ಅಗಲಿಕೆ

ಅಗಲಿಕೆ






ತೊಟ್ಟ ಬಳೆಗಳು

ಕೈಯ ತೊರೆದವು

ನಿಲ್ಲದೇ ಸುರಿದವು

ಕಣ್ಣ ಹನಿಗಳು


ಒಂದು ಚಣದಲ್ಲೇ



ದೂರವಾಯ್ತು ಧೈರ್ಯ  

ಮನಸೆಲ್ಲೆಲ್ಲೋ ಓಡಿತು

ಬಿಟ್ಟು ನನ್ನನೊಂಟಿ ;

ಕಲ್ಲುಮನಸಿನ ನಲ್ಲ

ನನ್ನ  ತೊರೆದಿರಲು

ಜೊತೆಯಲೇ ಇವರೆಲ್ಲ

ಹೊರಟರಲ್ಲ!


ಹೇ ಜೀವ!



ಹೋಗುವುದಾದರೆ

ನೀನೂ ಹೋಗು!

ನೀನೇಕುಳಿದೆ

ಗೆಳೆಯರ ಗುಂಪನು

ಸೇರದೇನೇ?


ಸಂಸ್ಕೃತ ಮೂಲ: ಅಮರುಕನ ಅಮರು ಶತಕದಿಂದ (ಪದ್ಯ 31/35) :




ಪ್ರಸ್ಥಾನಂ ವಲಯೈಃ ಕೃತಂ ಪ್ರಿಯಸಖೈರಸ್ರೈರಜಸ್ರಂ ಗತಂ

ಧೃತ್ಯಾ ನ ಕ್ಷಣಮಾಸಿತಂ ವ್ಯವಸಿತಂ ಚಿತ್ತೇನ ಗಂತುಂ ಪುರಃ

ಗಂತುಂ ನಿಶ್ಚಿತಚೇತಸಿ ಪ್ರಿಯತಮೇ ಸರ್ವೇ ಸಮಂ ಪ್ರಸ್ಥಿತಾ

ಗಂತವ್ಯೇ ಸತಿ ಜೀವಿತಪ್ರಿಯ ಸುಹೃತ್ಸಾರ್ಥಃ ಕಿಮುತ್ಯಜ್ಯತೇ ॥




प्रस्थानं वलयैः कृतं प्रियसखैरस्रैरजस्रं गतं

धृत्या न क्षणमासितं व्यवसितं चित्तेन गन्तुं पुरः ।

गन्तुं निश्चितचेतसि प्रियतमे सर्वे समं प्रस्थिता

गन्तव्ये सति जीवितप्रियसुहृत्सार्थः किमु त्यज्यते ॥३१॥ (३५)


-ಹಂಸಾನಂದಿ




ಚಿತ್ರಕೃಪೆ: ವಿಕಿಪೀಡಿಯಾ. ರಾಜಾ ರವಿವರ್ಮನ "ವನವಾಸದಲ್ಲಿ ದಮಯಂತಿ" ಅನ್ನುವ ಓಲಿಯೋಗ್ರಾಫ್


ಕೊ: ಈ ಚಿತ್ರದಲ್ಲಿ "ತೊಟ್ಟ ಬಳೆಗಳು" ಕೈಯನ್ನು ತೊರೆದಿಲ್ಲದಿದ್ದರೂ, ಇದ್ದಿದ್ದರಲ್ಲಿ ಪದ್ಯದ ಭಾವಕ್ಕೆ ಹೊಂದುತ್ತೆಂದು ಹಾಕಿದೆ :)




ಕೊ.ಕೊ:  ತಲೆಬರಹವನ್ನು ಕೊಟ್ಟ ಮಿತ್ರ ಶ್ರೀಕಾಂತ ಮಿಶ್ರಿಕೋಟಿಯವರಿಗೆ ನಾನು ಆಭಾರಿ

 
Rating
No votes yet