಎಂದು ಇತ್ತು.....

 

  ನೋಟೀಸಿಗೆ ಭಯ ಬಿದ್ದು ಇದೋ ಬಿದ್ದೋ ಅಂತ ಕಮೀಷನರ ಕಚೇರಿಗೆ ಹೋಗಿ ಅವ್ರಿಗ್ ವಿಷ್ಯ ಹೇಳಲು,ಮುಖ್ಯಮಂತ್ರಿಗಳ ಕಚೇರಿಗೆ ಅಲ್ಲಿಂದ, ಖಜಾನೆಗೆ  ಫೋನು ಮಾಡಿ ಬಗ್ಗೆ ಕೇಳಲು, ಸ್ವಲ್ಪ ಮಟ್ಟಿಗೆ ಹಣ ಕಾಸಿನ  ಸಮಸ್ಯೆ ಆಗಿದೆ ಆದರೆ , ಶೀಘ್ರದಲ್ಲಿಯೇ  'ವಿಶ್ವ ಬ್ಯಾಂಕಿನವರುಸಾವಿರಾರು ಕೋಟಿ ಬಿಡುಗಡೆ ಮಾಡುವರು ಆಗ ಕೋಟಿ' ಕಾಸು  ಗುಂಡಣ್ಣ 'ಅಕೌಂಟ್ ಗೆ' ಸೇರ್ವದು ಎಂಬ ಭರವಸೆ ಕೊಟ್ಟರು, ಒಂದು-- ಮೊರು-   ತಿಂಗಳಾದರೂ, ಗುಂಡಣ್ಣ  ಬ್ಯಾಂಕಿಗೆ  ಖಜಾನೆ ಇಲಾಖೆಗೆ ಅಲೆದೋ ಅಲೆದೂ ಚಪ್ಪಲಿ ಬೂಟು ಸವೆದು ಹೋಗಿ,ನಿತ್ರಾಣ  ಆದ:)))

 

ಇನ್ಸ್ಪೆಕ್ಟರ್  ಮಾಡಿದರೂ ದೂರದ  ಗುಲ್ಬರ್ಗಕ್ಕೆ  ವರ್ಗಾಯಿಸಿ ಅಲ್ಲಿನ ಬಿರು ಬಿಸಿಲಿಗೆ  ಅಂಜಿ, ನಾ ಒಳ್ಳೆ ಒಳ್ಳೆ ಅಂತ ಅವರಿವರ ಕೈ ಕಾಲು ಹಿಡಿದು  ಮರಳಿ  ಬೆಂಗಳೂರಿಗೆ ವರ್ಗಾಯಿಸಿಕೊಂಡ.. ಈಗೀಗ  ಬ್ಯಾಂಕಿನವರೂ, ಇವನಿಗೆ ಸಾಲದಲ್ಲಿ  ವಸ್ತುಗಳನ್ನ ಕೊಟ್ಟವರೂ ಇವನ ಮನೆಗೆ ಎಡ ತಾಕುತಾರೆ, ಅವರಿಗೆಲ್ಲ 'ನಾಳೆ ಬನಿ' ಕಾಸು ಸಿಗುತ್ತೆ ಅಂತ ಹೇಳಿ ವಾಪಸು ಕಲಿಸುತ್ತಾರೆ, ಅವರೋ ಬಂದ ದಾರಿಗೆ ಸುಂಕವಿಲ್ಲ ಅಂತ ಹೋಗ್ತವ್ರೆ :) ಗುಂಡಣ್ಣ ಪ್ರತಿ ಕ್ಷಣ ಹೆಂಡತಿ ಮೇಲೆ ರೇಗುತ್ತಾನೆ, ನಿನ್ನಿ0ದಲೇ ಎಲ್ಲ ಆಗಿದ್ದು! ಕೋಟಿ ಯಲ್ಲಿ ಒಂದು ಪೈಸೆಯೂ ಸಿಗಲಿಲ್ಲ, ಸರಕಾರದೋರು ನನಗೆ 'ಉಂಡೆ ನಾಮ' ಇಕ್ಕದ್ರು:(((

 

ಅತ್ತ  ಸ್ಟೇಷನ್ನಿನಲ್ಲಿ  ತಲೆ ಕೆಳಗಾಗಿ ನೇತು ಹಾಕಿ, ದುಬೈ ಏರೋ ಪ್ಲೇನು ಹತ್ತಿಸಲು  ರೆಡಿ ಮಾಡಿದ್ದ  ನಾಣಿ -ಶೀನ -ಕರಿಯ ಮುನಿಯ, ಮತ್ತು ಬಡ ಬೋರ  ಒಬ್ಬ ಪೀ ಸೀ   ಸಾರ್ , ನಮ್ನ ಯಾವಾಗ್ ಬಿಡ್ತೀರ ಎನ್ನಲು, ಮಕ್ಕಳ್ರ ನೀವೇನೂ  ವೀ ಆಯ ಪಿ ಗಳು ಅನ್ಕೊಂಡ್ರ  ಬಿಡೋಕೆನಿಮಗೆ ಯಾರಾದ್ರೂ ಬೇಲು ತರೋವರ್ಗೂ  ನೀವು ಇಲ್ಲಿಯೇ, ಮೊದಲು ಕುರ್ಚೀನ ಹೇಗೆ ಕದ್ದಿರಿ ನಿಮ್ ನಾಯಕ  ಯಾರು? ನಿಮ್ಮ ಉದ್ದೇಶ ಏನಿತ್ತು ಅಂತೆಲ್ಲ ಹೇಳಿ  ಇಲ್ಲವಾದರೆ ದುಬೈ ಏರೋ ಪ್ಲೇನು ಇನ್ನು ಕೆಲವೇ  ಹೊತಿನಲ್ಲಿ ಏರಿಸಿ ಕಲಿಸುತ್ತೇವೆ..

 

 

ಸ್ಸಾರ್,

ದೇವರಾಣೆ ನಮ್ಮನ್ನ ನಂಬಿ, ಕುರ್ಚೀ ಕದ್ದಿದ್ದು ನಾವಲ್ಲ, ನಾವಲ್ಲಎನ್ನಲು

ಲೋ ಕಳ್ರ! ನಂಗೆ ಕಥೆ ಹೇಳ್ತಿರ?

ಅದ್ಕೆ ಪೋಲೀಸು - ಇಲ್ಲಿ ಬರೋರೆಲ್ಲ ಕಳ್ಳ ಅಲ್ಲ -ಕೊಲೆಗಡುಕ ಅಲ್ಲ ಅಂತಲೇ ಹೇಳೋದು ಅದ್ಕೆನೆ ನಾವು, ಉಪ್ಪು ಖಾರ, ಮಸಾಲೆ, ನಿಂಬೆ ಹಣ್ಣು, ರೆಜ್ಯರೂ , ಕಟಿಂಗ್ ಪ್ಲೆಯರು  ಇಕ್ಕಿರ್ವದು ಎನ್ನಲು,

ಅರ್ಮುಗಂ ಮತ್ತು ಸ್ನೇಹಿತ ಇಬ್ಬರನ್ನ ಬಿಟ್ಟು  ಬಾಕಿ

ಎಲ್ಲರಿಗೂ ಓಹೋ, ಪೊಲೀಸರು ಇವತ್ತು ಕೋಳೀನ  ಕೊಯ್ದು ಉಪ್ಪು ಖಾರ ಮಸಾಲೆ ಹಾಕಿ ನಮಗೆ ತಿನ್ನೋಕೆ ಅಡಿಗೆ ರೆಡಿ ಮಾಡ್ತಾವ್ರೆ ಅನ್ಕೊಂದ್ರು ಬಾಯಲ್ಲಿ ನೀರೂ ಬಂತು:))

 

ಕೊಂಚ ಹೊತ್ತಿನ ನಂತರ  ಅಲ್ಲಿಗೆ ಬಂದ - ಜನ ಪೊಲೀಸರು ಒಂದೊಂದು ದೊಣ್ಣೆ ತೆಗೆದುಕೊಂಡು  ಎಗ್ಗ ಮಗ್ಗ ಬೀಸಿದ್ದೆ ಬೀಸಿದ್ದು, ನಾಣಿ-ಶೀನ-ಕರಿಯ-ಮುನಿಯ-ಬೋರ ಆದಿಯಾಗ್ ಎಲ್ರೂ ಬಾಯ್ ಬಾಯ್ ಬಡಿದ್ಕೊಂಡುಸ್ಸಾರ್ ಹೊಡೀಬೇಡಿ, ನಮ್ನ ಬಿಟ್ ಬಿಡಿ  ನಿಮ್  ದಮ್ಮಯ್ಯ ನ್ತೀವ್  ಅಂದ್ರೂ ಕೇಳದೆ  ಮುಂದಿ ಕಾರ್ಯಕ್ರಮಕ್ಕೆ ಮುಂದಾದರು:))))

 

ರೆಜರನ್ನು  ತೆಗೆದ್ಕೊಂದು  ನಾಣಿಯ  ಕಾಲಿನ ಒಂದೆಡೆ ಗೀರಿ  ಉಪ್ಪು ಖಾರ ಹಾಕಿ ನಿಂಬೆ ಹಣ್ಣು- ಹಿಂಡಲು ಅವ್ನು ಇಡೀ ಪೋಲೀಸು  ಟಾಣೆಯ   ಸೂರು 'ಕಿತು' ಹೋಗೋ ಹಾಗೆ 'ಚೀರಿದಾಗ' ಎಲ್ರಿಗೂ ತಮ್ಮ ಗುಂಡಿಗೆ ನಿಂತ ಹಾಗೆ ಆಯ್ತು..

 

ಮೂರು ದಿನ ಚೆನ್ನಾಗಿ 'ರುಬ್ಬಿ' ದಬಾಯಿ, ಸಿ0ಗಪೂರು  ಎಲ್ಲ ಪ್ಲೇನೂ ಹತ್ತಿಸಿ ಇಳ್ಸಿ, ನೆಲಕ್ಕೆ ಇಳಿಸಿದಾಗ, ನಿಲ್ಲಲೂ  ಆಗದೆ ಕುಸಿದು ಬಿದ್ರು ಎಲ್ರೂ!.. ಆಮೇಲೆ ನಾಲ್ಕನೇ ದಿನ ವಿಷಯ  ಗೊತ್ತಾಗಿ ಊರಿಂದ ಕೆಮ್ಮೀರಪ್ಪ  ಮತ್ತು ಊರಿನ ಹಿರಿಯರು ಬಂದು ಬೇಲು ಕೊಟ್ಟು ಊರಿಗೆ  ಕರ್ದು ಕೊಂಡು ಹೋಗಿ,ಅಲ್ಲಿ ಜೀವನದಲ್ಲಿ  ಅಸೆಗೆ ಬಿದ್ರೆ ಏನು ಆಗುತ್ತೆ ಅಂತೆಲ್ಲ ಕೊರೆದೂ, ಅದು ಎಲ್ರಿಗೂ ಮನದಟ್ಟಾಗಿ, ಮೈ ಬಗ್ಗಿಸಿ ದುಡಿದು ಬದುಕುತ್ತಿದ್ದಾರೆ..

 

ಕುರ್ಚಿಗೆ ವಿಶೇಷ ಪೂಜೆ ಮಾಡಿಸಿ, ವಿಧಾನ ಸೌಧಕ್ಕೆ ಸೇರ್ಸಿ  ಇನ್ನೇನು ಹಾಯಾಗಿ ಕುಳಿತುಕೊಂಡು  ಅಧಿಕಾರ ಚಲಾಯಿಸಬೇಕು ಎಂಬ 'ನಮ್ಮ ತಾ-ಮು  ಗಳಿಗೆ , ಈಗಸ್ತೆ  ಕೃಷ್ಣ ಜನ್ಮ ಸ್ಥಾನದಿಂದ ತಾತ್ಕಾಲಿಕವಾಗಿ  ಹೊರ ಬಂದ  ಮಾಜಿ ಮು , ನಾವೇ ಮು , ಆಗಬೇಕು ಅಂತ, ಬಹಿರಂಗವಾಗಿಯೇ

  ....ಯ್.

... ಯ್  

...ರೂ      


ಯಾರೋಬರೂ ಕೆರೆ ಮಾಡದೆ  

ಹೋದಲ್ಲಿ 

ಬಂದಲ್ಲಿ, ನಾನೆ -ನಾನೇ.

.  ....... ಕು .'

ಅಂತ ಏನೆಲ್ಲಾ ಮಸಲತ್ತು -ಹಕೀಕತ್ತು ಮಾಡುತ್ತವ್ರೇ, ಅದ್ನ ನೋಡುತ ಕುರ್ಚಿ ಒಳೋಗೊಳಗೆ :)))))))...

 

ಇಸ್ಟೆಲ್ಲಾ ಆದರೂ  ನಮ್ಮ ಬಡಾ ಬೋರ ಮಾತ್ರ, ಒಮ್ಮೆ ಕುಲಿತಿದ್ದಕ್ಕೋ 'ಸಮಾಧಾನ'  ಆಗದೆ ಅದರ ಮೇಲೆ 'ಮತ್ತೆ'ಹತ್ತಿ ಕೂರಲೆ ಬೇಕು ಅಂತ, ನಿರ್ಧರಿಸಿ ಮುಂದಿನ ವಿಧಾನ ಸಭೆ ಚುನಾವಣೆಗೆ  'ಪಕ್ಚೆತರ'ಅಭ್ಯರ್ಥಿ ಆಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾನೆ..

 

ಒಬ್ಬ ಪಕ್ಚೆತರ ಶಾಸಕ 'ಮುಖ್ಯಮಂತ್ರಿ' ಆಗಲು ಸಾಧ್ಯವಿಲ್ಲ ಎಂಬುವವರ ಬಾಯಿ ಮುಚ್ಚಿಸಲು, 'ಝಾರ್ಖಂಡರಾಜ್ಯದ 'ಮಧು ಕೊಡಾ' ಅವ್ರ   ಉದಾಹರಣೆ ಕೊಡ್ತವ್ನೆ.. !! 

ಯಾರಿಗ್ಗೊತ್ತು ದೇಶದಲ್ಲಿ

ಯಾರು

ಯಾವಾಗ

ಹೆಂಗೆ

ಏನು

ಬೇಕಾರ ಆಗಬಹುದು:)))

 

ಕುರ್ಚಿಯ ಕಥೆ ಇಲ್ಲಿಗೆ  'ಸಂಪನ್ನವಾಯಿತು'.....

 

------------------------------------------------------------------------------------------------

 

ಚಿತ್ರ ಮೂಲ :

http://www.modernchairdesign.com/

http://www.cribfashion.com/