ಹನ್ನೆರಡು ಜ್ಯೋತಿರ್ಲಿಂಗಗಳು - ೩ [ಉಜ್ಜಯನಿಯ ಮಹಾಕಾಳೇಶ್ವರ].

ಹನ್ನೆರಡು ಜ್ಯೋತಿರ್ಲಿಂಗಗಳು - ೩ [ಉಜ್ಜಯನಿಯ ಮಹಾಕಾಳೇಶ್ವರ].

ಬರಹ

ಉಜ್ಜಯನಿಯ ಮಹಾಕಾಳೇಶ್ವರ.

ಎಲ್ಲಿದೆ?

ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಂಡೆಯ ಮೇಲಿದೆ.
ಇದು ಪುರಾಣಗಳಲ್ಲಿ ಅವಂತಿಕಾ ನಗರಿ ಎಂದು ವರ್ಣಿತವಾಗಿತ್ತು.
ಇದನ್ನು ಭೂಮಿಯ ನಾಭಿ ಎಂದೂ ವರ್ಣಿಸಲಾಗಿದೆ.
ಶ್ರೀ ಕೃಷ್ಣ-ಬಲರಾಮ-ಸುಧಾಮರು ಇಲ್ಲಿ ವಿದ್ಯಾಭ್ಯಾಸ ಮಾಡಿದರಂತೆ.
ಪ್ರಸಿದ್ಧವಾದ ವಿಕ್ರಮಾದಿತ್ಯನ ಸಿಂಹಾಸನ ಇಲ್ಲಿಯೇ ಇತ್ತು ಎಂದು ಪ್ರತೀತಿ.
ಉಜ್ಜಯನಿಹಲವಾರು ಬಂಗಾರದ ಕಲಶಗಳನ್ನು ಹೊಂದಿರುವ ದೇಗುಲಗಳನ್ನು ಹೊಂದಿರುವುದರಿಂದ "ಸ್ವರ್ಣ ಶೃಂಗ" ಎಂದೂ ಪ್ರಸಿದ್ಧವಾಗಿದೆ.
ಬಹಳ ಹಿಂದೆ ಇಲ್ಲಿ ಅನೇಕ ವೇದಾಧ್ಯಯನ ಸಂಪನ್ನ ಶಿವ ಭಕ್ತರಿದ್ದರಂತೆ.
ಅವರಲ್ಲಿ ವೇದ ಪ್ರಿಯನೆಂಬುವನು ತನ್ನ ನಾಲ್ಕು ಪುತ್ರರೊಂದಿಗೆ ಶಿವ ಕೈಂಕರ್ಯದಲ್ಲಿ ತೊಡಗಿದ್ದನಂತೆ. ಹೀಗಿರುಬಾಗ, ದೂಷಣನೆಂಬ ರಾಕ್ಷಸನು ತನ್ನ ದುಷ್ಟ ಶಕ್ತಿಯೊಂದಿಗೆ ಇವರ ಮೇಲೆರಗ್ಲು ಶಿವಪೂಜಾ ನಿರತರಾದ್ದ ತನ್ನ ಭಕ್ತರನ್ನು ಕಾಪಡಲು ಶಿವನು ಲಿಂಗಾಕಾರದಿಂದ ಮಹಾಕಾಳನಾಗಿ ಹೊರಬಂದು ರಾಕ್ಷಸ ಸಂಹಾರ ಮಾಡಿದನಂತೆ.
ಕೊನೆಗೆ ಭಕ್ತರ ವಿನಂತಿ ಮೇರೆಗೆ ಅದೇ ಆಕಾರದಲ್ಲಿ ಜ್ಯೋತಿರ್ಮಯನಾಗಿ ನಿಂತನಂತೆ.

ಉಜ್ಜಯನಿ ಪರಮ ಪವಿತ್ರವಾದ ಕ್ಷೇತ್ರ. ಇಲ್ಲಿ ೭ ಸಾಗರ ತೀರ್ಥಗಳು, ೨೮ ತೀರ್ಥಗಳು, ೮೪ ಸಿದ್ಧಲಿಂಗಗಳು, ೨೫-೩೦ಶಿವಲಿಂಗಗಳು, ಶ್ರೀಯಂತ್ರ ಸಹಿತ ಹರಿಸಿದ್ಧಿ ಮಾತಾಮಂದಿರ, ಬಡಾಗಣೇಶ್, ಗರ್‍ಕಾಲಿಕಾ ಪೂಜಾ ಮಂದಿರಗಳು, ಗೋಮತಿ ಕುಂಡ, ಸಂದೀಪಿನಿ ಆಶ್ರಮ ಮೊದಲಾದ ಯಾತ್ರಾ ಸ್ಥಳಗಳಿವೆ. ಇಲ್ಲಿಂದ ೮ಕಿ.ಮೀ. ದೂರದಲ್ಲಿ ಸ್ಥಿರಮಾನ ಗಣಪತಿ ದೇವಾಲಯವಿದೆ. ಉಜ್ಜಯನಿಯನ್ನು ಸಂದರ್ಶಿಸಿದವರೆಲ್ಲ ಗಣಪತಿಯನ್ನು ದರ್ಶನ ಮಾಡಲೇಬೇಕು.

ಮಹಾಕಾಳೇಶ್ವರನ ವಿಶೇಷ.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ಐದು ಮಹಡಿಗಳ ಬೃಹತ್ ಶಿಲಾ ದೇವಸ್ಥಾನ. ವಿಶೇಷವೆಂದರೆ, ಇಲ್ಲಿ ಜ್ಯೋತಿರ್ಲಿಂಗವಿರುವುದು ಭೂಗರ್ಭದಲ್ಲಿ.

ಶಿವನಿಗೆ ಇಲ್ಲಿ ಪ್ರತಿದಿನ ಹತ್ತಿರದ ಸ್ಮಶಾನದಿಂದ ತಂದ ಬೂದಿಯಿಂದಲೇ ಲೇಪನ. ನಂತರವೇ ಪೂಜೆ, ಅಭಿಷೇಕ. ಕಾಶಿ-ಗಯಾಗಳಂತೆ ಇಲ್ಲಿ ಕೂಡ ’ಪಿತೃಶ್ರಾದ್ಧ’ ಮಾಡುತ್ತಾರೆ.

ಹೇಗೆ ಹೋಗುವುದು?
ಉಜ್ಜಯನಿ, ನಾಗ್ಡ ಹಾಗೂ ಭೂಪಾಲ್ ನಡುವಿನ ರೈಲು ನಿಲ್ದಾಣ.

ಎಲ್ಲಿಂದ ಎಷ್ಟು ದೂರ.
ಭೂಪಾಲ್ ಇಂದ ೧೮೪ ಕಿ.ಮೀ.
ಇಂದೋರ್ ಇಂದ ೫೫ ಕಿ.ಮೀ.
ಅಹಮದಾಬಾದ್ ಇಂದ ೪೭೫ ಕಿ.ಮೀ.
ದೆಹಲಿಯಿಂದ ೭೪೯ ಕಿ.ಮೀ.
ಬೆಂಗಳೂರಿನಿಂದ ೧೪೮೩ ಕಿ.ಮೀ.

ವಸತಿ.
ಧರ್ಮಶಾಲೆ ಮತ್ತು ಹೊಟೆಲ್ಗಳು ಸಾಕಷ್ಟಿವೆ.

-------------------------------------------------------------
ಚಿತ್ರ ಕೃಪೆ: www.exoticindiaart.com ಮತ್ತು www.mahashivratri.org