ಆಹಾ ! ಅಲ್ಲಿನೋಡಿ, ದಾದರ್ ರೈಲ್ವೆ ಸ್ಟೇಷನ್ ಗೆ ಬಣ್ಣ ಬಳ್ದಿದಾರೆ ; ’ಪ್ರಿ ಪೇಡ್ ಟ್ಯಾಕ್ಸಿ ಸ್ಟಾಂಡ್’ ಮಾಡಿದಾರೆ !!

ಆಹಾ ! ಅಲ್ಲಿನೋಡಿ, ದಾದರ್ ರೈಲ್ವೆ ಸ್ಟೇಷನ್ ಗೆ ಬಣ್ಣ ಬಳ್ದಿದಾರೆ ; ’ಪ್ರಿ ಪೇಡ್ ಟ್ಯಾಕ್ಸಿ ಸ್ಟಾಂಡ್’ ಮಾಡಿದಾರೆ !!

ಚಿತ್ರ

 

ಇದರಲ್ಲೇನು ಮಹಾ ?  ಎಂದು ಹುಬ್ಬು ಹಾರಿಸುವ ಅಗತ್ಯವಿಲ್ಲ. ಯಾಕೆಂದರೆ, ಮುಂಬೈನಲ್ಲಿ ವಾಸಿಸುವ ಜನರಿಗೆ ಗೊತ್ತು ಇದೆಷ್ಟು ಮಹತ್ವದ್ದು ಎಂದು. ನಿಮಗೆ ಆಶ್ಚರ್ಯವಾಗಬಹುದು, ಇದುವರೆವಿಗೂ  ದಾದರ್ ರೈಲ್ವೆ ಸ್ಟೇಶನ್  ಮುಖಕ್ಕೆ ಪೇಂಟ್ ಬಳಿದ ವಿಚಾರ ಯಾರಿಗೂ ತಿಳಿದಿಲ್ಲ. ಮುಂಬೈನ ದಾದರ್ ಸ್ಟೇಶನ್  ನ ಹೊರಗೆ-ಒಳಗೆ ಒಪ್ಪ, ಓರಣದ ವಿಚಾರದ ಬಗ್ಗೆ ಅಲ್ಲಿನ ಅತಿದೊಡ್ಡ ವ್ಯವಸ್ಥಾಪಕ ಮಹಾಶಯನಿಂದ ಚಪ್ರಾಸಿಯವರೆಗೆ ತಿಳಿದಿಲ್ಲ. ಯಾರನ್ನೂದರೂ ಕೇಳಿದರೆ ಹೇಗೆ ಸಾಧ್ಯ ಈ ಜನಸಮುದ್ರಕ್ಕೆ ಯಾವ ವ್ಯವಸ್ಥೆ ಸರಿಹೊಂದೀತು,  ಎನ್ನುವ ಮಾತು ಕೇಳಬರುತ್ತೆ. ಮೇಲಾಗಿ ಎಷ್ಟೇ ಕೊಳಕಾಗಿರಲಿ, ಅಥವಾ ಅಸುವಿಧತೆಯಿದ್ದರು ಇಲ್ಲಿನ ಜನ ಹೊಂದಿಕೊಂಡು ಹೋಗುತ್ತಾರೆ.

 
ನಿಜ ಹೇಳಬೇಕೆಂದರೆ ಮಧ್ಯರೈಲ್ವೆಯ ಪ್ರಯಾಣಿಕರ  ಸುವಿಧತೆಗೆ ಮಾಡುವ  ವೆಚ್ಚ ಸೊನ್ನೆ ಎನ್ನಬಹುದು. ಆದರೆ ಅದು-ಇದು ಹೇಳಿ ಮೇಲಿನ ಅಧಿಕಾರಿಗಳಿಂದ ಹಣ ಪಡೆದರೆ ನಮಗೆ ಹೇಗೆ ಗೊತ್ತಾಗಬೇಕು ?
 
ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರಿನ ವ್ಯವ್ಯಸ್ಥೆ, ಮತ್ತೆ ಶುಭ್ರವಾದ  ವೈಟಿಂಗ್ ರೂಂ ವ್ಯವಸ್ಥೆ, ಟಿಕೆಟ್ ಪಡೆಯಲು ಪ್ರಯಾಣಿಕರಿಗೆ ಸುವ್ಯವಸ್ಥೆ, ಯಾವುದೂ ಇಲ್ಲ. ನಮ್ಮ ಕ್ಯೂ ನ ಮಧ್ಯೆಯೇ ನಾಯಿಗಳು ಮಲಗಿ ನಿದ್ದೆಮಾಡುತ್ತಿರುತ್ತವೆ. ಭಿಕ್ಷುಕರು ಕೈಒಡ್ಡಿ ಬೇಜಾರುಮಾಡುತ್ತಾರೆ. ಇನ್ನೇನು ಆಕಡೆ ನೋಡುವ ಹೊತ್ತಿಗೆ ಟಿಕೆಟ್ ವಿಂಡೊ ಮುಚ್ಚುವುದರಲ್ಲೇ ಕಾತುರರಾದ ರೈಲ್ವೆ ಸಿಬ್ಬಂದಿ, ಯಾವ ಅಪರಾಧಗಳನ್ನೂ ಕಂಡೂ ಕಾಣದಂತೆ ಅಲ್ಲಿಯೇ ಕುಳಿತು ಗಪ್ಪಾ ಹೊಡೆಯುವ ಪೋಲಿಸ್ ವರ್ಗ,

 

ಭಾರತದ ನನರಗಳ ಕೆಲವು ಸಮಸ್ಯೆಗಳಳಲ್ಲಿ ಇವೂ ಸೇರಿವೆ. ಭಿತ್ತಿಪತ್ರಗಳನ್ನು ಅದ್ಯಾವ ಮಾಯದಲ್ಲಿ ಅಂಟಿಸುವರೋ ದೇವರೆಬಲ್ಲ. ಚಿಕ್ಕಪುಟ್ಟ ಜಾಹಿರಾತುಗಳು, ಹಲ್ಲುಪುಡಿ, ಮುಖಕ್ಕೆ ಹಚ್ಚಿಕೊಳ್ಳುವ ಕ್ರೀಮ್, ಎಸ್.ಎಸ್.ಸೀ ಯಿಂದ ಕಾಲೇಜ್ ನರೆಗೆ ಪಾಠ ಹೇಳಿಕೊಡುವ ಖಾಸಗಿ ಶಾಲೆಗಳ ಬಗ್ಗೆ,  ಯೋಗ ಶಾಲೆಗಳ ಬಗ್ಗೆ, ಯಾವುದೋ ಗುರುಗಳ ಪ್ರವಚನಗಳ ಬಗ್ಗೆ, ಇತ್ಯಾದಿ ಜಾಹಿರಾತುಗಳನ್ನೂ ಟಿಕೆಟ್ ಕೊಡುವ ಕಾರಕುನರು ಕುಳಿತುಕೊಳ್ಳುವ ಕಡೆ ಗಾಜಿನ ಮೇಲೇ ಅಂಟಿಸಿದರೆ ಅವರು ಕೆಲಸ ಮಾಡುವುದಾದರೂ ಹೇಗೆ ? ನಮಗೆ ಅವರ ಮುಖಕಾಣಿಸಬೇಡವ   ?

ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ೩೫ ಲಕ್ಷ. ಮತ್ತೆ ರಾಜ್ಯ ಸಾರಿಗೆ ಬಸ್ಸಿನಲ್ಲಿ ೩೨ ಲಕ್ಷ ಪ್ರಯಾಣಿಕರು ಒದ್ದಾಡುತ್ತಾ ಪ್ರಯಾಣಿಸುವರು ! ಇವರು ಟಿಕೆಟ್ ಗೆ ಒಂದು ರೂಪಾಯಿ ಕೊಟ್ಟು ಖರೀದಿಸಿದರೂ, ೩೫ ಲಕ್ಷ ರೂಪಾಯಿ ವರಮಾನ ಸಿಗುವ ವ್ಯವಸ್ಥೆಗೆ ಅಲ್ಪ- ಸ್ವಲ್ಪವಾದರೂ  ನ್ಯಾಯ ಒದಗಿಸಿ ಚೊಕ್ಕವಾದ ಸಾಮಗ್ರಿಗಳನ್ನು ಖರಿದಿಸಬೇದವೇ ?

ರೇಲ್ವೆ ಪ್ಲಾಟ್ಫಾರ್ಮ್ ಗಳಂತೂ ಕೊಳೆತು ನಾರುತ್ತಿರುತ್ತೆವೆ. ಎಲ್ಲಕಡೆ ಗಬ್ಬು ನಾತ. ಕಸಗುಡಿಸುವವರು ಹೆಸರಿಗೆ ಪೊರಕೆ ಹಿಡಿದು ಮಾತಾಡುತ್ತ ಕಾಲಕಳೆಯುತ್ತಾರೆ. ಅವರಿಗೂ ಕೊಳಕು ನಿರ್ಮುಲನೆಗು  ಯಾವ ಸಂಬಮ್ಧವಿಲ್ಲವೇನೋ ಎನ್ನುವಂತಿರುತ್ತದೆ ಅವರ ವರ್ತನೆ.

ಟಿಕೆಟ್ ಬೆಲೆ ೪ ರೂಪಾಯಿ ಆದರೆ ಅದನ್ನು ಪ್ರಿಂಟ್ ಮಾಡಲು ತಗಲುವ ವೆಚ್ಚ ೧೦ ರೂಪಾಯಿ ಆದಿತೇನೋ ? ಏಕೆಂದರೆ, ಪ್ರತಿ ಟಿಕೆಟ್ ಕೊಡುವಾಗಲೂ ಕಂಪ್ಯೂಟರ್ ಒತ್ತಬೇಕು. ಅದು ಸರಿಯಾಗಿ ಕೆಲಸಮಾಡಿದರೆ ಸರಿ. ಇಲ್ಲವಾದರೆ ದೇವರೇಗತಿ ! ರೈಲ್ವೆಯಲ್ಲಿ ಖರೀದಿಸಿರುವ ಕಂಪ್ಯೂಟರ್ ಗಳು ಅತಿ ಸೋವಿಯಾಗಿ ಸಿಕ್ಕವು. ಒಟ್ಟಿನಲ್ಲಿ ಇಡಿ ಭಾರತದಲ್ಲೇ ಏಕೈಕ ಸಾರಿಗೆ ಸಂಸ್ಥೆಯಾದ ರೈಲ್ವೆ, ಸಮರ್ಪಕವಾದ ಸದೃಢವಾದ ಸಾಮಗ್ರಿಗಳನ್ನು ಹೊಂದದೆ ಇರುವುದು ನಾಚಿಕೆಗೇಡು ! 

ಇನ್ನೂ ನಮ್ಮೂರಿನ ಛತ್ರಪತಿ  ಶಿವಾಜಿ  ಅಂತಾರಾಷ್ಟ್ರೀಯ ಹವಾಯಿ ಅಡ್ಡೆಯ ಬಗ್ಗೆ ಏನೂ ಹೇಳದಿರುವುದೇ ಮೇಲು. ಅಲ್ಲಿ ಕುಳಿತುಕೊಳ್ಳಲು ಜಾಗ ಸಿಗದೇ ಗಂಟೆಗಟ್ಟಲೆ ನಿಂತಾಗ ಸೊಳ್ಳೆಗಳು ನಮ್ಮ ರಕ್ತವನ್ನೂ ಹೀರುತ್ತವೆ. ಅದೊಂದು ನರಕ ಸದೃಶ ದೃಶ್ಯಗಳಲ್ಲೊಂದು !

 

ಸನ್  ೨೦೧೨ ರಲ್ಲಿ ಮುಂಬೈ ನಗರದಲ್ಲಾಗಿರುವ ಮಹತ್ಸಾಧನೆಗಳು. ಇವೇ ಎಂದರೆ ಆಶ್ಚರ್ಯ ಪಡಬೇಡಿ  !

 

 

 

 

Rating
No votes yet

Comments