ಹಾರೈಕೆ

ಹಾರೈಕೆ

ಕವನ

ಭುವಿಯ ಭಾಂದವರು ನಾವು

ಒಂದೇ ನಮ್ಮ ಕಾಯ್ವ ಒಡಲು

ತುತ್ತನಿತ್ತ ಕೈಯ ನೆನೆಯಬೇಕು

ಹಸಿರ ಸಿರಿಯ ಪೊರೆಯಬೇಕು.

 

ದ್ವೇಷಗಳ ಕಳೆಯನಿಂದೇ ಕಡಿಯಬೇಕು

ಯುದ್ಧವ ಪ್ರೀತಿಯಿಂದ ಮಣಿಸಬೇಕು

ಗಡಿಗಳ ಭೇದವ ಕುಡಿಗಳು ಮೀರಬೇಕು

ನಾವು ಒಂದೇ ಕೊಂಡಿಗಳಂತಿರಬೇಕು.

 

ಸಾಕಿನ್ನು ಈ ಯಂತ್ರದ ಬದುಕು

ಬೇಕಿದೆ ಭಾವನೆಗಳ ಸೇತು

ಪರರ ನೋವಿಗೆ ಮಿಡಿಯಬೇಕು

ಅವರ ಖುಷಿಯಲಿ ಬೆರೆಯಬೇಕು.

 

ಭುವಿಯಿರಲು ಕುಟುಂಬದಂತೆ

ಭವಿಷ್ಯ ನಮಗೆ ವರದಾನವಂತೆ

ಕನಸಾಗದಿರಲಿ ಈ ಹಾರೈಕೆ

ಈಡೇರಲಿ ಈ ಎಲ್ಲಾ ಬಯಕೆ!!

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್