ವಿಧ: ಬ್ಲಾಗ್ ಬರಹ
January 31, 2015
ಗುಲ್ಜಾರರು ಬರೆದ, ಭಾರತ ಪಾಕಿಸ್ತಾನಗಳ ಬಾಂಧವ್ಯಕ್ಕಾಗಿ ಟೈಮ್ಸ್ ಆಫ್ ಇಂಡಿಯಾ ಹಾಗೂ ಪಾಕಿಸ್ತಾನದ ಜಂಗ್ ಸಮೂಹದ ಪತ್ರಿಕೆಗಳ ಜಂಟಿ ಸಹಯೋಗದಲ್ಲಿ ನಡೆದ ‘ಅಮನ್ ಕಿ ಆಶಾ’ ಕಾರ್ಯಕ್ರಮಗಳ ಸರಣಿ ಶೀರ್ಷಿಕೆ ಗೀತೆಯ ಅನುವಾದ
. 'ಶಾಂತಿಯ ಆಶಾಕಿರಣ ' (ಅಮನ್ ಕಿ ಆಶಾ)
ಅನುವಾದ : ಲಕ್ಷ್ಮೀಕಾಂತ ಇಟ್ನಾಳ
ನೋಡು ನೋಡಲ್ಲಿ ನೆರಳುಗಳ ಕೆಲವು, ದೂರ ದೂರದಲ್ಲಿ
ಕೂಗಿ ಕರೆದರೂ ಗತ ಕಾಲದಂತೆ ಮತ್ತಾರೂ ಬರಲಿಲ್ಲ ಇಲ್ಲಿ
ಬನ್ನಿ ಬಾರಿಸೋಣ ಢೋಲು, ಹಾಸೋಣ ನದಿಯನ್ನು ಮತ್ತಿಲ್ಲಿ…
ವಿಧ: ಬ್ಲಾಗ್ ಬರಹ
January 29, 2015
ಅರ್ಜುನ್... ಎಲ್ಲಪ್ಪಾ ಹೊರಟಿದ್ದೀಯ?
ಅಮ್ಮ..... ಆಫೀಸಿನ ಕೆಲಸದ ಮೇಲೆ ತಮಿಳುನಾಡಿಗೆ ಹೋಗುತ್ತಿದ್ದೇನೆ. ಒಂದು ಹದಿನೈದು ದಿನದ ಕೆಲಸ ಇದೆ, ಅದು ಮುಗಿದ ಕೂಡಲೇ ವಾಪಸ್ ಬರುತ್ತೇನೆ. ಈ ಮಧ್ಯದಲ್ಲಿ ನಿಮಗೇನಾದರೂ ಸಹಾಯ ಬೇಕಿದ್ದರೆ, ಇನ್ಸ್ಪೆಕ್ಟರ್ ತ್ರಿವಿಕ್ರಂ ಅವರ ನಂಬರ್ ಕೊಟ್ಟಿರುತ್ತೇನೆ, ಅವರನ್ನು ಸಂಪರ್ಕಿಸಿ.
ಸರೀನಪ್ಪ ಹಾಗೇ ಆಗಲಿ, ನೀನು ಹುಷಾರು.... ಜಾಸ್ತಿ ತಲೆ ಕೆಡಿಸಿಕೊಂಡು ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಆಗಾಗ ಫೋನ್ ಮಾಡುತ್ತಿರು, ಟೈಮ್ ಟೈಮ್ ಗೆ ಸರಿಯಾಗಿ ತಿನ್ನು…
ವಿಧ: ಬ್ಲಾಗ್ ಬರಹ
January 28, 2015
ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ ಮೈಸೂರಿನಲ್ಲಿ ಜನಿಸಿ ಭವ್ಯ ನಗರಿ ಮುಂಬೈನಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಬದುಕು ಕಟ್ಟಿಕೊಂಡು ಜಗದ್ವಿಖ್ಯಾತಿ ಪಡೆದು ಭಾರತ ಕೊಡಮಾಡುವ ಪದ್ಮ ಪ್ರಶಸ್ತಿ ಅಲ್ಲದೆ ಅಂತರಾಷ್ಟ್ರೀಯ ಮ್ಯಾಗ್ಸೆಸೆ ಪ್ರಶಸ್ತಿ ಪಡೆದು ಸುಮಾರು ಆರು ದಶಕಗಳ ಕಾಲ ವ್ಯಂಗ್ಯ ಚಿತ್ರಕಾರನಾಗಿ ಸ್ವಾಭಿಮಾನದಿಂದ ಬದುಕಿ ವೃದ್ಧಾಪ್ಯದ ಕಾಯಿಲೆಗಳಿಂದಾಗಿ ಪುಣೆಯ ದೀನಾನಾಥ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಈ ವರ್ಷದ ಗಣ ರಾಜ್ಯೋತ್ಸವದ ದಿನದ ಸಾಯಂಕಾಲದಂದು ತಮ್ಮ…
ವಿಧ: ಬ್ಲಾಗ್ ಬರಹ
January 27, 2015
ವೀಣಾದೇವಿಯವರು ಮತ್ತು ತ್ರಿವಿಕ್ರಂ ಜೊತೆ ಮಾತಾಡಿದ ಮೇಲೆ ಮನಸು ನಿರಾಳವಾಗಿತ್ತು. ಇನ್ನೇನು ಹೆಚ್ಚು ಕಡಿಮೆ ಎಲ್ಲಾ ಮುಗಿದಂತೆ. ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ, ಜಾನಕಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದುಕೊಂಡು ಜಾನಕಿಯ ಫೋಟೋ ಕೈಗೆ ತೆಗೆದುಕೊಂಡು ಅದನ್ನೇ ನೋಡುತ್ತಾ.. ಜಾನೂ.... ನಿನ್ನನ್ನು ಉಳಿಸಿಕೊಳ್ಳಳಂತೂ ನನ್ನ ಕೈಲಿ ಆಗಲಿಲ್ಲ, ಇನ್ನೇನು ಸ್ವಲ್ಪ ದಿನದಲ್ಲೇ ನಿನ್ನನ್ನು ಕೊಂದ ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸುತ್ತೇನೆ ಜಾನೂ. ಐ ಲವ್…
ವಿಧ: ಬ್ಲಾಗ್ ಬರಹ
January 27, 2015
ಹಿಂದೆ ಎಂದೋ ಇಳಿಸಿಕೊಂಡ ಈ ಪುಸ್ತಕವನ್ನು ತೀರಾ ಇತ್ತೀಚಿಗಷ್ಟೇ ಓದಿದೆ. ಇದು ಇಂಗ್ಲಿಷ್ ನಿಂದ ಗೌರೀಶ ಕಾಯ್ಕಿಣಿ ಅವರು ಅನುವಾದ ಮಾಡಿದ ಪುಸ್ತಕ. ಪ್ರತಿಯೊಬ್ಬರ ಬದುಕು ರೂಪುಗೊಳ್ಳುವುದು ಹೇಗೆ? ನಮ್ಮ ನಿಮ್ಮ ಜೀವನ, ಸ್ವಭಾವ ಹೀಗಿರಲು ಕಾರಣಗಳೇನು? ಮಕ್ಕಳನ್ನು ಬೆಳೆಸುವಾಗ ತಾಯಿ- ತಂದೆಯರು, ಶಾಲೆಯಲ್ಲಿ ಶಿಕ್ಷಕರು ಗಮನಿಸಬೇಕಾದುದೇನು? ಇವೇ ಮು೦ತಾದ ಸಂಗತಿಗಳು ಇಲ್ಲಿ ಇವೆ. ಎಳೆಯತನದ ಯಾವೆಲ್ಲ ಸಂಗತಿಗಳು ಮನುಷ್ಯನ ಇಡೀ ಜೀವನವನ್ನು ಪ್ರಭಾವಿಸಿ ಯಶಸ್ವೀ ಜೀವನಕ್ಕೋ ವಿಫಲತೆಗೋ ಹೇಗೆ…
ವಿಧ: ಬ್ಲಾಗ್ ಬರಹ
January 26, 2015
http://www.kannadaprabha.com/nation/obama-to-plant-a-peepal-tree-sapling...
ಅಂದು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದು ಇಂದಿಗೂ ಸತ್ಯ. ಗಾಂಧೀಜಿ ಅವರ ಸ್ಫೂರ್ತಿಯ ಚಿಲುಮೆ ಭಾರತದಲ್ಲಿ ಇಂದಿಗೂ ಜೀವಂತವಾಗಿದೆ. ಇದು ವಿಶ್ವಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾಗಿದೆ. ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಮತ್ತು ಜನರೊಂದಿಗೆ ನಾವು ಇದೇ ಪ್ರೀತಿ ಮತ್ತು ಶಾಂತಿಯ ಸ್ಪೂರ್ತಿಯೊಂದಿಗೆ ಬದುಕುವಂತಾಗಬೇಕು. ಒಬಾಮ ಬರೆದದ್ದು...
http://indiatoday.intoday.in/story/…
ವಿಧ: ಬ್ಲಾಗ್ ಬರಹ
January 23, 2015
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ ಈ ಧೀರ ಕುವರನ ಜನುಮ ದಿನ (ಜನವರಿ 23) ದಂದು ಸದಾ ಕ್ರಿಯಾಶಿಲರಾಗಿದ್ದ ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಿಟ್ಟ ಆ ಮಹಾನ್ ಚೇತನವನ್ನು ನಾವೆಲ್ಲಒಂದಾಗಿ ಸ್ಮರಿಸೋಣ.ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ…
ವಿಧ: ಬ್ಲಾಗ್ ಬರಹ
January 23, 2015
ಇನ್ಸ್ಪೆಕ್ಟರ್ ತ್ರಿವಿಕ್ರಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎರಡು ದಿನ ಕಳೆದಿತ್ತು. ನಡುವಲ್ಲಿ ಶನಿವಾರ ಭಾನುವಾರ ಬಂದಿದ್ದರಿಂದ ಅವರಿಗೆ ತೊಂದರೆ ಕೊಡುವುದು ಬೇಡ ಎಂದು ಸುಮ್ಮನಾಗಿದ್ದೆ. ಒಮ್ಮೆ ಜಾನಕಿಯ ತಂದೆ ತಾಯಿಯರನ್ನು ಮಾತಾಡಿಸಿಕೊಂಡು ಬರೋಣ ಎಂದು ಅವರ ಮನೆಗೆ ಬಂದು ಅವರ ಕುಶಲ ಸಮಾಚಾರಗಳನ್ನು ವಿಚಾರಿಸಿಕೊಂಡು ವಾಪಸ್ ಮನೆಗೆ ಬರಬೇಕಾದರೆ, ವೀಣಾದೇವಿ ಅವರು ಕರೆ ಮಾಡಿದರು. ಇವರೇನು ಅಪರೂಪವಾಗಿ ನನಗೆ ಕರೆ ಮಾಡಿದ್ದಾರೆ ಎಂದು ಕರೆ ಸ್ವೀಕರಿಸಿ ಹಲೋ ಹೇಳಿ ಮೇಡಂ ಎಂದೆ.
ಏನಿಲ್ಲಪ್ಪ…
ವಿಧ: ಬ್ಲಾಗ್ ಬರಹ
January 21, 2015
ಬಿದಿರ ಕೊಳಲುಗಳ ಗುಚ್ಛವನು ಹಿಡಿದು
ಕೈಯಲೊಂದದರ ನಮೂನೆಯನು ಹಿಡಿದು
ತನ್ನದೆ ಸ್ವರ ರಾಗಕೆ ತಾನೇ ಮನಸೋತು
ಕದೆದರಿದ ತಲೆಗೂದಲು ಕುರುಚಲು ಗಡ್ಡ
ಬಡೆತನವೆ ಮೈವೆತ್ತ ಬಡಕಲು ಕಾಯಕ ಜೀವಿ
ಸಾಗಿದ್ದಾನೆ ಬೀದಿಗುಂಟ ಹಸಿದೊಡಲು ತುಂಬಲು
ದಿನದ ತುತ್ತು ಕೂಳು ಗಳಿಸಲು
ಅದು ಕೊಳಲೆ ಕೊಳಲಲ್ಲ ಪೀಪಿಯೆ ಪೀಪಿಯಲ್ಲ !
ಎರಡರ ಮಧ್ಯದ ಒಂದು ಬಿದಿರು ವಾದ್ಯ
ತನ್ನದೆ ರಾಗ ಪ್ರಸ್ತಾರದ ಆವಿಷ್ಕಾರ ತಾನೇ
ರಾಗ ಸಂಯೋಜಕ ಶಾಸ್ತ್ರೀಯ ಸಂಗೀತದ
ಕಟ್ಟು ಪಾಡುಗಳಿಲ್ಲ ಕೊರಳಿಂದ ಹೊರಟ
ಆ ಕ್ಷಣದ ಉಸಿರು ನಾದದ…
ವಿಧ: ಬ್ಲಾಗ್ ಬರಹ
January 21, 2015
ಹಲೋ... ಹಲೋ... ಅರ್ಜುನ್, ಆ ವ್ಯಕ್ತಿ ಕೊಲೆಗಾರನಿಗೆ ಫೋನ್ ಮಾಡಿದ್ದ. ಯಾವುದೋ ಒಂದು ಡೀಲ್ ಒಪ್ಪಿಸಲು ಕರೆ ಮಾಡಿದ್ದ, ನಾಳೆ ಅವನಿಗೆ ಕೊಟ್ಟಾಯಂ ನ ಅವನ ಮನೆಯ ಬಳಿ ಇರುವ ಪಾರ್ಕಿನ ಬಳಿ ಭೇಟಿ ಮಾಡಲು ಬರಲು ಹೇಳಿದ್ದಾನೆ. ಇದರ ಅರ್ಥ ಆ ವ್ಯಕ್ತಿಗೆ ಇವರು ಅರೆಸ್ಟ್ ಆಗಿರುವುದು ಗೊತ್ತಿಲ್ಲ ಎಂದಾಯಿತು. ಆದರೆ ನಾವು ಈ ಕೂಡಲೇ ಕೊಟ್ಟಾಯಂಗೆ ಹೊರಡಬೇಕು. ನಾವು ಈಗಲೇ ಹೊರಡುತ್ತಿದ್ದೇವೆ, ಅಲ್ಲಿಂದ ಬಂದ ಮೇಲೆ ನಾನು ನಿಮಗೆ ಅಪ್ಡೇಟ್ ಮಾಡುತ್ತೇನೆ.
ಸರ್... ಸರ್.... ನಿಮ್ಮ ಬಳಿ ಒಂದು ರಿಕ್ವೆಸ್ಟ್…