’ವಿರಾಟ’ನೇ ಏಕಾಗಬೇಕು?

’ವಿರಾಟ’ನೇ ಏಕಾಗಬೇಕು?

ಬರಹ


  ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತದ ಗೆಲುವಿನ ಮುಖ್ಯ ರೂವಾರಿ ವಿರಾಟ್ ಕೊಹ್ಲಿ. ನಿರೀಕ್ಷೆಯಂತೆ ಕನ್ನಡದ ಆರೂ ಪ್ರಮುಖ ದಿನಪತ್ರಿಕೆಗಳೂ ಈ ಸುದ್ದಿಯ ಶೀರ್ಷಿಕೆ/ಉಪಶೀರ್ಷಿಕೆ/ಫೋಟೋ ಶೀರ್ಷಿಕೆಯಲ್ಲಿ ’ವಿರಾಟ್/ವಿರಾಟ’ ಪದವನ್ನು ಯಥಾರ್ಥದಲ್ಲಿ ಬಳಸಿದವು. ಈ ಬಳಕೆ ಅರ್ಥಪೂರ್ಣವೇನೋ ಹೌದು, ಆದರೆ, ಹೊಸತನ ಬಯಸಿದ್ದ ನನಗೆ ಎಲ್ಲ ಪತ್ರಿಕೆಗಳಲ್ಲೂ ಅದೇ ಶಬ್ದದ ಬಳಕೆ ಕಂಡು ಪಿಚ್ಚೆನ್ನಿಸಿತು (ಕ್ರಿಕೆಟ್ ಪಿಚ್ ಅಲ್ಲ).
  ಆ ಶಬ್ದವನ್ನು ಟಚ್ಚೇ ಮಾಡದೆ, ’ಅನ್ವರ್ಥನಾಮ; ಆಸೀಸ್‌ಗೆ ನಾಮ’, ’ಕೊಹಿಲಿ ಕಹಳೆ’ ಇಂತಹ ಯಾವುದಾದರೂ ಹೊಸಬಗೆಯ ಶೀರ್ಷಿಕೆ ಕೊಟ್ಟು, ಸುದ್ದಿ ವಿವರದಲ್ಲಿ ಪತ್ರಿಕೆಗಳು ವಿರಾಟನ ವಿರಾಡ್ರೂಪದ ದರ್ಶನ ಮಾಡಿಸಬಹುದಿತ್ತು.