ಸ್ಟೇಟಸ್ ಕತೆಗಳು (ಭಾಗ ೧೩೩೩) - ಬಾಗಿಲು

ಅಲ್ಲಿ ಹಾದು ಹೋಗುವುದ್ದಕ್ಕೆ ಇರೋದು ಒಂದೇ ಬಾಗಿಲು. ಅಲ್ಲಿ ಸಾಗುವ ಎಲ್ಲರೊಳಗೆ ಒಂದೊಂದು ಭಾವ ಸಮ್ಮಿಳಿತವಾಗಿದೆ. ಅವರೊಬ್ಬರ ಮುಖದಲ್ಲಿ ದುಗುಡ, ಆಸ್ಪತ್ರೆಯ ಒಳಗೆ ಬಂದು ಆರೋಗ್ಯ ಸುಧಾರಿಸುವುದ್ದಕ್ಕೆ ಸೇರಿಯಾಗಿದೆ ಈಗ ಹಣ ಹೊಂದಾಣಿಕೆ ಹೇಗೆ, ಇನ್ನೊಬ್ಬರು ಹಣದ ಬಗ್ಗೆ ಯೋಚನೆಯೇ ಇಲ್ಲ, ನನ್ನಣ್ಣ ಉಸಿರು ನಿಲ್ಲಿಸದಿದ್ದರೆ ಸಾಕು, ಅಪ್ಪ ನಿನ್ನೆಯಿಂದ ಮಾತನಾಡುತ್ತಿಲ್ಲ ಅಲ್ಲೇ ಮಲಗಿಬಿಟ್ಟಿದ್ದಾರೆ ಯಾಕೆ? ನಮ್ಮ ಮನೆಗೆ ನಂದಾದೀಪ ಕಾಲಿಟ್ಟಿದೆ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ದೇವರೇ ಬೇಡಿದ್ದನ್ನ ಕರುಣಿಸಿದ್ದೀಯಾ, ಸದ್ಯ ಹೊರಗೆ ಬಂದಿದ್ದೇವೆ ಇನ್ನು ಸದ್ಯಕ್ಕೆ ಇದರೊಳಕ್ಕೆ ಬರುವುದೇ ಬೇಡ, ಹಸಿವು, ಭಯ, ನೋವು, ದುಃಖ, ಖಿನ್ನತೆ, ಗೆಲುವು, ತ್ಯಾಗ, ಮಮತೆ, ಹೀಗೆ ಭಾವಗಳೆಲ್ಲಾ ಇದೇ ಬಾಗಿಲೊಳು ಹಾದು ಹೋಗುತ್ತಿವೆ. ಬಾಗಿಲು ಮತ್ತೆ ಕೇಳಿಕೊಳ್ಳುತ್ತಿದೆ, ಹಾದು ಹೋಗುವವರಿಗೆ ಒಳಿತಾಗಲಿ ಎಂದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ