ಸ್ಟೇಟಸ್ ಕತೆಗಳು (ಭಾಗ ೭೨೧) - ಒಡಲ ನುಡಿ

ನನ್ನ ಕೆಲಸ ಈ ನೆಲಕ್ಕೆ ಬಿದ್ದಿದ್ದನ್ನು ಮರವಾಗಿ ಬೆಳೆಸುವುದು. ನನ್ನ ನೆಲದಿಂದ ಒಳಿತನ್ನೇ ನೀಡುತ್ತೇನೆ ಹೊರತು ಹಾನಿಯನ್ನು ಮಾಡಿದವನಲ್ಲ. ಹಾನಿಯನ್ನು ಬಯಸಿದವನಲ್ಲ. ಆದರೆ ಇತ್ತೀಚಿಗೆ ಹಲವರು ಹಲವು ರೀತಿ ಮಾತನಾಡುತ್ತಿದ್ದಾರೆ." ಆ ಸ್ಥಳದಲ್ಲಿ ಕಸ ತುಂಬಿಕೊಂಡು ನಡೆಯೋಕಾಗುತ್ತಿಲ್ಲ, ಕಸ ತುಂಬಿಕೊಂಡ ಈ ನೆಲ ಅದೆಲ್ಲ ತನ್ನ ಮೇಲೆ ಸುರಿದುಕೊಂಡು ಜನರಿಗೆ ಯಾಕೆ ಇಷ್ಟು ಹಿಂಸೆ ಕೊಡುತ್ತಿದೆ. " ನಾನು ನೆಲ ಈ ನೆಲದಿಂದ ಒಳಿತನ್ನೆ ಜಗತ್ತಿಗೆ ನೀಡುತ್ತೇನೆ ಹೊರತು ಯಾವತ್ತೂ ಕಸ ಕಡ್ಡಿಗಳನ್ನ ಹಂಚುವುದಿಲ್ಲ. ನೀವು ಚೆಲ್ಲಿದ ಕಸಗಳನ್ನ ನನ್ನ ಸುಪರ್ದಿಗೆ ಸೇರಿಸೋಕಾಗುತ್ತಾ? ಎಲ್ಲೆಂದರಲ್ಲಿ ಚೆಲ್ಲಿ ನನ್ನನ್ನ ಮಲಿನಗೊಳಿಸಿ ಮತ್ತೆ ನನ್ನದೇ ತಪ್ಪು ಎನ್ನುವ ರೀತಿ ಮಾತನಾಡುವುದು ಎಷ್ಟು ಸರಿ. ನಾನೇ ಅವತ್ತು ನನ್ನ ಒಡಲಿನಿಂದ ಕಸಗಳನ್ನ ಸೃಷ್ಟಿಸುವುದಿಲ್ಲ. ಶುದ್ಧವಾದ ಪರಿಸರವೊಂದಕ್ಕೆ ಪೂರಕವಾಗಿರುವ ವಿಚಾರಗಳನ್ನು ಮಾತ್ರ ಸೃಜಿಸಿ ನೀಡುತ್ತೇನೆ... ಮಾತನಾಡುವ ಮುನ್ನ ಎಚ್ಚರ. ನನ್ನ ತಪ್ಪಿಲ್ಲದಾಗ ನಾನು ತಲೆ ತಗ್ಗಿಸುವುದಿಲ್ಲ... ಇದು ಒಡಲ ಮಾತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ