ಹನಿಗಳ ಸಮಯ
ಸಮಯಸಿಂಧು
ಕರ್ನಾಟಕ
ಬ್ರೇಕಿಂಗ್
ನ್ಯೂಸ್:
ಸಿದ್ದರಾಮಯ್ಯ ಕರೆ-
ಜಾತಿ-ಧರ್ಮಗಳಿಗೆ
ನೀವು ಒಳಗಾಗಬೇಡಿ...
ಹೌದೌದು-
ಈಗ ಆಗಲೇ ಬೇಡಿ;
ಎಲೆಕ್ಷನ್ ಟೈಮಲಿ
ಮಾತ್ರ
ಲೆಕ್ಕಾಚಾರ ಹಾಕಿ
ಓಟು ಗಿಟ್ಟಿಸಿ ಬಿಡಿ!
***
ದುರ್ಘಟನೆಗೆ ಮುನ್ನ....
ಹರಿಹರದಲಿ
ನಲವತ್ತೆಂಟು
ಶಾಲೆಗಳು
ಸಂಪೂರ್ಣ ಶಿಥಿಲ;
ವಿದ್ಯಾರ್ಥಿ-ಶಿಕ್ಷಕರು
ಭಯ ಆತಂಕದಲಿ...
ಉಸ್ತುವಾರಿ
ಮಂತ್ರಿಗಳೇ-
ದುರಂತ ಘಟನೆಗೆ
ಮೊಸಳೆ ಕಣ್ಣೀರು
ಸುರಿಸುವ ಮುನ್ನ-
ಬರಲಿದು ಚಿತ್ತದಲಿ!
***
ಪೊಲಿ-ಟ್ರಿಕ್ಸ್!
ಅಮಿತ್ ಷಾ
ಭೇಟಿ
ವೇಳೆಯೇ
ಚೆನ್ನೈನಲ್ಲಿ
ವಿದ್ಯುತ್
ಕಡಿತ...
ಕರ್ನಾಟಕಕ್ಕೆ
ಬರಬೇಕಿತ್ತು
ನಿಮಗೆ
ಸಿಗುತಿತ್ತು
ವಿದ್ಯುತ್
ಉಚಿತ!
***
ಜೀವನ ಮಂತ್ರ...
ಹಾರ್ಡ್ ವೇರ್
ಮತ್ತು
ಸಾಫ್ಟ್ ವೇರ್
ಜೊತೆಯಾದರೆ
ಕಂಪ್ಯೂಟರ್
ಯಂತ್ರ...
ದೃಢತೆ
ಮತ್ತು
ಕುಶಲತೆಯಿದ್ದರೆ
ಅದುವೇ
ಜೀವನ
ಮಂತ್ರ!
***
ಗ್ರಹಣ
ಯಾವುದೂ
ಬಹುಕಾಲ
ನಡೆದುದನು
ನಾ ಕಾಣೆ;
ಕಳೆದುಕೊಳ್ಳದಿರಿ
ಹರುಷ....
ತಾಳ್ಮೆಯಿರಲಿ;
ಸಹನೆಯಿರಲಿ
ಸೂರ್ಯನಿಗೆ ಹಿಡಿವ
ಗ್ರಹಣವೂ
ಕೆಲವೇ
ನಿಮಿಷ!
***
ವಿರೋಧಾಭಾಸ!
ಜೀವನ
ನರಕವಾಗಿರಲು
ಸ್ವರ್ಗದ
ಕನಸು!
ಹೇ ನೀನೆಂತಹ
ವಿಧಿಯೇ...?
ಅದೇ
ಸ್ವರ್ಗವಾಗಿರಲು
ನರಕದ
ಕನಸು!
ಓ ವಿಸ್ಮಯದ
ನಿಧಿಯೇ...!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
