ಎಲ್ಲ ಪುಟಗಳು

ಲೇಖಕರು: naasomeswara
ವಿಧ: Basic page
December 31, 2007
ಹೊಸ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಥಟ್ ಅಂತ ಹೇಳಿ‘ಯಲ್ಲಿ ‘ಆ ದಿನಗಳು‘ ಚಿತ್ರ ತಂಡದ ಸದಸ್ಯರು ಭಾಗವಹಿಸುತ್ತಿದ್ದಾರೆ. ತಂಡಗಳು: ಶರತ್ ಲೋಹಿತಾಶ್ವ ಮತ್ತು ಚೈತನ್ಯ ಚೇತನ್ ಹಾಗೂ ಸುಮನಾ ಕಿತ್ಥೂರು ಅಗ್ನಿ ಶ್ರೀಧರ್ ಹಾಗೂ ಸತ್ಯಾ ಪ್ರಸಾರ: ೩೧.೧೨.೦೯ ; ರಾತ್ರಿ ೧೦.೦೦-೧೧.೦೦ ಗಂಟೆ           ೦೧.೦೧.೦೮; ಬೆಳಿಗ್ಗೆ ೧೧.೦೦-೧೨.೦೦ ಗಂಟೆ ಕಾರ್ಯಕ್ರಮವನ್ನು ನೋಡಿ. ನಿಮ್ಮ ಅಭಿಪ್ರಾಯವನ್ನು ತಿಳಿಸಿ. -ನಾಸೋ
ಲೇಖಕರು: tejaswi
ವಿಧ: Basic page
December 31, 2007
ನೆನಪಿದೆಯಾ..?? ನಮ್ಮ ಮನೇ ಮುಂದೇನೇ ನಿನ್ಮನೆ ಇತ್ತು. ಬೆಳಗಿನ ಕಿರಣ ನೊಡೊ ಮೊದ್ಲು ನಿನ್ನ ನೊಡೊ ನನ್ನಾಸೆ ನನ್ಗಷ್ಠೆ ಅಲ್ದೇ ನಿನ್ಗೂ ಇತ್ತು. ಹೂವು ಹರಿಯೋ ಸೋಗುಹಾಕಿ, ಕೈಲಿ ಹೊಪಾತ್ರೆ ಹಿಡ್ದು ಈ (ಸೋ)ಮಾರಿ ದರ್ಶನಕ್ಕೆ ಕಾದ ದಿನಗಳ್ನೆಲ್ಲಾ ಮರ್ತ್ಬಿಟ್ಯಾ. ನಾನೊ ಫುಲ್ ಡೀಸೆಂಟ್ ಹುಡ್ಗನ್ ತರ ಎಲ್ಲರಿಗಿಂತ ಮೊದ್ಲೆ ಎದ್ದು, ಮುಖ ತೊಳ್ದು, ಪುಸ್ತಕ ಹಿಡ್ದು ಮಹಡಿ ಮೇಲೆ ಹತ್ಬಿಡ್ತಿದ್ದೆ. ಒಂದಿನ ಸುಧಾನೋ, ತರಂಗಾನೋ ಹಿಡ್ದು ಮನೆಯವರೆಲ್ಲರ ಮುಂದೆ ತಮಾಷೆ ಚೆಂಡಾಗಿದ್ದೆ. ಪಾಪ ನಿಮ್ಮಪ್ಪ,…
ಲೇಖಕರು: shekarsss
ವಿಧ: Basic page
December 31, 2007
ಇದು ಜಡ ಆಡಳಿತದ ಕ್ರೌರ್ಯ ನಡೆಸಿ ಭ್ರಷ್ಟಾಚಾರದ ರಾಜಕೀಯ ಹಚ್ಚಿ ಕೋಮು ಗಲಭೆಗಳ ಬತ್ತಿ ಎಲ್ಲೆಡೆ ಜಾತಿ ಮತಭೇದಗಳ ಭಿತ್ತಿ ರಾರಾಜಿಸುತಿಹ ಅಧಿಕಾರಶಾಹಿ ವಿಜೃಂಭಿಸುತಿಹ ಬಂಡವಾಳಶಾಹಿ ಹಗಲು ಧರೋಡೆ ಮಾಡುತಿಹರು ಜನರು ಮೊಖ ಪ್ರೇಕ್ಷಕರಾಗಿಹರು ಮೇಲಿರುವವರು ಮೇಲೇರುತಿಹರು ಕೆಳಗಿರುವವರು ಕೆಲಜಾರುತಿಹರು ಅಸಮತೋಲನ, ಅಸಮಾಧಾನ ಇಲ್ಲಿ ಅಗಾಧವಾಗಿ ಬೆಳೆಸುತಿಹರು ಮಾಯವಾಗುತಿದೆ ಜಾತ್ಯಾತೀತತೆ ಎಲ್ಲಿ ಹಡಗಿದೆ ಸರ್ವ ಸೌಹಾರ್ಧತೆ ಕನಸೇ ಸಮ ಸಮಾಜ ನಿರ್ಮಾಣ ಸಾಧ್ಯವೇ ಸರ್ವ ಧರ್ಮ ಸಮ್ಮಿಲನ
ಲೇಖಕರು: rameshbalaganchi
ವಿಧ: Basic page
December 31, 2007
ನಮ್ಮೂರು ಅಂತ ಸುಮ್ಮನೆ ಹೆಸರು ಹೇಳದೆ ಬರೆದರೆ ನಿಮಗೆ ತಿಳಿಯದು. ನಮ್ಮೂರು ಪ್ರಕೃತಿಸೌಂದರ್ಯದ ತವರೂರು, ಮಲೆನಾಡಿನ ಹೃದಯ ಕವಿಪುಂಗವರು, ಕಲಾವಿದರು, ವಿಮರ್ಶಕರು ಹುಟ್ಟಿ ಪ್ರಸಿದ್ಧಗೊಳಿಸಿದ ತೀರ್ಥಹಳ್ಳಿ. ಇತ್ತ ಮಲೆನಾಡಿನ ಭೌಗೋಳಿಕತೆ, ಅತ್ತ ಹಳೆಮೈಸೂರು, ದಕ್ಷಿಣಕನ್ನಡಗಳ ಸಮ್ಮಿಶ್ರಣ ಭಾಷೆ, ಸಂಸ್ಕೃತಿ, ಊಟ ಉಡುಗೆ ಇರಸರಿಕೆ. ಮುಸಲ್ಮಾನರು, ಕ್ರೈಸ್ತರು, ಬಂಟರು, ಬ್ರಾಹ್ಮಣರು, ಸಾರಸ್ವತರು, ಒಕ್ಕಲಿಗರು, ಜೈನರು ಎಲ್ಲ ಸೇರಿ ನಿರ್ಮಿಸಿದ ಬಣ್ಣ ಬಣ್ಣದ ಊರು. ಮಳೆಗಾಲದಲ್ಲಿ ನೆನೆಯುತ್ತಾ,…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 31, 2007
ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ... ಸ್ವಾರ್ಥದ ಒಳ್ಳೆತನ ಮತ್ತು ಅಗತ್ಯ. ಕನ್ನಡದ ಉಳಿವು ಬೇರೆಲ್ಲಾ ಸಂಗತಿಗಳ ಜತೆ ಬೆಸೆದುಕೊಂಡಿರುವುದು. ಕಳೆದ ದಶಮಾನದಲ್ಲಿ ಹಿಂದೂ ಮೂಲಭೂತವಾದಿತ್ವ ಎಷ್ಟೋ ಜನರಿಗೆ ತಮ್ಮ ನಿಲುವನ್ನು ಪರಿಶೀಲಿಸಿಕೊಳ್ಳಲು ಸಹಾಯ ಮಾಡಿದ್ದು. ಲೈಂಗಿಕತೆ ಮತ್ತು ಸಮಾನತೆಯ ನಡುವಿನ ಕೊಂಡಿ. ಹೀಗೆ ಪಟ್ಟಿ ತುಂಬಾ ಉದ್ದವಿದೆ. ಅವುಗಳಲ್ಲಿ ಕೆಲವನ್ನು ಬರೆದಿಟ್ಟು ತಿದ್ದಲು ಹೊತ್ತಾಗದೆ ಹಾಗೇ ಬಿಟ್ಟಿದ್ದೇನೆ. ಇನ್ನು ನಾನು ಓದಿದ ಪುಸ್ತಕಗಳ ಬಗ್ಗೆ…
ಲೇಖಕರು: shekarsss
ವಿಧ: Basic page
December 31, 2007
ವಿಶೇಷ ಆರ್ಥಿಕ ವಲಯ ದೇಶದ ಪ್ರಗತಿಗೆ ಆಲಯ ಈ ಅಸ್ತ್ರವ ಬಳಸಿ ರೈತರನು ಸಜೀವ ದಹನ ಮಾಡುವರು ಹಸಿರನು ಹಳಿಸಿ ರಕ್ತವ ಹರಿಸಿ ಕಟ್ಟಡಗಳ ಕಾಡನು ಕಟ್ಟುವರು ಬಡವರ ಬಾಳಗೆ ಕೊಲ್ಲಿಯನಿಟ್ಟು ಹಲವರು ಸಿರಿಯಲಿ ಮೆರೆಯುವರು ದೇಶಕೆ ಬೆನ್ನೆಲುಬು ಈತನು ಕಾಲದಿ ಭೂಮಿಯ ಒಡೆಯನು ಹಸಿರನು ಬೆಳೆಸಿ ಬದುಕುವನು ಭೂಮಿಗೆ ಜೀವ ಬಿಡುವವನು ಕತ್ತಲ ಕೂಪಕೆ ಬೀಳುವ ಮುನ್ನ ನೆತ್ತರ ಹೋಕುಲಿ ಹಾಡುವ ಮುನ್ನ ಕೃಷಿಕರ ಮನಸನು ಅರಿತು ನೀನು ಎಳೆಯೋ ಪ್ರಗತಿಯ ರಥವನು
ಲೇಖಕರು: srinivasps
ವಿಧ: ಚರ್ಚೆಯ ವಿಷಯ
December 31, 2007
ನಮ್ಮ ನಿಸ್ಸಾರ್ ಅಹ್ಮದ್ ರವರು ಬರೆದಿರುವ ’ಬೆಣ್ಣೆ ಕದ್ದ ನಮ್ಮ ಕೃಷ್ಣ’ ಹಾಡಿನ ಪೂರ್ಣ ಸಾಹಿತ್ಯ ಹುಡುಕುತ್ತಿದ್ದೇನೆ... ಯಾರಲ್ಲಾದರೂ ಇದ್ದರೆ ದಯ ಮಾಡಿ ಹಂಚಿಕೊಳ್ಳುವಿರಾ? ಹಾಡಿನ ಕೊಂಡಿ ದೊರೆತರೆ ಇನ್ನೂ ಒಳಿತು... google ನಲ್ಲಿ ಹುಡುಕಿದರೆ ಉದ್ಭವ.ಕಾಮ್ ನಲ್ಲಿನ ಕೊಂಡಿ ದೊರೆಯಿತು; ಆದರೆ ಉದ್ಭವ.ಕಾಮ್ ಸದ್ಯಕ್ಕೆ ’ರಿಪೇರಿ’ ಮಾಡುತ್ತಿದ್ದಾರೆ ಎಂದು ಕಾಣುತ್ತದೆ... --ಶ್ರೀ
ಲೇಖಕರು: raghottama koppar
ವಿಧ: Basic page
December 31, 2007
ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ ೨೦೦೭ನೇ ವರುಷ ಮುಗಿಯುತ್ತ ಬಂತು. ಈಗಾಗಲೇ ಎಲ್ಲರೂ ೩೧ರ ರಾತ್ರಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ೨೦೦೭ ಹೇಗಿತ್ತು? ಅದರ ಸಿಹಿ ಕಹಿ ನೆನಪುಗಳನ್ನು ಮೆಲುಕುಹಾಕುತ್ತಾ ಬಂಧು ಮತ್ತು ಮಿತ್ರರೊಂದಿಗೆ ಕೇಕೆ ಹೊಡೆಯುವ ಕಾಲ ಹತ್ತಿರವೇ ಬಂದಿದೆ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ನಾವೆಲ್ಲ ಇನ್ನೊಂದು ವಿಚಾರವನ್ನು ಹಾಕಿಕೊಂಡಿರುತೇವೆ. ಅದು ಹೊಸ ವರ್ಷದಿಂದ ಬೆಳಿಗ್ಗೆ ಜಾಗಿಂಗ್…
ಲೇಖಕರು: roopablrao
ವಿಧ: ಬ್ಲಾಗ್ ಬರಹ
December 31, 2007
ಆಗ ನನ್ನ ೧೦ನೇ ತರಗತಿ ಒಮ್ಮೆ ಕವನ ವಾಚನ ಸ್ಪರ್ಧೆ (ಸಿದ್ದಯ್ಯ ಪುರಾಣಿಕರವರ ಸ್ಮರಣಾರ್ಥವಿರಬೇಕು) ಮತ್ತೊಬ್ಬ ಹುಡುಗಿ (ನಾವಿಬ್ಬರೇ ಹುಡುಗಿಯರು) ಒಂದು ಕವನ ಓದಿದಳು. ಹೆಂಗಸರ ಆದ್ಯತೆಗಳು ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ . ಆಗ ಅದರ ಅರ್ಥ ನನಗೆ ಅಷ್ಟು ನನಗೆ ಆಗಲಿಲ್ಲ . ಈಗ ಬೆಳೆದಂತೆಲ್ಲ ಅದರ ಅರ್ಥ ಅರಿವಾಗುತ್ತಿದೆ. ಅದರ ಸಾರಾಂಶ ನನ್ನ ಬದುಕಿಗೆ( ಪ್ರೊಬಾಬಲಿ ಎಲ್ಲ ಹುಡುಗಿಯರ ಬದುಕಿಗೆ) ತುಂಬ ಹತ್ತಿರವಾಗಿದೆ. ಓದುವಾಗ ನನ್ನ ಗುರಿ ಓದಬೇಕು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.…
ಲೇಖಕರು: rameshbalaganchi
ವಿಧ: Basic page
December 30, 2007
ಇದೀಗ ತೂಗುಕತ್ತಿ ನೆತ್ತಿಯಮೇಲಿದೆ. ನನ್ನ ಮಡದಿ ತೊಗರಿನುಚ್ಚಿನುಂಡೆ ತಟ್ಟೆಗೆ ಹಾಕಿ ಟೀಪಾಯ್ ಮೇಲಿಟ್ಟದ್ದನ್ನು ಕಾಣದವನಂತೆ ಈಸೀಚೇರಿನಲ್ಲಿ ಕೂತು ಅದಾಗಲೇ ಮೂರು ಬಾರಿ ತಿರುವಿಹಾಕಿದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯನ್ನು ತೀರ ಆಸಕ್ತಿಯಿಂದ ಓದುತ್ತಿರುವಂತೆ ನಟಿಸಿದೆ. ಅವಳೆದುರು ನಾನು ತಿಂಡಿಯ ತಟ್ಟೆಯನ್ನು ನೋಡಿದರೆ ನನ್ನ ಗುಟ್ಟು ನನ್ನ ಮೂಗಿನಿಂಡಲೇ ರಟ್ಟಾಗುವುದು ಸ್ವತ:ಸಿದ್ಧ!! ಅವಳು ರೇಗುತ್ತ "ಅದೇನು ಒಳ್ಳೆ ರಿಟೈರ್ ಆದ ಮುದುಕರ ಥರ ಅಷ್ಟುಸಾರಿ ಓದಿದ್ದನ್ನೇ ಓದ್ತೀರಿ? ಬೆಳಗಿನಿಂದ…