ಸ್ಟೇಟಸ್ ಕತೆಗಳು (ಭಾಗ ೮೬೫)- ಜನ

ಊರ ಹೊರಗೆ ಆಗಾಗ ಸೇರಿದಾಗ ಅವರು ಮಾತನಾಡುತ್ತಾರೆ. ಅವರು ಈ ನೆಲವನ್ನ ನಂಬಿಕೊಂಡು ಬದುಕಿದವರು. ಹಲವಾರು ವರ್ಷಗಳಿಂದ ಕೃಷಿಯನ್ನೇ ಮಾಡ್ತಾ ತಮ್ಮ ಜೀವನವನ್ನು ರೂಪಿಸಿಕೊಂಡವರು. ಊರಿನಲ್ಲಿ ಕೆಲಸಕ್ಕೆ ಜನ ಸಿಗೋದಿಲ್ಲ ಅನ್ನೋದೇ ಅವರ ದೊಡ್ಡ ವಾದ. ಸರಿಯಾದ ಸಮಯಕ್ಕೆ ಕೃಷಿ ಕೆಲಸವನ್ನು ನಿರ್ವಹಿಸದಿದ್ದರೆ ಆ ಬೆಳೆ ಹಾಳಾಗಿ ಹೋಗುತ್ತದೆ ಅದಕ್ಕಾಗಿ ಜನರ ಅವಶ್ಯಕತೆ ಬೇಕು. ಅದಲ್ಲದೆ ಆ ಊರಿನಲ್ಲಿ ಕೃಷಿ ಕೆಲಸವನ್ನೇ ನಂಬಿಕೊಂಡ ಹಲವು ಜನ ಅದನ್ನು ಹಾಗೆ ಬಿಟ್ಟು ಪೇಟೆ ಕಡೆಗೆ ಹೊರಟುಬಿಟ್ಟಿದ್ದಾರೆ. ಹೀಗಿರೋ ಊರಿನಲ್ಲಿ ಇತ್ತೀಚಿಗೆ ಕೃಷಿ ನೀತಿಯ ವಿರುದ್ಧ ಪ್ರತಿಭಟನೆಗೆ ಜನ ಸೇರಿದರು ಸೇರಿದವರ ಘೋಷಣೆಗಳು ಹೋರಾಟದ ಕಿಚ್ಚುಗಳನ್ನು ಗಮನಿಸಿದಾಗ ಈ ನೆಲದ ಕೃಷಿಯ ಸತ್ವಗಳು ಇನ್ನೂ ಬದುಕಿದ್ದವಲ್ಲ ಅನ್ನುವ ಖುಷಿ ಸ್ವಲ್ಪ ಜನರಿಗೆ. ಆದರೆ ಇವರು ದಿನಂಪ್ರತಿಯ ಕೆಲಸದಂತೆ ಬೆಳಗ್ಗೆ ಗದ್ದೆ ಕಡೆಗೆ ಹೊರಟು ಆ ದಿನ ಕೆಲಸಕ್ಕೆ ಯಾರು ಬರುವರು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಅಷ್ಟು ಜನ ಕೃಷಿಯ ವಿರೋದದ ಪ್ರತಿಭಟನೆಗೆ ಸೇರಿದರೂ ಕೆಲಸಕ್ಕೆ ಯಾಕೆ ಯಾರು ಸಿಗುತ್ತಿಲ್ಲ ಅವರ ಪ್ರಶ್ನೆಗೆ ಇನ್ನೂ ಉತ್ತರ ಸಿಗದೆ ಮೌನವಾಗಿದ್ದಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ