ಹೊಗಳು ಪಂಡಿತರು

ಹೊಗಳು ಪಂಡಿತರು

ಕವನ

ಮಹಾ

ಮಹಿಮರು

ಬರೆದುದೆಲ್ಲಾ

ಯಾವತ್ತಿಗೂ

ರೂಪಕಗಳೇ ?

ಪಾಪ ,

ಕಷ್ಟ ಪಟ್ಟು

ಓದಿ

ಅರೆದು ಕುಡಿದು

ಜೀರ್ಣಿಸಿ

ಕೊಂಡು

ಬರೆದವನ

ಬರಹ

ನೋಡಿ

ಹೇಳುವರು

ಇದರಲ್ಲೇನಿದೆ

ಎಲ್ಲಾ

ವಿ

ರೂಪಕಗಳೇ ...... ?!

ಛಲವಾದಿಯೆ !

***

ಬಲ್ಲಿರಾ

ಗಾಂಧಿ 

ನಿನ್ನ

ನೆನಪುಗಳು 

ಮೂಲೆ

ಕಂಬವನು

ಹಿಡಿದು

ಕುಳಿತಿವೆ

ಇದಕ್ಕೆಲ್ಲ 

ಇಂದು

ಹೊಣೆ ಯಾರು?

***

ಹನಿಗಳು

ಮಾತಿನೊಳಗೆ

ಹಿಡಿತವಿದ್ದಂತೆಯೇ

ಕೃತಿ ಬರಲಿ !

***

ಒಲವಿನಾಟ

ಹಿತಮಿತದಲ್ಲಿರೆ

ಸುಖ ಸಂಸಾರ !

***

ಕಸ್ತೂರಿಯಲಿ

ಪರಿಮಳವಿದ್ದಂತೆ

ಬದುಕಿರಲಿ!

***

ಸವಿ ನೆನಪು

ಬರುವುದೇ ನನಗೆ

ರಾತ್ರಿಯಾದಂತೆ !

***

ಈಗಿನ ಯುವ ಜನತೆ, ಜೊತೆಗೆ 

ನಮಗೆಲ್ಲ ಬಹಳ ತಿಳಿದಿದೆ 

ಎನ್ನುವವರ ನಡುವೆ

ಹಿರಿಯರೆಂದೆನಿಸಿಕೊಂಡವರು

ಸುಮ್ಮನೆ ಇರುವುದೇ ಲೇಸು!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್