ಹರಿಲೀಲೆ
ಕವನ
ನಂದನ ಕಂದನ ಚಂದವ ಕಾಣಲು
ಕಣ್ಣುಗಳೆರಡು ಸಾಲದಿದೆ
ಹೊಳೆಯುವ ನಯನವು ಮಿನುಗುವ ತಾರೆಯೊ
ಅಧರದಿ ಮೂಡಿದೆ ತುಂಟನಗೆ
ಕೊರಳಲಿ ಕೌಸ್ತುಭ ಹಾರವ ಧರಿಸಿದ
ಮುರಳಿಯ ಹಿಡಿದಿಹ ಕರದಲ್ಲಿ
ಭಕ್ತರಿಗೀತರ ದರ್ಶನವೀಯಲು
ಸೇರಿದನೇನೂ ನಭದಲ್ಲಿ?
ಕೃಷ್ಣನು ಜೀಕಲು ಬಯಸಿಹನೇನು
ಚಂದಿರನಾದನೆ ಉಯ್ಯಾಲೆ
ಲೋಕದ ಸೂತ್ರವ ಹಿಡಿದಿಹ ದೇವನು
ಕಾಣುವುದೆಲ್ಲವು ಹರಿಲೀಲೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ: ಶ್ರೀ ಸತೀಶ್ ಎಲೆಸಾರವರ ವಾಲ್ನಿಂದ
ಚಿತ್ರ್
- Log in to post comments