’ಶ್ರೀ ಖರ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು’

’ಶ್ರೀ ಖರ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು’

ನನ್ನ ಸಂಪದ ತಾಣದ ಎಲ್ಲ ಗೆಳೆಯ, ಗೆಳತಿಯರು,ಹಾಗೂ ಬಂಧುಗಳಿಗೆ ನನ್ನ ಮತ್ತು ನನ್ನ ಪರಿವಾರದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲಾ ಶುಭವಾಗಲಿ.ಸನ್, ೨೦೧೧ ರ ಯುಗಾದಿ ಹಬ್ಬವನ್ನು ಯಾರು ಚಾಂದ್ರಮಾನ ರೀತಿಯಾಗಿ ಆಚರಿಸುವರೋ ಅವರ ಪ್ರಕಾರ, ಚೈತ್ರ ಶುಕ್ಲ ಪ್ರತಿಪದ್ ತಾ. ೦೪-೦೪-೨೦೧೧ ನೇ ಸೋಮವಾರ ಆಚರಿಸಬೇಕು. ಸೌರಮಾನರೀತಿಯಲ್ಲಿ ನಂಬಿಕೆಯಿದ್ದು ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ, ೧೪-೦೪-೨೦೧೧ ನೇ ಗುರುವಾರ ಆಚರಿಸಬೇಕು.
ಉಷಃ ಕಾಲದಲ್ಲಿ ಎದ್ದು ಮನೆಯನ್ನು, ದೇವರ ಮನೆಯನ್ನೂ ಚೊಕ್ಕಟಗೊಳಿಸಿ, ಅಭ್ಯಂಜನ ಸ್ನಾನಮಾಡಿ ಸಂಧ್ಯಾವಂದನೆಗಳನ್ನು ಮಾಡಿದನಂತರ, ಖರ  ನಾಮ ಸಂವತ್ಸರದ ಪಂಚಾಂಗವನ್ನು ದೇವರಮುಂದಿರಿಸಿ ಶ್ರೀ ವಿನಾಯಕನ ಪೂಜಾಪೂರ್ವಕ ಕುಲದೇವತೆಯನ್ನು ಅರ್ಚಿಸಬೇಕು. ತದನಂತರ ಬೇವು-ಬೆಲ್ಲ ಸೇವಿಸಿ, ಸನ್ಮಿತ್ರರೊಡನೆ ಮತ್ತು ಪರಿವಾರದ ಸದಸ್ಯರ ಮುಂದೆ ಪಂಚಾಂಗ ಶ್ರವಣ ಮಾಡಬೇಕು. 

"ಶತಾಯುರ್ವಜ್ರದೇಹಾಯ ಸರ್ವ ಸಂಪತ್ಕರಾಯಚ
 ಸರ್ವಾರಿಷ್ಟ ವಿನಾಶಾಯ ನಿಂಬಕಂದಳ  ಭಕ್ಷಣಂ" 

ಎನ್ನುವ ಮಂತ್ರವನ್ನು ಉಚ್ಚರಿಸುತ್ತಾ ಹಿರಿಯರು ಕೊಡುವ 'ಪಂಚಾಮೃತ ತೀರ್ಥ' ವನ್ನು (ಅದರಲ್ಲಿ ಬೇವಿನ ಹೂಗಳು ಹಾಗೂ ಬೆಲ್ಲವನ್ನು ಮಿಶ್ರಣಮಾಡಿರುವ) ಸೇವಿಸಬೇಕು. (ಇದರ ಅರ್ಥ, ನೂರು ವರ್ಷಗಳ ಆಯುಶ್ಯ, ಸಧೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ)

Comments