ಅಣ್ಣ ಹಜಾರೇ ಉಪವಾಸ ಮುರಿದರು....
ಹಿರಿಯರಾದ ಅಣ್ಣಾ ಹಜಾರೆ ಉಪವಾಸ ಮುರಿದಿದರು; ಸದ್ಯಕ್ಕೆ ಸರಕಾರದ ಮುಖ ಉಳಿಯಿತು. ಆದರಿದು ಭ್ರಷ್ಟಾಚಾರದ ವಿರುದ್ಧ ಮೊದಲ ಜಯ ಎಂದು ಬೀಗಬಹುದೇ?!
ಹುಲಿಗೆ ಹುಲ್ಲು ತಿಂದು ಬದುಕುವುದನ್ನಾದರೂ ಯಾರಾದರೂ ಕಲಿಸಿದರೆಂದರೆ ನಂಬಬಹುದು; ಆದರೆ ರಾಜಕಾರಿಣಿಗೆ, ಭ್ರಷ್ಟಾಚಾರ ತ್ಯಜಿಸಿ ಬದುವುದನ್ನು ಬುದ್ಧನೊಬ್ಬ ಹೇಳಿಕೊಟ್ಟನೆಂದರೆ ತಮಾಷೆಗಾಗಿಯಾದರೂ ನಂಬಲಾದೀತೇ?
ಭ್ರಷ್ಟಾಚಾರವೆನ್ನುವುದು ತಾಲೂಕು ಕಚೇರಿ ಗುಮಾಸ್ತನ ಶಾಕಾಯ-ಲವಣಾಯ ಲಂಚವಾಗಿದ್ದರೆ, ಅದಕ್ಕೂ ಮೀರಿ, ಲೋಕಾಯುಕ್ತ ಪೊಲೀಸರು ಹಿಡಿದುಹಾಕುವ ನೂರು-ನೂರು ಕೋಟಿ ಮೌಲ್ಯದ ಖದೀಮ ಆಸ್ತಿ-ಪಾಸ್ತಿಯ ಸಚಿತ್ರ ಬೋಲ್ಡ್ ಕ್ಯಾಪ್ಶನ್ ವರದಿಗೂ ಇದು ಸೀಮಿತವಾಗಿದ್ದರೆ ಲೋಕಪಾಲದಂತಂತಹ ಅತ್ಯುನ್ನತ ಪ್ರಾಧಿಕಾರ ಇದನ್ನು ಮಣಿಸಬಲ್ಲುದೇನೋ. ಆದರಿದು ಈಗ ಉನ್ನತ ರಾಜನೈತಿಕ ರಣತಂತ್ರವೇ ಆಗಿ ಕೂತಿದೆ; ಅಲ್ಲದೆ ನಮಗರಿವಿಲ್ಲದೆಯೇ ತಕ್ಕ ಮಟ್ಟಿನ ಮರ್ಯಾದೆಯನ್ನೂ ನಮ್ಮಿಂದಲೇ ವಸೂಲು ಮಾಡುತ್ತಿದೆ.
ಜಾತಿ ರಾಜಕಾರಣ, ಸುಳ್ಳು-ಸುಳ್ಳು ಓಲೈಕೆ, ಅರ್ಥವಿಲ್ಲದ-ಭಾವವಿಲ್ಲದ ವೂ ಭಾವವೂ ಇಲ್ಲದ ಮೀಸಲಾತಿ ಪದ್ಧತಿ ಇವೆಲ್ಲಾ ಔಟ್ ಅಂಡ್ ಔಟ್ ಭ್ರಷ್ಟಾಚಾರವೇ. ನಿಜವಾದ ಬಹುಮತ ಪ್ರತಿನಿಧಿಗಳು - ಚಲಾಯಿತ ಅರ್ಹ ಮತದ ಶೇ. ೫೦+ ಪಡೆದವರು - ಮಾತ್ರಾ ಸಂಸದರು/ಶಾಸಕರಾಗುವಂತಾದರೆ ಇಂಥದಕ್ಕೆ ಕಡಿವಾಣ ಬೀಳಬಹುದೇನೋ? ಅದಕ್ಕೆ ಲೋಕಪಾಲ ವ್ಯವಸ್ಥೆಯ ಸಂಬಂಧವೇನಿದ್ದೀತು?!