ಸ್ಟೇಟಸ್ ಕತೆಗಳು (ಭಾಗ ೮೯೩)- ತಪ್ಪಿದ ಮಾತು

ಆತ ಉತ್ತಮ ಮಾತುಗಾರ ಅಷ್ಟು ಮಾತ್ರವಲ್ಲ ಹಲವಾರು ವಿಚಾರಗಳನ್ನ ಜನರಿಗೆ ಸುಲಭವಾಗಿ ಅರ್ಥ ಮಾಡಿಸುವುದು ಕೂಡ ಅವನಿಗೆ ತಿಳಿದಿತ್ತು. ಸಮಾಜದ ಹಲವು ಸಮಸ್ಯೆಗಳನ್ನ ಆತ ನೇರವಾಗಿ ಜನರಿಗೆ ಅರ್ಥ ಮಾಡಿಸ್ತಾ ಇದ್ದ. ಅದರಿಂದ ಜನ ಬದಲಾಗುತ್ತಿದ್ದರು. ಇತ್ತೀಚೆಗೆ ಆತ ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಲಾರಂಭಿಸಿದ. ಅಲ್ಲಲ್ಲಿ ನಾಟಕಗಳನ್ನ ಮಾಡ್ತಾ ರಸ್ತೆಯಲ್ಲಿ ಹೇಗೆ ಚಲಿಸಬೇಕು, ಚಲಿಸುವಾಗ ಹೆಲ್ಮೆಟ್ ಧರಿಸಬೇಕು, ವಿಪರೀತ ವೇಗ ಒಳ್ಳೆಯದಲ್ಲ, ಹೀಗೆ ಜನರ ಒಳಿತಿಗಾಗಿ ಮಾತು ನಾಟಕ ನೃತ್ಯ ಇನ್ನಿತರ ವಿವಿಧ ಅಭಿ ವ್ಯಕ್ತಿಗಳನ್ನ ಬಳಸಿಕೊಂಡ ಮಾಹಿತಿ ನೀಡಲಾರಂಬಿಸಿದ. ಆದರೆ ಇನ್ನು ಮುಂದೆ ಆತ ಯಾವುದೇ ಜನರಿಗೆ ಪೂರಕವಾದ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕಾರಣ ಊರ ಹೊರಗಡೆ ಆತ ವಿಪರೀತ ವೇಗದಲ್ಲಿ ಹೆಲ್ಮೆಟ್ ಧರಿಸದೇ ಹೋಗುತ್ತಿದ್ದಾಗ ಆದ ಅಪಘಾತ ತೀವ್ರತೆಗೆ ತಲೆಗೆ ಪೆಟ್ಟು ಬಿದ್ದು ಕೊನೆ ಉಸಿರುಳಿದಿದ್ದ... ಜನರಿಗೆ ಸಂದೇಶ ಕೊಡುವುದಕ್ಕೆ ಮುಂದೆ ಹೆಜ್ಜೆ ಇಟ್ಟವ ಅದನ್ನು ಅಳವಡಿಸಿಕೊಳ್ಳದೇ ಮಾತು ತಪ್ಪಿದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ