ಹಸಿವಿನ ಅತ್ಯಾಸೆ
ಕವನ
ಶ್ರಮವದು ದುಡಿದಿತ್ತು
ತನುವನ್ನು ಕಾಡಿತ್ತು....
ಉದರವದು ಬಯಸಿತ್ತು
ತುತ್ತು ಅನ್ನದ- ಹಸಿವಿಗಾಗಿ.
ಮನಸದು ಬೇಡಿತ್ತು
ಮಸ್ತಕವದು ಬಯಸಿತ್ತು
ಹಂಬಲವು ತುಂಬಿತ್ತು
ಪುಸ್ತಕದ - ಹಸಿವಿಗಾಗಿ.
ಬುದ್ಧಿಯದು ಕಾಡಿತ್ತು
ಆಸೆಯದು ತುಂಬಿತ್ತು
ಬಯಕೆಯು ಬಯಸಿತ್ತು
ಕಾಂಚಾಣದ- ಹಸಿವಿಗಾಗಿ.
ಕಾಯಕವು ಬೇಡಿತ್ತು
ಮನಸದು ಓಡಿತ್ತು
ಸವಲತ್ತದು ಸಿಕ್ಕಿತ್ತು
ಅಧಿಕಾರದ- ಹಸಿವಿಗಾಗಿ.
ಆಸ್ತಿಯದು ಕಾಡಿತ್ತು
ಬಲೆಯನ್ನದು ಬೀಸಿತ್ತು
ಮನಸ್ಸಿನ್ನಲ್ಲದು ಜಾರಿತ್ತು
ಭೂರಮೆಯ - ಹಸಿವಿಗಾಗಿ.
ಕಾಂಚಾಣವು ಬೇಡಿತ್ತು
ಕನಕವದು ಕಾಡಿತ್ತು
ಕನಸನ್ನೆಲ್ಲೆಡೆ ಹರಡಿತ್ತು
ಐಶ್ವರ್ಯದ - ಹಸಿವಿಗಾಗಿ.
ಸಿರಿಯದು ಸುರಿದಿತ್ತು
ಪ್ರಶಸ್ತಿಗಳು ಬಂದಿತ್ತು
ಹಾರ,ತುರಾಯಿ ನಗುತ್ತಿತ್ತು
ಪುರಸ್ಕಾರದ - ಹಸಿವಿಗಾಗಿ.
ಬೇಡದ್ದನ್ನೆಲ್ಲಾ ಬಯಸಿತ್ತು
ಮನಸ್ಸದು ಅತಿ ನೊಂದಿತ್ತು
ಅತ್ಯಾಸೆಯು ನರಳಿ ಸಾಯುತ್ತಿತ್ತು
ಹಸಿವದು - ಇಂಗಿಂಗಿ ಹೋಗಿತ್ತು.!
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
