ಸ್ಟೇಟಸ್ ಕತೆಗಳು (ಭಾಗ ೭೧೨) - ಮನೆ ಮನ

ಮನೆ ಕಟ್ಬೇಕು ಅಂತ ಅವರು ನಿರ್ಧಾರ ಮಾಡಿದರು. ಸಾಲ ಸೋಲ ಮಾಡಿಕೊಂಡು ತಮ್ಮ ಕನಸಿನ ಮನೆಗೆ ಅಡಿಪಾಯ ಹಾಕಿ ನೆಲದಿಂದ ಏರಿಸುವುದಕ್ಕೆ ಪ್ರಾರಂಭ ಮಾಡಿದರು. ವಿಧಿಯ ಕ್ರೂರತೆಯಿಂದ ಆಧಾರವಾಗಿದ್ದ ಗಂಡ ದೈವಾಧೀನರಾದರು. ಗಂಡನ ಕನಸುಗಳಿತ್ತಲ್ವಾ ಆ ಹೆಣ್ಣು ಕೆಲಸವನ್ನು ಮುಂದುವರಿಸುವುದಕ್ಕೆ ಯೋಚನೆ ಮಾಡುತ್ತಾ ಹೋದ್ರು ಆದರೆ ಬೇಕಾದ ದುಡ್ಡಿನ ವ್ಯವಸ್ಥೆ ಸರಿಯಾಗಿರಲಿಲ್ಲ. ಮಕ್ಕಳು ತಮ್ಮ ಶಿಕ್ಷಣವನ್ನು ಮುಗಿಸಿ ಯಾವುದೋ ಕೆಲಸಕ್ಕೆ ಸೇರಿದ್ರು ಕೂಡ ಅದರಿಂದ ಬರುವ ಆದಾಯದಿಂದ ಮನೆಯನ್ನ ಮೇಲೆ ತರುವುದಕ್ಕೆ ಆಗಲಿಲ್ಲ. ದಿನಗಳು ಉಳಿದಂತೆ ಆ ಹೆಣ್ಣಿಗೆ ಒಂದಷ್ಟು ಮಾನಸಿಕ ತೊಂದರೆಗಳು ಕಾಣಿಸಿಕೊಂಡವು. ಮನೆಯಲ್ಲಿ ಏನೇನೋ ಮಾತನಾಡಿಕೊಳ್ಳುವುದು, ಅಲ್ಲೇ ಅಡ್ಡಾಡ್ತಾ ಇರೋದು, ಎಲ್ಲಾದರೂ ನಡೆದುಕೊಂಡು ಹೋಗುವುದು, ಹೀಗೆ ದಿನದ ದಿನಾಚರಣೆಗಳು ಬದಲಾಗಲು ಎಲ್ಲರೂ ಹೆದರಿ ವಿವಿಧ ರೀತಿಯ ಪ್ರಯತ್ನಗಳನ್ನ ಪಟ್ಟರೂ ಕೂಡ ಅವರು ಸರಿಯಾಗಲಿಲ್ಲ. ಯಾರೋ ತಿಳಿದವರೊಬ್ಬರು ಮನೆಯನ್ನ ಪೂರ್ತಿಯಾಗಿ ಕಟ್ಟಿ ಕೊಡುವ ಜವಾಬ್ದಾರಿಯನ್ನು ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಮನೆಯನ್ನು ಮೇಲೆತ್ತುವ ಕೆಲಸವನ್ನು ಆರಂಭ ಮಾಡಿದರು. ಅಂದಿನಿಂದ ಮಾನಸಿಕರಾಗಿ ಅಸ್ವಸ್ಥರಾಗಿದ್ದ ಆ ಮನೆಯ ಹೆಂಗಸು ಬದಲಾವಣೆಗೆ ಬಗ್ಗಿಕೊಂಡರು. ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ದೊಡ್ಡ ಕೆಲಸ ಒಂದರ ಕಡೆಗೂ ಕೈ ಹಾಕಿಬಿಟ್ಟರು. ಮನೆ ಕಟ್ಟಿ ನಿಂತಾಗ ಮೊದಲಿಗಿಂತಲೂ ಆರೋಗ್ಯವಂತರಾಗಿ ಅದ್ಭುತವಾಗಿ ಬದಲಾಗಿ ಬಿಟ್ಟರು. ಮನದೊಳಗೆ ಮನೆಯನ್ನ ಕಟ್ಟುವ ಯೋಚನೆ ಗಾಢವಾದ ಕಾರಣ ಮನಸ್ಸು ಸ್ಥಿಮಿತ ಕಳೆದುಕೊಂಡಿದ್ದು ಕಣ್ಣ ಮುಂದೆ ಮನೆ ನಿಂದಾಗ ಮನಸ್ಸು ಸರಿಯಾಯ್ತು. ಕೆಲವೊಂದು ಸಲ ದೇಹವನ್ನು ಮನಸ್ಸು ಅಲ್ಲಾಡಿಸಿ ಬಿಡುತ್ತೆ. ಹೇಳಿದ ಕಾರ್ಯವನ್ನ ಗಟ್ಟಿ ನಿಂತು ಮಾಡುವುದೇ ಆರೋಗ್ಯದ ಮೊದಲ ಗುಟ್ಟು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ