ಹನಿಗಳ ಲೋಕದಲ್ಲಿ...
ಕವನ
ಸವಿ ನೆನಪು
ಇರದಿರುವ
ಮಂದಿಯೊಳು
ಮಿತ್ರತ್ವ
ಬೇಕೇನು
ಛಲವಾದಿಯೆ ||
***
ಯಾರ ಬಗ್ಗೆಯೆ ಒಲವು ಮೂಡಿಸುವ
ಮೊದಲು, ನನ್ನ ಬಗ್ಗೆಯೇ ಮೂಡಲಿ
ಬದುಕು ಅರಳರಳಿ ಹಾಡಲಿ !
ನನ್ನೊಳಗಿನ ನಾನು ಅರಳದೆಯೆ
ಇನ್ನೊಬ್ಬರ ಭಾವನೆಗಳವರಲಿ
ಹೇಗೆ ತಾನೇ ನಾನಾಗಿ ತುಂಬಲಿ !!
***
ಬದುಕ ಬಗ್ಗೆ
ತಿಳುವಳಿಕೆ ಹೊಂದು
ಮುಕ್ತಿಯ ಪಡೆ !
***
ಮೌನವು ಮನುಷ್ಯನ ಜಾಣತನವು
ಮೋಹವು ಪ್ರೀತಿಯಲ್ಲಿಯ ಸಾಧನವು
ಕೈ ಹಿಡಿದು ಪ್ರೇಮದೊಳು ನೋಡಿದಿರೆ
ಎಲ್ಲದರೊಳು ಇದೆ ಸವಿಮನವು
***
ಮುಳ್ಳುಗಳ ನಡುವೆ
ಮೊಗ್ಗು ಅರಳುತ್ತದೆ
ಹೂವಾಗಿ ಪರಿಮಳ
ಸುತ್ತೆಲ್ಲ ಹರಡುತ್ತದೆ !
***
ಮೌನವಾಗಿದ್ದರಿಲ್ಲಿ
ನಮ್ಮ ಅರೆಯುವರು
ಧೀರನಾಗೆಯಿರಲು
ಹೊಗಳಿ ಸಾಗುವರು !
***
ಮೌನ ನಮಗೆಂದೆಂದೂ
ಒಳ್ಳೆಯದ ಮಾಡುತ್ತೆ
ಕಾರಣವಿಲ್ಲದೆಯೆ
ಹೊಡೆಯುವರ ಹಾಗೆ !
-ಹಾ ಮ ಸತೀಶ ಬೆಂಗಳೂರು*
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
