ಹೊಸ ನಾಡು ಕಟ್ಟೋಣ..!!

ಹೊಸ ನಾಡು ಕಟ್ಟೋಣ..!!

ಕವನ

ದುಷ್ಟ ದಾರಿದ್ರ್ಯಕ್ಕೆ ಅಂಕುಶವಿಟ್ಟು

ನಿಟ್ಟೆಲುಬುಗಳ ಮುರಿಯುತ

ಕಟ್ಟಿದ ಕೋಟೆಕೊತ್ತಲಗಳನು

ಕೆಡವಿ ಪ್ರಜಾರಾಜ್ಯವನು

ಪ್ರಜೆಗಳ ಆಡಳಿತವನ್ನೆ ನೋಡುವ

ಹೊಸನಾಡು ಕಟ್ಟೋಣ..!!

 

ಇಲ್ಲಿ ರಾಜ ರಾಣಿಯರಿಲ್ಲ 

ಮಂತ್ರಿ ಮಹಿಮರಿಲ್ಲ

ಚತುರಂಗ ಬಲವಿಲ್ಲ

ಶಾಂತಿ ಪ್ರೀತಿ ಕರುಣೆ ಮಮತೆಗಳು

ಎಂಬ ಅಸ್ತ್ರಗಳಿವೆ

ಜಾತಿ ಬೇಧಗಳಿಲ್ಲ

ಸರ್ವರು ಸಮಾನವಾದ

ಹೊಸನಾಡು ಕಟ್ಟೋಣ..!!

 

ಆಳುವ ಅರಸರ ಕೂಲಿಯ

ಆಳುಗಳ ಬೇಧಭಾವವಿಲ್ಲ

ಅಂತಸ್ತು ಮರ್ಯಾದೆ

ಭೂರಿ ಮೃಷ್ಟಾನ್ನ ಭೋಜನ

ಗುಡಿಸಲಿನ ರಾಗಿಗಂಜಿ

ಸರ್ವರಿಗೂ ಒಂದೆ

ದುಡಿಮೇಯೆ ಸರ್ವರ

ಧ್ಯೇಯ ವಾಕ್ಯವಾಗಿಸಿ

ಹೊಸನಾಡ ಕಟ್ಟೋಣ....!!

 

ಎಡರುಗಳ ತೊಡರುಗಳ

ಬಿಡಿಸಿ ದಾಟುತ 

ತೆರಿಗೆ,ನಿವೇಶನ, ಅಧಿಕಾರ

ನಿಷ್ಪಕ್ಷಪಾತ ಆಡಳಿತ

ಮಾಡುವ ಸಮತಾವಾದದ

ನವನೂತನ ಚಿಂತನೆಯ

ಅರಿಷಡ್ವರ್ಗಗಳ ಗೆದ್ದು

ಶುದ್ದಿಯ ತೋರುವ

ಹೊಸನಾಡ ಕಟ್ಟೋಣ...!!

 

-*ಶಂಕರಾನಂದ ಹೆಬ್ಬಾಳ*

 

ಚಿತ್ರ್