41. ವಕ್ರಬುದ್ಧಿಯ ವ್ಯಕ್ತಿಗೆ ಸಮಯವೇ ಪಾಠ ಕಲಿಸುತ್ತದೆ

41. ವಕ್ರಬುದ್ಧಿಯ ವ್ಯಕ್ತಿಗೆ ಸಮಯವೇ ಪಾಠ ಕಲಿಸುತ್ತದೆ

ಶಾಮು, ಸೋಮು ಮತ್ತು ಗೋಪು ಗೆಳೆಯರು. ಇವರಲ್ಲಿ ಗೋಪು ವಕ್ರಬುದ್ಧಿಯವನು. ಇವನಿಗೆ ಶಾಮು ಮತ್ತು ಸೋಮು ಆಡುವ ಆಟಗಳ ಬಗ್ಗೆ ಆಸಕ್ತಿಯೇ ಇಲ್ಲ. "ಅವರೇನು ಆಟ ಆಡುತ್ತಾರೋ …. ಶಾಲಾ ಕಂಪೌಂಡಿನೊಳಗೆ ಓಡುವುದು, ಸೈಕಲ್ ಓಡಿಸುವುದು - ಇವೆಲ್ಲ ಆಟಗಳೇ ಅಲ್ಲ. ರಸ್ತೆಯಲ್ಲಿ ಓಡುವುದು, ಎತ್ತರದ ಸ್ಥಳದಿಂದ ಕೆಳಕ್ಕೆ ಹಾರುವುದು, ಇತರ ವಿದ್ಯಾರ್ಥಿಗಳ ನೋಟ್ ಪುಸ್ತಕಗಳಿಂದ ಪುಟಗಳನ್ನು ಹರಿಯುವುದು - ಇವೆಲ್ಲ ನನಗೆ ಖುಷಿ ಕೊಡುವ ಆಟಗಳು” ಎಂಬುದು ಗೋಪುವಿನ ಯೋಚನೆ.

ಅದೊಂದು ದಿನ, ಗೋಪು ಯೋಚಿಸಿದ: ನಾನು ನನ್ನ ಪಾಡಿಗೆ ಆಟವಾಡುತ್ತೇನೆ. ನನಗೆ ಅವರಿಬ್ಬರ ಸಹವಾಸವೇ ಬೇಡ. ಅವನು ಯಾರದೋ ಹಣ ಕದ್ದ; ಇತರ ವಿದ್ಯಾರ್ಥಿಗಳ ನೋಟ್ ಪುಸ್ತಕಗಳ ಪುಟಗಳನ್ನು ಹರಿದ; ಅಧ್ಯಾಪಕರ ಕುರ್ಚಿಗೆ ಗಮ್ ಅಂಟಿಸಿದ! ಇದೆಲ್ಲ ಉಪಟಳ ಮಾಡಿದವರು ಯಾರೆಂಬುದು ಯಾರಿಗೂ ತಿಳಿಯಲಿಲ್ಲ.

ಅನಂತರ ಗೋಪು ಶಾಲೆಯಿಂದ ದೂರದಲ್ಲಿದ್ದ ಸೇತುವೆಗೆ ಹೋಗಿ, ಸೇತುವೆಯಿಂದ ಕಿರುಚುತ್ತಾ ನದಿಗೆ ಹಾರಿದ! ಅವನಿಗೆ ಈಜು ಬರುತ್ತಿರಲಿಲ್ಲ. ಬಾಯೊಳಗೆ ನೀರು ತುಂಬಿ ಉಸಿರು ಕಟ್ಟಿದಾಗ ಅವನಿಗೆ ಜೀವಭಯ ಶುರುವಾಯಿತು. “ನನ್ನನ್ನು ಬಚಾವ್ ಮಾಡಿ, ಬಚಾವ್ ಮಾಡಿ" ಎಂದು ಬೊಬ್ಬೆ ಹೊಡೆಯತೊಡಗಿದ. ಅವನನ್ನು ಹಿಂಬಾಲಿಸಿ ಬಂದಿದ್ದ ಶಾಮು ಮತ್ತು ಸೋಮು, ಒಂದು ಹಗ್ಗ ತಂದು ಅದನ್ನು ಸೇತುವೆಯಿಂದ ಕೆಳಕ್ಕೆ ಇಳಿಸಿದರು. ಗೋಪು ಹೇಗೋ ಮಾಡಿ ಆ ಹಗ್ಗವನ್ನು ಹಿಡಿದುಕೊಂಡಾಗ ಅವರಿಬ್ಬರೂ ಸೇರಿ, ಅವನನ್ನು ಮೇಲಕ್ಕೆ ಎಳೆದು, ಅವನ ಜೀವ ಕಾಪಾಡಿದರು. "ನಿನಗೆ ಖುಷಿ ಬೇಕಾದರೆ ಅಪಾಯದ ಕೆಲಸ ಮಾಡಬೇಕೇ? ಅಥವಾ ಇತರರಿಗೆ ತೊಂದರೆ ಕೊಡಬೇಕೇ?" ಎಂದು ಗೆಳೆಯರು ಕೇಳಿದಾಗ ಗೋಪು ನಿರುತ್ತರನಾದ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ತನ್ನ ಗೆಳೆಯರ ಬಳಿ ಕ್ಷಮೆ ಕೇಳಿದ. ತನ್ನ ಜೀವ ಉಳಿಸಿದ್ದಕ್ಕಾಗಿ ಕೃತಜ್ನತೆ ಅರ್ಪಿಸಿದ.