ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್

ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್

Comments

ಬರಹ

ಪಂಪನು ರಚಿಸಿದ ಮಹಾಭಾರತ ಮಹಾಕಾವ್ಯದ ಈ ಸಾಲು ಭೀಷ್ಮನ ಬಾಯಿಂದ ಬರುತ್ತದೆ. ದುರ್ಯೋಧನನ ಹೆಗಲೆಣೆಯಾಗಿ ಆತ್ಮೀಯ ಮಿತ್ರನಾಗಿ ಪ್ರೀತಿಯ ಸಖನಾಗಿದ್ದ ಕರ್ಣನು ಪಾಂಡವರ ವಿರುದ್ಧದ ಕೌರವರ ಯುದ್ಧದಲ್ಲಿ ಸೇನಾ ನಾಯಕತ್ವ ತನಗೇ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ. ಆದರೆ ಆ ಪಟ್ಟವನ್ನು ಎಲ್ಲರೂ ಸೇರಿ ಭೀಷ್ಮನಿಗೆ ವಹಿಸಿದಾಗ ಅವನಿಗೆ ತೀವ್ರ ಅಸಮಾಧಾನವಾಯಿತು. ಮುದುಕನಾಗಿರುವ ಭೀಷ್ಮ ಚುರುಕಾಗಿ ಕೆಲಸ ಮಾಡಲಾರ, ಪಾಂಡವರಿಗೆ ಆತ ಪರೋಕ್ಷವಾಗಿ ಸಹಾಯ ಮಾಡಲೂಬಹುದು, ತನ್ನಂತಹ ಯುವಕರಿಗೆ ಪಟ್ಟ ಕಟ್ಟಿದರೆ ಏನು ಬೇಕಾದರೂ ಸಾಧಿಸಬಲ್ಲೆವು ಎಂಬುದು ಆತನ ಅಭಿಪ್ರಾಯ.
ಆದರೆ ಭೀಷ್ಮ ನೀಡುವ ಮಾರ್ಮಿಕ ಉತ್ತರ ಇಂದಿನ ಜಗತ್ತಿಗೂ ಅನ್ವಯಿಸುತ್ತದೆ. ಪಾಂಡವರು ಅತಿರಥ ಮಹಾರಥರು. ಸಾತ್ವಿಕ ಮನೋಭಾವ ಹೊಂದಿದ ಅವರಿಗೆ ದೈವಬಲವೂ ಇದೆ. ಅವರೆದುರು ಯಾರೊಬ್ಬನೂ ಸತತವಾಗಿ ನಿಂತು ಯುದ್ಧ ಮಾಡಲಾಗದು.
ಜೀವನ ಎನ್ನುವ ರಣರಂಗದಲ್ಲಿ ಎಲ್ಲರಿಗೂ ತಮ್ಮ ಸರದಿ ಬಂದೇ ಬರುತ್ತದೆ. ಆ ಚಾನ್ಸ್ಗಾಗಿ ಕಾಯಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 5 (1 vote)
Rating
Average: 5 (1 vote)