ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಯಾವ 

ನೋವು 

ಮಾನವನಿಗೆ 

ನಗಣ್ಯ 

ಆದರೆ 

ಹಲ್ಲು ನೋವು

ಮಾತ್ರ

ಬದುಕನ್ನೆ 

ಅಲ್ಲಾಡಿಸಿ

ಜಾಡಿಸುತ್ತದೆ !

*

ನಾನೂ 

ಮಂತ್ರಿಯಾಗ

ಬೇಕು 

ಅಂದು

ಕೊಂಡೆ 

ಆಗಲಿಲ್ಲ 

ಕಾರಣ 

ಭ್ರಷ್ಟಾಚಾರ 

ನನಗೆ 

ತಿಳಿದಿಲ್ಲ !

*

ನಿನ್ನೆಯವರೆಗೂ

ಚಾಯ

ಮಾರತಿದ್ದ 

ನನ್ನ

ತಮ್ಮ

ಇಂದು 

ನಾಯಕ !

*

ದೇವರ

ದಯೆ

ಜೊತೆಗೆ

ನಮ್ಮ

ಮನೋಸ್ಥೈರ್ಯ

ಎರಡೂ

ಸೇರಿದಾಗ 

ಬಾಳು

ಬಂಗಾರ

ಬದುಕು

ಸಿಂಗಾರ !

*

ಅಂದು

ದೇವ 

ಮಾನವ

ಸರಿ 

ಕೂಸೇ !

ಇಂದು 

ದೆವ್ವ 

ವೇ

ಮಾನವ !

*

ಬೆಟ್ಟದ 

ಕೆಳಗೆ

ನಿಂತು 

ನಲ್ಲೆಗೆ

ಹೇಳಿದೆ

ನಿನ್ನ ಮೇಲಿನ

ಪ್ರೀತಿ 

ಬೆಟ್ಟದ 

ತುದಿಯಷ್ಟು

ಅದಕ್ಕವಳಂದಳು

ನೀ ತಾಳಿ 

ಕಟ್ಟುವ ಸಮಯಕ್ಕೆ

ನಾ ಮುದುಕಿ 

ನೀ ಮುದುಕ !

*

ಬದುಕಲು

ಅರಿಯದವರು

ಸತ್ತರು

ಸತ್ತವರು 

ಬದುಕಲಾರರು !

*

ಕಲಿಯಗದ

ಅಂತ್ಯಕ್ಕೆ 

ಸುಳ್ಳು 

ಸತ್ಯವಾಗುತ್ತದೆ 

ಸತ್ಯ

ಸುಳ್ಳಾಗುತ್ತದೆ !

*

ಬದುಕು

ಬಂದಂತೆ

ಸ್ವೀಕರಿಸು

ತತ್ವ

ಜ್ಞಾನಿಯಾಗುವೆ !

*

ಬದುಕು 

ಇರಲಾರದ

ಬದುಕಿನಲ್ಲಿ

ಬದುಕು

ಬಾರದು

ಬದುಕ

ಲಾ

ದು !

*

ಯಾರು ಕೇಳಲೇ ಬಾರದೆಂದು

ಕಾಡಿಗೆ ಹೋದರೆ ಕಾಡು ಪ್ರಾಣಿಗಳು

ನನ್ನನ್ನು ಸುತ್ತುವರಿದು ಗುರಾಯಿಸಿ

ಊರು ಹಾಳು ಮಾಡಿದ್ದು ಸಾಲದ್ದೆಂದು

ಕಾಡು ಹಾಳು ಮಾಡಲು ಬಂದೆಯಾ

ಎನ್ನುತ್ತಾ ನನ್ನನೆತ್ತಿ ಊರಿನಂಚಿಗೆ

ತಂದು ಬೀಸಿ ಒಗೆದು ಹೋದವು

ಕನಸು ಬಿರಿದು ನೋಡುತ್ತೇನೆ 

ಚಾಪೆಯ ಮೇಲೆ ಮಲಗಿದ್ದೆ ಹಾಯಾಗಿ !

*

ಭಾರತೀಯರು ನಾವು ಒಂದೇ

ಎಂದು ಯಾವತ್ತೂ ಹೇಳಬಾರದಂತೆ

ಕಾರಣ ವಿದೇಶಿ ಬಂಡವಾಳ

ನಮ್ಮಲ್ಲಿಯ ಧಾರ್ಮಿಕ ರಾಜಕೀಯ ಮಂದಿಗೆ

ಹರಿದು ಬರೋದಿಲ್ವಂತೆ !!

*

ನಾನು ಮಾಡಿದೆ

ಎಂಬುವುದು

ಏಕವಚನ

ನಾವು ಮಾಡಿದೆವು

ಬಹುವಚನ

ರಾಜಕೀಯ

ನೇತಾರರೆ

ನಿಮ್ಮ ಮಾತಲ್ಲಿ

ಬಹುವಚನವಿರಲಿ !

 

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್