ವಿಧ: ಬ್ಲಾಗ್ ಬರಹ
November 19, 2007
ಗೋದಾವರಿ, ನರ್ಮದೆಗಳ ನಡುವಿನ ನಾಡು, ದಿಟವಾದ, ಬುಡ ಕರ್ನಾಟ ಅನ್ನುತ್ತಾರೆ ಶಂಬಾ ಜೋಶಿಯವರು. ಅದು ಸುಮ್ಮನೇ ಎದೆ ಉಬ್ಬಿಸಿ ಬೀಗಿ ಹೇಳುವದಕ್ಕಲ್ಲ. ಅವರ 'ಕಣ್ಮರೆಯಾದ ಕನ್ನಡ' ಹೊತ್ತಗೆಯಲ್ಲಿ ಈ ಬಗ್ಗೆ ಹಲವು ಪುರಾವೆಗಳನ್ನಿತ್ತಿದ್ದಾರೆ. 'ಶಂಬಾ ಕ್ರುತಿ ಸಂಪುಟ-೧' ರಲ್ಲಿ ಅವರ ಬಿಡಿ ಹೊತ್ತಗೆಗಳನ್ನು ಕೂಡಿಸಿ ಸಂಪುಟ ಮಾಡಿದ್ದಾರೆ. ಅವರು ಮಹಾರಸ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಬರುವ kurumvar ಜನಾಂಗದ ಬಗ್ಗೆ ಬರೆದಿದ್ದಾರೆ.
ನಾನು ಈ ಜನಾಂಗದ ಬಗ್ಗೆ ನೆಟ್ಟಿನಲ್ಲಿ ಏನಾದರೂ ಸಿಗುತ್ತಾ ಅಂತ…
ವಿಧ: ಚರ್ಚೆಯ ವಿಷಯ
November 18, 2007
ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು ತೊರೇ|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|
ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ ಹೇಳ್ತಿರಾ?
ವಿಧ: ಬ್ಲಾಗ್ ಬರಹ
November 18, 2007
(ಆಯುರ್ವೇದ ಸಂಬಂಧಿತ ಭಾಷಾಂತರಗಳ ಕುರಿತು ಬರೆದ ಲೇಖನ)
ಮೈಸೂರು ವಿಶ್ವವಿದ್ಯಾನಿಲಯ ವೈದ್ಯವಿಶ್ವಕೋಶ ಸಮಿತಿಗೆ ಡಾ. ಎಂ. ಜಿ ಆರ್. ಅರಸರು ಸದಸ್ಯರಾಗಿ ನೇಮಕಗೊಂಡಿದ್ದರಬಗ್ಗೆ, ಅಥವಾ ಡಾ.ಜಯಪ್ರಕಾಶನಾರಾಯಣರವರ ನೇತ್ರತ್ವದಲ್ಲಿ ಆಯುರ್ವೇದ ಶ್ಲೋಕಗಳನ್ನು ಐದು ವಿದೇಶಿ ಭಾಷೆಗಳಿಗೆ ಭಾಷಾಂತರಿಸುವ ಅಪೂರ್ವಯೋಜನೆಗಳಿಗೆ ಸಂಬಂಧ ಪಟ್ಟಂತೆ ಈಗಾಗಲೇ ಸಾಕಷ್ಟು ಅಭಿನಂದನೆಗಳ ಸುರಿಮಳೆಯಾಗುತ್ತಿರಬಹುದು. ಆದರೆ ನಾನು ಸಧ್ಯಕ್ಕೆ ಅಭಿನಂದಿಸಲಾರೆ! ಅಭಿನೆಂದನೆಯನ್ನು ಕಾಯ್ದಿಟ್ಟಿದ್ದೇನೆ!!
ನಿಮಗೆ ಒಂದು…
ವಿಧ: ಬ್ಲಾಗ್ ಬರಹ
November 18, 2007
ಚಂದ್ರಶೇಖರ್ ರಘು: ಕರ್ನಾಟಕಕ್ಕೆ ಬೇಕಾಗಿದ್ದ ಭರವಸೆಯ ದಾಂಡಿಗ. ರಣಜಿಗೆ ಪಾದಾರ್ಪಣ ೨೦೦೨-೦೩ ಋತುವಿನಲ್ಲಿ ಮಾಡಿದರೂ ಸ್ಥಿರವಾಗಿ ತಂಡದಲ್ಲಿರಲು ರಘು ಪರದಾಡುತ್ತಿದ್ದರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳದೇ ತಂಡದಲ್ಲಿದ್ದರೂ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ. ೪ ಋತುಗಳಲ್ಲಿ ಆಡಿದ್ದು ೯ ಪಂದ್ಯಗಳಲ್ಲಿ. ಆಗ ರಘು ಆಯ್ಕೆಯಾಗುತ್ತಿದ್ದು, ಆಫ್ ಸ್ಪಿನ್ ಬೌಲಿಂಗ್ ಮಾಡಬಲ್ಲ ಬೌಲರ್ ಮತ್ತು ಸಾಧಾರಣವಾಗಿ ಬ್ಯಾಟಿಂಗ್ ಮಾಡಬಲ್ಲ ಆಟಗಾರನಾಗಿಯೇ ವಿನ: ಪಕ್ಕಾ ಬ್ಯಾಟ್ಸ್-ಮನ್ ಆಗಿ…
ವಿಧ: Basic page
November 18, 2007
ಸಿಪ್ಪೆ ಸಮೇತ ತಿನ್ನುವುದು" ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು"" ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?"" ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿತವಾಗಿರುತ್ತವೆ."ನನ್ನದಲ್ಲ ನಮ್ಮದು"ನನ್ನ ಮಕ್ಕಳು, ನನ್ನ ಮನೆ, ನನ್ನ ಗಾಡಿ ಅಂತ ಹೇಳ್ತಾ ಇರ್ತೀಯಲ್ಲ ಎಲ್ಲವೂ ನಿನ್ನದೇನಾ? ನಾನೂ ನಿನ್ನೊಟ್ಟಿಗೇ ಇದ್ದೇನೆಂದು ನಿಮಗೆ ಅನ್ನಿಸೋಲ್ವಾ?" ಸಿಟ್ಟಾಗಿ ಕೇಳಿದಳು ತ್ಯಾಂಪಿ ಗಂಡನನ್ನೊಮ್ಮೆ." ಹಾಗಾದರೆ ನಾನು ಏನು ಮಾಡಬೇಕು…
ವಿಧ: Basic page
November 18, 2007
ಸಿಪ್ಪೆ ಸಮೇತ ತಿನ್ನುವುದು" ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು"" ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?"" ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿತವಾಗಿರುತ್ತವೆ."ನನ್ನದಲ್ಲ ನಮ್ಮದು"ನನ್ನ ಮಕ್ಕಳು, ನನ್ನ ಮನೆ, ನನ್ನ ಗಾಡಿ ಅಂತ ಹೇಳ್ತಾ ಇರ್ತೀಯಲ್ಲ ಎಲ್ಲವೂ ನಿನ್ನದೇನಾ? ನಾನೂ ನಿನ್ನೊಟ್ಟಿಗೇ ಇದ್ದೇನೆಂದು ನಿಮಗೆ ಅನ್ನಿಸೋಲ್ವಾ?" ಸಿಟ್ಟಾಗಿ ಕೇಳಿದಳು ತ್ಯಾಂಪಿ ಗಂಡನನ್ನೊಮ್ಮೆ." ಹಾಗಾದರೆ ನಾನು ಏನು ಮಾಡಬೇಕು…
ವಿಧ: ಚರ್ಚೆಯ ವಿಷಯ
November 18, 2007
ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?
ವರ್ತುಲ ರಸ್ತೆಯಲ್ಲಿ, ಪ್ರತಿ ದಿನದ ದಿನಚರಿಯಲ್ಲಿ
ನಗರದ ಧಾವಂತತೆ ರಸ್ತೆಯಲ್ಲಿ ಎದ್ದು ಕಾಣುತ್ತಿತ್ತು.ಕಣ್ಣೆಣಿಕೆಯಷ್ಟು ದೂರವೂ ಗಾಡಿಗಳು ದ್ವಿಚಕ್ರ, ತ್ರಿಚಕ್ರ,ಚತುರ್ಚಕ್ರ ಮತ್ತು ಬಹು ಚಕ್ರ ವಾಹನಗಳದ್ದೇ ಸಂತೆ, ಅದೂ ಈ ವರ್ತುಲ ರಸ್ತೆಯಲ್ಲಂತೂ ಎತ್ತನೋಡಿದರತ್ತ ಅವುಗಳೇ. ಪ್ರತಿ ಸವಾರರಿಗೂ ಧಾವಂತತೆಯ ಅವರದ್ದೇ ಆದ ಲೋಕ,ತಲೆಬಿಸಿಯ ಸಂಸಾರ, ಕಾಯಿದೆ ಕಾನೂನು, ಮತ್ತು ಕಾರಣ. ಪ್ರಾಯಶಃ ಡ್ರೈವಿಂಗ್ ಕಲಿಯುವಾಗಲಷ್ಟೇ ನೋಡಿಕೊಂಡಿದ್ದ,…
ವಿಧ: Basic page
November 17, 2007
ನಾನು ಸಣ್ಣವನಿದ್ದಾಗ ನನ್ನ ತಂದೆಯವರು ಅವರ ಅಣ್ಣ
ತಮ್ಮಂದಿರೊಡನೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈಗ ಎಣಿಸಿದರೆ ಆಗಿನ ಹಳ್ಳಿಯ ಜೀವನ
ನಮಗೆಲ್ಲ ತುಂಬಾ ಮಜಾ ತರುವಂತಹದಿದ್ದಿತ್ತು. ಹಳ್ಳಿಯ ಆರೋಗ್ಯಮಯ ವಾತಾವರಣ ಮೈಬಗ್ಗಿಸಿ
ದುಡಿಯಲು ಎಲ್ಲರನ್ನೂ ಪ್ರೆರೇಪಿಸಿ ಅರೋಗ್ಯಮಯ ದೇಹ, ಕೌಟುಂಬಿಕ ಪರಿಸರ ಉಂಟು
ಮಾಡುತ್ತಿತ್ತು. ಆದರೆ ಆಗ ಎಲ್ಲರೂ ಉತ್ತಮರೇ ಎಂದೋ ಅಥವಾ ಎಲ್ಲ ಕಡೆ ನ್ಯಾಯಯುತ ಜೀವನವೇ
ನಡೆಯುತ್ತಿತ್ತು ಅಂತಲ್ಲ. ಅಂದರೆ ಕುಟುಂಬದ ಹಿರಿಯರಿಂದಾಗಿ ಎಲ್ಲರೂ ಹೊಂದಿಕೊಂಡು
ಹೋಗುವುದು…
ವಿಧ: Basic page
November 17, 2007
ರಾಜ ಮಾರ್ಗ
ಇಲ್ಲ, ರಾಜಮಾರ್ಗ ಮುಚ್ಚಲೂ ಇಲ್ಲ
ಅದು ಪ್ರತಿಬಂದಿತವೂ ಅಲ್ಲ
ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ
ಗಮ್ಯದ ತನಕ ಸುದೃಢ ಘನ ಗಂಭೀರ
ಆದರೆ ಕ್ರ ಮಿಸರು ಅದರಲಿ ಹಲವರು
ಅವರೋ ತಾವೇ ಕಿರುದಾರಿ ಹುಡುಕುವರು
ಅಲೆದಲೆದು ಬಳಲಿ ಗಮ್ಯವ ತಲುಪದವರು
ಸೋತು ಕೈ ಕೈ ಹಿಸುಕಿ ಮರುಗುವರು
ಆದರೂ ರಾಜಮಾರ್ಗ ಇನ್ನೂ ಹಾಗೆಯೇ ಇದೆ
ಸುವಿಹಾರಿ ಚೇತೋಹಾರಿ ಘನ ಗಂಭೀರದೆ
ಕಾಯುತಲಿದೆ ಅದು ಒಯ್ಯಲು ತೀರಕೆ
ಸೋತು ಬಳಲಿ ಬರುವರೆಲ್ಲರ ಗಮ್ಯಕೆ
ವಿಧ: Basic page
November 17, 2007
ಪ್ರಹರಿ
ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ
ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ
ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ
ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ
ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ
ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ
ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ
ಸುಡುಸುಡುವ ಬಿಸಿಲಿರಲಿ ಮೈಕೊರೆವ ಚಳಿಯಿರಲಿ
ಬಸಿದ ಕಣ್ಣೀರಿರಲಿ ಹರಿದ ಕೆನ್ನೀರಿರಲಿ
ನೊವಿರಲಿ ನಲಿವಿರಲಿ ತನ್ನವರ ನೆನಪಿನಲಿ
ಕಾವನೀ ಪರಿ ಪ್ರಹರಿ…