ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಅಹಂ

ಮನುಜ

ನಾನೇ

ನನ್ನಿಂದ

ಯಾಕೆ

ಹೇಳುವನೋ

ತಿಳಿಯೆ !

ಅವನೆಷ್ಟೇ

ದೊಡ್ಡವನಾದರೂ

ಎಲ್ಲರೆದುರು

ಸಣ್ಣವನಾಗುತ್ತಾನೆ

ಕೊನೆಗೆ

ಮಾಯವಾಗುತ್ತಾನೆ !

***

ಸಾಹಿತ್ಯ ಬರೆವಾಗ ಕೆಲಸದ 

ಒತ್ತಡ ಇರಬಾರದು

ಇದ್ದವಗೆ ಅವನ ಹತ್ತಿರ 

ಸಾಹಿತ್ಯವೆಂದೂ ಬಾರದು

***

ಮಂಜಿನ ಸಂಚಿನಿಂದ 

ಕಲಿತದ್ದೆಲ್ಲ ಮಾಯ

ಇದರಿಂದಾಗಿದೆ ಮನಸ್ಸಿಗೆ 

ತುಂಬಾ ಘಾಯ

***

ಕವಿಯ ಕಲ್ಪನೆಯ ಲೇವಡಿಯ ಮಾಡುವರು

ತಮ್ಮದೇ ದಾರಿಯಲಿ ನಡೆವ ಗಜರಿವರು

ಹೊತ್ತು ಮುಳುಗಿದ್ದೂ , ಬೆಳಕಿಹುದು ಎನ್ನುವರು

ಕವಿ ಬರಹಗಳ ತತ್ವವ ಮರೆತು ಕಾರುವರು !

 

ನಮ್ಮ ಬಗ್ಗೆ ಇಲ್ಲದ್ದು ಸಲ್ಲದ್ದು ಹೇಳುವವರು ಹೇಳುತ್ತಲಿರಲಿ ಬಿಡಿ , 

ಇದರ ನಡುವೆಯೇ ನಮ್ಮಷ್ಟಕ್ಕೆ ನಾವು ನಮ್ಮ ಮುಂದಿನ ಗುರಿಯತ್ತ 

ಮೌನವಾಗೇ ಸಾಗೋಣ ಮತ್ತು 

ಅದರಲ್ಲಿ ಯಶಸ್ವಿಯಾಗೋಣ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್