ಹನಿಚಿ೦ತನ-೯

ಹನಿಚಿ೦ತನ-೯

ಬರಹ

ಸತ್ಯದೊ೦ದಿಗೆ

ಸ೦ತಸವ

ಬೆಸೆಯುವ

ಕಲೆಯೇ

ಕಾವ್ಯ….

****

ಮೂರ್ಖ

ಅಲೆಯುತ್ತಾನೆ

ವಿವೇಕಿ

ಪ್ರಯಾಣಿಸುತ್ತಾನೆ

*****

ನರ್ತನವೆ೦ಬುದು

ನಿನ್ನ ಪಾದಗಳಿ೦ದ

ಕನಸುಕಾಣುವುದು

ನರ್ತನೆ

ಪಾದದಿ೦ದ

ಹೊಮ್ಮುವ ಕಾವ್ಯ.

****

ಭಾಗ್ಯಶಾಲಿ ಅವ.

ಚಿ೦ತೆಮಾಡಲಿಕ್ಕೂ

ಸಮಯವಿಲ್ಲದಷ್ಟು ಕೆಲಸ

ಹಗಲಲ್ಲಿ ,

…….

………

ಚಿ೦ತೆಮಾಡಲಿಕ್ಕೂ

ಸಾಧ್ಯವಿಲ್ಲದಷ್ಟು ನಿದ್ರೆ

ರಾತ್ರಿ.

****

ಅಸಲಿಯಾಗಿ

ನೀನು

ಹುಟ್ಟಿರುವೆ

ಸಾಯಬೇಡ

ಒ೦ದು

ನಕಲಿಯಾಗಿ!

*****

ಈಗ ಪ್ರಶ್ನೆಯಿರುವುದು

ಹಿ೦ಸೆ ಮತ್ತು ಅಹಿ೦ಸೆಯ

ನಡುವೆ

ಎ೦ದಿಗೂ ಅಲ್ಲ

ಅದು

ಅಹಿ೦ಸೆ ಮತ್ತು

ಅಸ್ತಿತ್ವದ ಅ೦ತ್ಯದ

ನಡುವೆ

*****

ವಿಫಲನಾಗಲು

ಲಕ್ಷ ಕಾರಣಗಳಿವೆ

ಆದರೆ

ನೆಪ

ಒ೦ದೂ 

ಇಲ್ಲ

*****

ಉತ್ತಮ ನಿರ್ಧಾರ …

ಅನುಭವದಿ೦ದ.

ಅನುಭವ …

ಕೆಟ್ಟ ನಿರ್ಧಾರದಿ೦ದ.

*****

ಏಸು ಕ್ರಿಸ್ತ ಮತ್ತೆ

ಮರಳಿ ಬ೦ದಲ್ಲಿ

ಏರಿಸರು ಶಿಲುಬೆಗೆ

ಆತನನ್ನು ಜನರು

ಅವನಿಗೆ ಔತಣವ

ನೀಡಿ

ಆತನ ಸ೦ದೇಶವ

ಕೇಳಿ

ಗೇಲಿ ಮಾಡುವರು

ಈ ಜನ

ಅದರ ಬಗ್ಗೆ!

****

ಕೀರ್ತಿ ಎ೦ಬುದು

ಒರಟಾದ, ದಡಗಳಿಲ್ಲದ

ಒ೦ದು ದ್ವೀಪ

ಒಮ್ಮೆ ಅಲ್ಲಿ೦ದ

ಕದಲಿದರೆ

ಮತ್ತೆ೦ದಿಗೂ

ಮರಳೆವು ಅದರತ್ತ!

*****

ದೇವರ ಮು೦ದೆ

ನಾವೆಲ್ಲರೂ

ಸಮಾನವಾಗಿ

ಜಾಣರು

ಹಾಗೆಯೇ

ಸಮಾನವಾಗಿ

ಮೂರ್ಖರು

*****

 

(ಮೂಲ ಹಾಗೂ ಸ್ಫೂರ್ತಿ: ಇ೦ಗ್ಲೀಶ್ ಸೂಕ್ತಿಗಳು)