ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಮೂರನೆಯ ಕಂತು

ಬಸ್ಸಿನಲ್ಲಿ ಕೇಳದ, ಆದರೆ ಕೂಡುವ ಕ್ಷಣದಲ್ಲಿ ತಪ್ಪದೆ ಬರುವ ಮತ್ತೊಂದು ಪ್ರಶ್ನೆ ಇದೆ. ಏರುತ್ತಿರುವ ಅಂತಿಮ ಉದ್ರೇಕದ ಗಳಿಗೆಯಲ್ಲಿ ಮತ್ತೆ ಮತ್ತೆ ಕೇಳುತ್ತಾರೆ "ಎಷ್ಟು ಗಂಡಸರೊಂದಿಗೆ ಮಲಗಿದ್ದೀ ಹೇಳು, ಎಷ್ಟು ಜನರೊಂದಿಗೆ?

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಎರಡನೆಯ ಕಂತು

ತಾನು ಬರೆಯಬೇಕಾದ ಲೇಖನಗಳ ಸಂಬಂಧ ಹೆನ್ರಿ ದೇಶಾದ್ಯಂತ ತುಂಬಾ ಸುತ್ತಾಡಬೇಕಾಗಿ ಬರುತ್ತಿತ್ತು. ಮೊದಮೊದಲು ನಾನೂ ಅವನ ಜೊತೆ ಹೋಗುತ್ತಿದ್ದೆ. ಆದರೆ ಬರೀ ವಿಮಾನದಲ್ಲಿ ಹೋಗುವ, ದುಬಾರಿ ಹೋಟೆಲ್‌ಗಳಲ್ಲಿ ಇಳಿದುಕೊಳ್ಳುವ, ಬೇರೆ ಪತ್ರಕರ್ತರೊಂದಿಗೆ ಬಾರ್‌ಗಳಲ್ಲಿ ಕುಡಿಯುವ ಅವನ ಪ್ರವಾಸದ ರೀತಿ ನನಗೆ ಸರಿಬರುತ್ತಿರಲಿಲ್ಲ.

ಪರಂಪರೆಯನ್ನು ಕುಲಗೆಡಿಸುವ ಹೊಸ ಹವ್ಯಾಸ..... ಇನೋವೇಷನ್ ಹೆಸರಲ್ಲಿ!

ತಾರೀಕು ೩೧-೧೨-೨೦೦೭ದ ಉದಯವಾಣಿ ಪತ್ರಿಕೆಯಲ್ಲಿ "ಕಲಿ-ಯುಗ"ವೆಂಬ ಅಂಕಣದಲ್ಲಿ ಶ್ರೀಯುತ ಬೇಳೂರು ಸುದರ್ಶನರಿಂದ ಪ್ರಸ್ತಾವಿಸಲ್ಪಟ್ಟ ವಿಷಯವು ನನ್ನ ಗಮನ ಸೆಳೆದುದರಿಂದ ನನ್ನ ಸಹಬ್ಲಾಗಿಗರ ಗಮನಕ್ಕೂ ಈ ವಿಷಯ ಬರಲಿ ಎಂದು ಇಲ್ಲಿ ಇದನ್ನು ಬರೆಯುತ್ತಿದ್ದೇನೆ.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ

ಇವತ್ತು ರಾಮು ಮನೆ ಬಿಟ್ಟು ಹೋದ. ದುಡ್ಡು ಕೇಳಲು ಬಂದಿದ್ದ. ನನ್ನ ಕೈಲಾದಷ್ಟು ಕೊಟ್ಟೆ. ಅದನ್ನು ಎಣಿಸಿಕೊಂಡು ಮತ್ತಷ್ಟು ಕೇಳಿದ. ಕೊಡಲು ನನ್ನ ಹತ್ತಿರ ಇದ್ದರೆ ತಾನೆ!!

ಮುನ್ನಾರ್ ಎಂಬ ಸ್ವರ್ಗ

ಕೇರಳದ ಪೂರ್ವಭಾಗದ ಅರಣ್ಯಗಳಲ್ಲಿ ಸಮುದ್ರಮಟ್ಟದಿಂದ ಸುಮಾರು ೧೬೦೦ ಮೀಟರು ಮೇಲೆ ಇರುವ ಸುಂದರ ಗಿರಿಧಾಮ ಮುನ್ನಾರ್. ದಟ್ಟ ಕಾಡು ಹಾಗೂ ಅಪಾರ ಹರವಿನ ಚಹಾ ತೋಟಗಳ ನಡುವೆ ಬೈತಲೆಯಂತೆ ಕಾಣುವ ಕಪ್ಪು ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲೂ ಸರಿದಾಡುವ ಮೋಡಗಳು, ಗಗನಚುಂಬಿ ಗಿರಿಶಿಖರಗಳು ಪ್ರವಾಸಿಗರ ಮನದಲ್ಲಿ ಕಲ್ಪನಾತೀತ ಭಾವನೆಗಳನ್ನು ಕೆರಳಿಸುವುದು ಅತ್ಯಂತ ಸಹಜ. ದಕ್ಷಿಣ ಇಂಡಿಯಾದ ಅತಿ ಎತ್ತರದ ಗಿರಿಶಿಖರ 'ಆನೈಮುಡಿ' ಯು ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಈ 'ಮುನ್ನಾರ್' ಪರ್ವತಗಳಲ್ಲಿ ಇದೆ. ಸದಾ ಮೋಡಗಳಿಂದ ಮುಚ್ಚಿಕೊಂಡಿರುವ ಈ ಗಿರಿಶಿಖರದ ಎತ್ತರ ೨೬೯೫ ಮೀಟರುಗಳು (೮೮೪೨ ಅಡಿಗಳು) ಎಂದು ಲೆಕ್ಕಿಸಲಾಗಿದೆ. (ಕರ್ನಾಟಕದ ಅತಿ ಎತ್ತರದ ಗಿರಿಶಿಖರ 'ಮುಳ್ಳಯ್ಯನಗಿರಿ'ಯು ಬಾಬಾ ಬುಡನ್ಗಿರಿ ಪರ್ವತಶ್ರೇಣಿಯಲ್ಲಿದೆ. ಅದರ ಎತ್ತರ ೬೩೫೬ ಅಡಿಗಳು)

ನಾನು ಮತ್ತು ಜೆಸಿಂತ ನಮ್ಮ ಮಗಳಾದ ಸ್ನೇಹಾಳ ಹುಟ್ಟುಹಬ್ಬವನ್ನಾಚರಿಸಲು ಮುನ್ನಾರಿಗೆ ಹೋಗುವುದೆಂದು ನಿಶ್ಚಯಿಸಿ ಒಂದು ದಿನ ಮುಂಚಿತವಾಗಿ ಅಲ್ಲಿಗೆ ತಲುಪಿದೆವು. ಜುಲೈ ೬ನೇ ತಾರೀಖು ನಾವು ಮುನ್ನಾರಿಗೆ ಬಂದಿಳಿದಾಗ ಒಂದು ವಾರದ ಸತತಮಳೆಯಿಂದ ತೊಯ್ದಿದ್ದ ಮುನ್ನಾರ್ ನಿಧಾನವಾಗಿ ಗರಿಗೆದರುತ್ತಿತ್ತು. ಅಲ್ಲಿಯ ಜನಕ್ಕೆ ಅದು ಆಫ್ ಸೀಸನ್. ಹಾಗಾಗಿ ಆರುನೂರು ರೂಪಾಯಿಗಳ ಹೋಟೆಲ್ ರೂಮ್ ನಮಗೆ ನಾನೂರು ರೂಪಾಯಿಗೆ ಸಿಕ್ಕಿತು. ಬಿಸಿಬಿಸಿಯಾದ ನೀರಿನಲ್ಲಿ ಸ್ನಾನ ಮುಗಿಸಿ ಪ್ರಫುಲ್ಲರಾಗಿ ಹೊರಬಂದು ಹತ್ತಿರದ ಮೌಂಟ್ ಕಾರ್ಮೆಲ್ ಚರ್ಚ್ಗೆ ತೆರಳಿ ಪ್ರಾರ್ಥನೆ ಮಾಡಿ ಅಲ್ಲೇ ಎದುರಿನಲ್ಲೇ ಇದ್ದ ಶರವಣ ಭವನದಲ್ಲಿ ನಾಷ್ಟಾ ಮುಗಿಸಿದೆವು.

ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.

ಬೆಂಗಳೂರು, ಜ.04: ಕನ್ನಡತಿ ಪ್ರೊ.ಮಾಲತಿ ರಾವ್ ಅವರ ಆಂಗ್ಲ ಕಾದಂಬರಿ 'ದಿ ಡಿಸ್ ಆರ್ಡರ್ಲಿ ಲಿ ವಿಮೆನ್' ಎಂಬ ಕೃತಿಗೆ 2007 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತಮ್ಮ ಸುತ್ತಣ ಬದುಕು ಮತ್ತು ತಮ್ಮೊ2005 ರಲ್ಲಿ ಪ್ರಕಟವಾದ ಈಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು ಆರ್. ಅನಂತಮೂರ್ತಿಯವರು ಅನಾವರಣಗೊಳಿಸಿದ್ದರು.

ಆಗಾಗ ಬೀಳ್ತಿದ್ದ ಕನಸು ಈಗ ಬೀಳ್ತಾ ಇಲ್ಲ

ಅಜಮಾಸು ಆರು ವರ್ಷದ ಹಿಂದಿನ ಸುದ್ದಿ. ಆವಾಗ ನನಗ ಮ್ಯಾಲಿಂದ ಮ್ಯಾಲೆ ಒಂದು ಕನಸು ಬೀಳ್ತಿತ್ತು. ಒಂದು ಗುಡ್ಡಾ, ಅದರ ಮ್ಯಾಲೇ ದೊಡ್ಡು ದೊಡ್ಡು ಕಲ್ಲುಬಂಡಿ. ಅದರ ಮೇಲೆ ನಾನು. ಕೆಳಗ ನೋಡಿದ್ರ ಅಂಜಿಕಿ ಆಗೋದು . ನಾನು ನಿಂತಿರೋ ಕಲ್ಲುಬಂಡಿ ಉರಳಿದ್ರ? ಅದು ಭದ್ರ ಅದನೋ ಇಲ್ಲೋ ?

ಹಳತು - ಹೊಸತು

ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ.

ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ವಾ?

ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ:


पुराणमित्येव न साधु सर्वं न चापि काव्यं नवमित्यवद्यम् ।
सन्तः परीक्ष्यान्यतरद् भजन्ते मूढः पर:प्रत्ययनेयबुद्धिः ॥

ಹಳತಾದ ಮಾತ್ರದಲಿ ಸದಾ ಸೊಗಸಲ್ಲ; ಇದು ಹೊಸತು ಎಂದೆನಲು ತಪ್ಪಿಲ್ಲದೇನಿಲ್ಲ
ಕುಳಿತೋದಿ ಒರೆಯಿಡುವರರಿತವರು - ಕಂಡವರ ಮಾತಿನಲೆ ಗಳಹುವರು ಮೂಳರು!

(ಅನುವಾದ ನನ್ನದು)

ಕ್ರಿಕೆಟ್ ಹುಚ್ಚಿಗೆ ಮಂತ್ರ ಶಿಕ್ಷೆ

ನಾನು ಬಾಲ್ಯದಲ್ಲಿ ಇದ್ದ ಊರಲ್ಲಿ ನಮ್ಮ ಮನೆಯ ಸಮೀಪವೇ ೩ಅಟದ ಮೈದಾನಗಳಿದ್ದವು. ಆಸುಪಾಸಿನ ೨೦-೨೫ ಹುಡುಗರು ಸೇರಿ (೨ಟೀಮ್+ಬಾಲ್‌ಬಾಯ್ಸ್)ಮ್ಯಾಚ್ ಆಡುತ್ತಿದ್ದೆವು. ಸಂಜೆ ೫ರಿಂದ ಆರೂವರೆ ಒಳಗೆ ಆಟ ಮುಗಿಯಬೇಕಾದುದರಿಂದ ೨೦-೨೦, ೧೦-೧೦ ಓವರ್‌ಗಳ ಮ್ಯಾಚ್. ರಜಾದಿನಗಳಲ್ಲಿ ಪೂರ್ತಿ ದಿನದಾಟ.