ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಲೋಕದ ಜನ

ಡೊಂಕೆನ್ನದಿರಿ

ನಮಗೆ ನಾವೇ

ಡೊಂಕು ಬಾಳಲಿ !

***

ಕೊಡು ಬೆಳಕ 

ಕರ್ಪೂರದಂತೆ,ಈಶಾ

ಜಗದೊಳಗೆ !

***

ಕಾಮ ಜ್ವರಕೆ

ಮದ್ದಿಲ್ಲವೊ ನೀ ತಿಳಿ

ಸಂನ್ಯಾಸಿಯಾಗೊ !

***

ಬಡ ಕವಿಯು

ಸಿರಿವಂತ ಕವಿಯ

ಗುಲಾಮನಯ್ಯಾ !

***

ಕವಿಗಳಲ್ಲೂ

ಎರಡು ವಿಧವಯ್ಯಾ

ಜಾತಿ ವಿಜಾತಿ !

***

ಕಪ್ಪೆಗಳಂತೆ

ವಟಗುಟ್ಟುತ್ತಲಿರೇ

ಕವಿಪುಂಗವ !

***

ಮಣ್ಣಿನಡಿಯೆ

ಬೆಳ್ಳಿ ಬಂಗಾರ ಸಿಗೆ

ನಮಗೆ ಹೊಗೆ !

***

ಗಝಲ್

ನಾದವಿರದ ಕೊಳಲಿಂದ ಏನು ಪ್ರಯೋಜನ

ಪ್ರೀತಿಯಿರದ ಸವಿಯಿಂದ ಏನು ಪ್ರಯೋಜನ

 

ಕಚ್ಛೆಯನ್ನು ಕಟ್ಟಿದರೂ ಹುಚ್ಚರಿಹರಿಲ್ಲಿ ಏಕಿಂದು

ಸ್ವಂತಿಕೆಯಿಲ್ಲದ ಮಡಿಯಿಂದ ಏನು ಪ್ರಯೋಜನ

 

ಮನವಿದ್ದರೂ ಹತ್ತುತಲೆ ರಾವಣರೇ ತುಂಬಿಹರು

ಚೈತ್ರವಿರದಿಹ ನೆಲೆಯಿಂದ ಏನು ಪ್ರಯೋಜನ

 

ಒಬ್ಬರನೊಬ್ಬರು ತುಳಿಯಲು ಹೊರಟಿದ್ದು ಏತಕೊ

ವಿಚಿತ್ರವೆನಿಸುವ ನುಡಿಯಿಂದ ಏನು ಪ್ರಯೋಜನ

 

ಸಾರವಿಲ್ಲದ ಬದುಕದುವೇ ಕಾಣುತಿದೆ ಈಶಾ

ತೃಪ್ತಿಯಿಲ್ಲದ ನಡೆಯಿಂದ ಏನು ಪ್ರಯೋಜನ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್