ಇವ್ನಿಗೆ ಗೊತ್ತು ಅಂತ ಖುಷಿಪಡ್ಲೋ ಅಥವಾ ಅವ್ಳಿಗೆ ಗೊತ್ತಿಲ್ಲ ಅಂತ ದುಃಖಪಡ್ಲೋ....
ಸ್ವಲ್ಪ ದಿನದ ಹಿಂದೆ ನಾನು ಮತ್ತೆ ನನ್ನ ಫ್ರೆಂಡ್ (ಸರಬ್ಜಿತ್ ಸಿಂಗ್ ಅವ್ನ ಹೆಸ್ರು) ಊಟಕ್ಕೆ ಬೈಕ್ನಲ್ಲಿ ಹೋಗ್ತಿದ್ವಿ. ಒಂದು ಸಿಗ್ನಲ್ ಸಿಕ್ತು ಬೈಕ್ ನಿಲ್ಲಿಸಿಕೊಂಡಿದ್ವಿ, ಸ್ವಲ್ಪ ಹೊತ್ತಾದ ಮೇಲೆ ನಾನು ಬಲಕ್ಕೆ ತಿರುಗಿದೆ, ಆಗ ಒಬ್ರು ಆಟೋ ಡ್ರೈವರ್ ನಮ್ಮನ್ನೆ ಪಿಳಿಪಿಳಿ ಅಂತ ನೋಡ್ತಿದ್ರು.
ನಾನು ಏನು ಸಾರ್ ಹಾಗೆ ನೋಡ್ತಿದ್ದೀರಾ ಅಂದೆ...
ಅದಕ್ಕೆ ಅವ್ರು ನಂಗೆ, ಸಾರ್ ನೀವು ಮೊಬೈಲಿನಲ್ಲಿ ಮಾತಾಡ್ತಿದ್ದೀರಾ ಅಂತ ಅನ್ದ್ಕೊಂಡೆ ಆದ್ರೆ ಮತ್ತೆ ಅನುಮಾನ ಬಂತು ಅಂದು ನನ್ನ ಫ್ರೆಂಡ್ ಕಡೆ ತಿರುಗಿ, ಏನ್ಸಾರ್ ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತೀರಾ ಅಂತ ಕೇಳಿದ್ರು, ಅದ್ಕೆ ಇವ್ನು ಹೂಂ ಸಾರ್ ಬರತ್ತೆ (ತುಂಬಾ ವರ್ಷದ ಹಿಂದೆ ಅವ್ರು ಮೈಸೂರಿನಲ್ಲಿ ವಾಸವಾಗಿದ್ದಾರೆ) ಅಂತ ಅಂದ.
ಲಿಪಿ ಬರೆಯೋಕೆ ಬರತ್ತಾ ಸಾರ್ ಅಂದ್ರು, ಇವ್ನು ಬರತ್ತೆ ಅಂದ.
ಆಗ ಅವ್ರು, ನನ್ನ ಮಗಳು ಇದ್ದಾಳೆ ಸಾರ್ (ಬಿ.ಎಸ್ಸಿ ಮಾಡ್ತಿದ್ದಾರಂತೆ) ಆದ್ರೆ ಅವ್ಳಿಗೆ ಲಿಪಿ ಅಷ್ಟು ಚೆನ್ನಾಗಿ ಬರಲ್ಲ ಅಂತ ಅಂದ್ರು!!!!
ಇವ್ನು ಬಿಡಿ ಇಲ್ಲಿಗೆ ಬಂದು ಪೂರ್ತಿ ಕನ್ನಡದವನೆ ಆಗಿದ್ದಾನೆ, ಆದ್ರೆ ಇಲ್ಲೇ ಹುಟ್ಟಿರೋರ ಕಥೆ ಹೀಗೆ...