60. ಇನ್ನೊಬ್ಬರ ಬಗ್ಗೆ ಕಾಳಜಿ: ಸ್ವಾಮಿ ವಿವೇಕಾನಂದರ ಪ್ರೇರಣೆ

60. ಇನ್ನೊಬ್ಬರ ಬಗ್ಗೆ ಕಾಳಜಿ: ಸ್ವಾಮಿ ವಿವೇಕಾನಂದರ ಪ್ರೇರಣೆ

ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು.

ಸ್ವಾಮಿ ವಿವೇಕಾನಂದರು ಹಣ್ಣು ತಿಂದಾದ ನಂತರ ಅವರ ತಾಯಿ, "ಆ ಚೂರಿ ಇತ್ತ ಕೊಡು” ಎಂದು ಕೇಳಿದರು. ಸ್ವಾಮಿ ವಿವೇಕಾನಂದರು ತಾಯಿಗೆ ಚೂರಿ ಕೊಟ್ಟರು. ಆಗ ಅವರ ತಾಯಿ ಶಾಂತ ಭಾವದಲ್ಲಿ ಹೇಳಿದರು, “ನೀನು ನನ್ನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಿ. ನಿನ್ನ ವಿದೇಶ ಪ್ರವಾಸಕ್ಕೆ ಈಗ ನನ್ನ ಆಶೀರ್ವಾದ ಇದೆ.” ಸ್ವಾಮಿ ವಿವೇಕಾನಂದರಿಗೆ ಆಶ್ಚರ್ಯವಾಯಿತು. “ಅಮ್ಮಾ, ನೀವು ನನ್ನನ್ನು ಹೇಗೆ ಪರೀಕ್ಷೆ ಮಾಡಿದಿರಿ?" ಎಂದು ಕೇಳಿದರು.

ಅವರ ಅಮ್ಮ ಹೀಗೆ ಉತ್ತರಿಸಿದರು: "ನಾನು ಚೂರಿಯನ್ನು ವಾಪಾಸು ಕೇಳಿದಾಗ, ನೀನು ಅದರ ಹರಿತವಾದ ಅಲಗನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡು, ಅದರ ಹಿಡಿಕೆಯನ್ನು ನನ್ನ ಕಡೆಗೆ ಚಾಚಿದೆ. ಚೂರಿಯ ಹರಿತವಾದ ಅಲಗು ನನ್ನ ಕೈಗೆ ತಗಲಿ ಗಾಯವಾಗದಂತೆ ನೀನು ಎಚ್ಚರ ವಹಿಸಿದೆ. ಇನ್ನೊಬ್ಬರ ಬಗ್ಗೆ ಕಾಳಜಿ ತೋರುವವನಿಗೆ ಜಗತ್ತಿಗೆ ಉಪದೇಶ ನೀಡುವ ಅಧಿಕಾರವಿರುತ್ತದೆ. ಇದುವೇ ನಿನ್ನ ಪರೀಕ್ಷೆಯಾಗಿತ್ತು." ಅಂತಹ ಸ್ವಾಮಿ ವಿವೇಕಾನಂದರು ಇನ್ನೊಬ್ಬರ ಬಗ್ಗೆ ಕಾಳಜಿ ತೋರಬೇಕೆಂದು ಸಾವಿರಾರು ಜನರಿಗೆ ಪ್ರೇರಣೆ ನೀಡಿದ್ದರಲ್ಲಿ ಅಚ್ಚರಿಯಿಲ್ಲ.