ಸ್ಟೇಟಸ್ ಕತೆಗಳು (ಭಾಗ ೪೧೦) - ಅಳಿಲು

ಸ್ಟೇಟಸ್ ಕತೆಗಳು (ಭಾಗ ೪೧೦) - ಅಳಿಲು

ಆಹಾರಕ್ಕಾಗಿ ಹಣ್ಣುಗಳನ್ನೇ ಅವಲಂಬಿಸಿರುವ ಅಳಿಲಿಗೆ ಗೊತ್ತಿತ್ತು ತಿನ್ನುವುದಷ್ಟೇ ನನ್ನ ಹಕ್ಕಲ್ಲ, ಇದರ ಬೀಜ ನೆಲದೊಳಕ್ಕೆ ಇಳಿದು ಮರವಾಗಿ ಬೆಳೆದು ಮುಂದಿನ ಜನಾಂಗಕ್ಕೆ ದಾಟಿಸಬೇಕಾದ ಜವಾಬ್ದಾರಿ ನನ್ನದು ಎಂದು ಹಾಗಾಗಿ, ಹಣ್ಣುಗಳನ್ನು ತಿಂದು ಬೀಜಗಳನ್ನು ಎಲ್ಲೆಲ್ಲೋ ಮತ್ತೆ ತಿನ್ನಬೇಕು ಅಂತ ಬಚ್ಚಿಡುತ್ತಿತ್ತು. ಅದು  ಮರೆತು ಬೀಜ ಅಲ್ಲೇ ಮರವಾಗುತ್ತಿತ್ತು. ಒಂದು ದಿನವೂ ಬೀಜಗಳನ್ನು ಅದು ಕಲ್ಲಿನ ಮೇಲೆ ಇಡಲಿಲ್ಲ ಹದವಾದ ಮಣ್ಣಿನ ಮೇಲಿರುತ್ತಿತ್ತು. ಹಾಗಾಗಿ ಹಲವಾರು ಮರಗಳು ಗಟ್ಟಿಯಾಗಿ ಎದ್ದು ನಿಂತಿದ್ದಾವೆ. ಅಳಿಲು ಒಂದು ದಿನವೂ ಕಾಡಿನಲ್ಲಿರುವ ಅಷ್ಟು ಮರಗಳನ್ನು ನೆಟ್ಟದ್ದು ನಾನು ಇದರಲ್ಲಿರುವ ಹಣ್ಣುಗಳನ್ನು ತಿನ್ನುವ ಹಕ್ಕು ನನಗೆ ಮಾತ್ರ ಇರೋದು ಹಾಗಾಗಿ ಉಳಿದವರನ್ನೆಲ್ಲ ಇಲ್ಲಿಂದ ಓಡಿಸಿ ನಾನೇ ಬದುಕುತ್ತೇನೆ ಅನ್ನು ಯೋಚನೆಯನ್ನು ಕೂಡ ಮಾಡಲಿಲ್ಲ. ತನ್ನ ದಿನದ  ಆಹಾರಕ್ಕಾಗಿ ಹಣ್ಣು ಸೇವಿಸಿ ಉಳಿದದ್ದನ್ನು ಬೀಜವನ್ನ ಅಲ್ಲೇ ತೊರೆದು ಹೊರಟುಹೋಗಿದೆ. ಕಾಡನ್ನು ಅವಲಂಬಿಸಿರುವ ಆ ಪುಟ್ಟ ಪ್ರಾಣಿಗೆ ಕಾಡಿನ ಬಗ್ಗೆ ಅರಿವಿರುವಾಗ ದಿನವೂ ಉಸಿರಾಡುತ್ತಾ ಹಲವು ವರ್ಷ ಬದುಕುವ ನಮಗೆ ಈ ಯೋಚನೆ ಮೂಡದಿರುವುದು ಯಾಕೆ? ಓದುವಿಕೆ, ದುಡ್ಡು ಸಂಪಾದನೆ ನಮ್ಮೊಳಗೆ ಆಲೋಚಿಸುವ ಶಕ್ತಿಯನ್ನೇ ಕಳೆದಿದೆಯಾ?  ಅಥವಾ ಎಲ್ಲವೂ ಕಲಿತಿದ್ದರೂ ಮನುಷ್ಯನಾದವ ಸರ್ವಾಂತರ್ಯಾಮಿ ಸರ್ವಶಕ್ತ ಹಾಗಿರುವಾಗ ಪರಿಸರದ ಬಗ್ಗೆ ನಾನೇಕೆ ಆಲೋಚನೆ ಮಾಡಲಿ ಎನ್ನುವ ಅಸಡ್ಡೆಯೋ ಗೊತ್ತಿಲ್ಲ .ಒಟ್ಟಿನಲ್ಲಿ ಕಲಿಯೋದು ತುಂಬಾ ಇದೆ ಆದರೂ ಕಲಿಯುತ್ತಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ