ಹನಿಗಳ ಜೊತೆ ಒಂದು ಗಝಲ್ !
ಕವನ
ಜೀವವಿರುವ
ಪ್ರತಿಯೊಬ್ಬನಲ್ಲಿಯೂ
ಪ್ರೀತಿಯಿರಲಿ !
ಕನಸುಗಳು, ಮೇಲೆ
ಅಂತರಿಕ್ಷದಲ್ಲಿಲ್ಲ
ನಮ್ಮೊಳಗಿವೆಯಿಂದು
ತಿಳಿಯು ನೀ ಜಾಣ !
ಉತ್ತರಿಸುವರೀಗ
ಇಲ್ಲದಿರುವಾಗಲೆ
ಬಿತ್ತರಿಸುವ ಮಂದಿ
ತಲೆಯೆತ್ತುತ್ತಾರಯ್ಯಾ !
ಜೀವನ ನದಿಯಲ್ಲಿ
ಮುಳುಗಿದವನಿಗೆ
ಕಾಡಾದರೆನೀಗೀಗ
ನಾಡಾದರೇನು ಶಿವ !
***
ಗಝಲ್
ಹೊಗಳಿಕೆಗಿಂದು ಮನವು ಉಬ್ಬದಿರೆ ನೆಮ್ಮದಿ
ತೆಗಳಿಕೆಗಿಂದು ತನುವು ಕೊರಗದಿರೆ ನೆಮ್ಮದಿ
ಬಯಲಲ್ಲಿ ಕುಳಿತು ಅತ್ತರೆ ಏನು ಪ್ರಯೋಜನ
ಮನೆಯಲ್ಲಿಯೆ ಇರುತ ಕುದಿಯದಿರೆ ನೆಮ್ಮದಿ
ಸಂಬಂಧ ಕೆಡಿಸಿಕೊಳ್ಳುವವರು ನಾವೇ ಅಲ್ಲವೆ
ಹಳಸಿರುವ ಅನ್ನವನಿಂದು ಬಳಸದಿರೆ ನೆಮ್ಮದಿ
ಪ್ರಶಸ್ತಿಗಳ ಹಿಂದೆಯೇ ಓಡಬೇಕೆಂಬ ನಿಯಮವಿದೆಯೆ
ಸಾಧನೆಯ ಗುರುತಿಸಲಿಲ್ಲವೆಂದು ಕುಸಿಯದಿರೆ ನೆಮ್ಮದಿ
ಮಾತುಗಳ ಕೃತಿಯೊಳಗೆ ಯಾವತ್ತಿಗೂ ಸೌಮ್ಯತೆ ಇರಲಿ ಈಶಾ
ನಾನೇ ಹೆಚ್ಚು ಎನ್ನುವ ಅಹಂಕಾರದಲ್ಲಿ ಉರಿಯದಿರೆ ನೆಮ್ಮದಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ
ಚಿತ್ರ್
- Log in to post comments