ಹನಿಗಳೊಂದಿಗೆ ಪಯಣ...

ಹನಿಗಳೊಂದಿಗೆ ಪಯಣ...

ಕವನ

ಯೋಗ್ಯತೆಯ ಪಯಣ...

 ಪ್ರೀತಿ-ಮರ್ಯಾದೆ

ಗೌರವ-ಸನ್ಮಾನಗಳು

     ತಾವಾಗಿಯೇ

     ಸಹಜವಾಗಿ

        ನಮ್ಮತ್ತ

       ಬರಬೇಕು...

    ಬಲವಂತವಾಗಿ

    ಉನ್ಮತ್ತತೆಯಲಿ

   ಅವುಗಳನೆಂದೂ

       ಪಡೆಯಲು

         ಅಸಾಧ್ಯ;

    ಆ ಯೋಗ್ಯತೆಯ

     ಸಂಪಾದನೆಯತ್ತ

ನಮ್ಮ ಪಯಣವಿರಲಿ

***

ದೌರ್ಭಾಗ್ಯ

ವೃದ್ಧಾಪ್ಯ

ಬಂದಾಗಲೇ

ವೃದ್ಧರ

ಕಷ್ಟದ

ಅರಿವು....

 

ಅಯ್ಯೋ

ವಿಧಿಯೇ

ಅಷ್ಟರಲ್ಲಾಗಲೇ

ಕಾಲದ

ಸರಿವು!

***

ಮಾರ್ಜಾಲ!

ತೌರು ನೆಲದ

ಪ್ರೀತಿಯದು ಉಕ್ಕಿ

ಮರಣವನೂ

ನೆನಪಿಸಿ

ಮತದಾರರನು

ಭಾವ ಸಮುದ್ರದಲಿ

ಮುಳುಗಿಸಿ

ಓಟನು ಕಸಿಯುವ

ಓ ಚುನಾವಣೆಯೇ

ನೀನದೆಂತಹ

ಮಾರ್ಜಾಲ

ಕಪಟ ಸನ್ಯಾಸಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್