ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ,

ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ,

http://sampada.net/blog/madhava_hs/29/10/2007/6064

ಈ ಕೊಂಡಿಯಲ್ಲಿ....... "ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?", ಎಂಬ ಚರ್ಚೆಯಲ್ಲಿ .
"ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅಂದ್ರೇನು?.. ಅದು ದಿಟವಾಗ್ಲೂ ಇದ್ಯಾ? ಇಲ್ಲ ಬರೀ ಬುರುಡೆಯ? ಇವೆಲ್ಲ ಪ್ರೆಶ್ನೆಗಳಿಗೆ ಉತ್ರ ಸಿಕ್ಕಿದಾಗ...
ಸಿಗದ ತನಕ ಅವೆಲ್ಲ ಬರೀ ಕಲ್ಪನೆ ಇಲ್ಲ ಬರೀ ನಂಬಿಕೆ." ಎಂಬ ಮಹೇಶರ ಪ್ರಶ್ನೆ ...ನನಗೆ ಶರಣರು ಈ ಬಗ್ಗೆ ಏನು ಹೇಳ್ತಾರೆ ಅಂತ ಹುಡುಕೋದಿಕ್ಕೆ ಪ್ರೇರೇಪಿಸಿತು. offcource ಆತ್ಮ , ಪರಮಾತ್ಮಗಳ ಸ್ವರೂಪಗಳೂ ಸಹಾ ಮೇಲಿನ ಸಿಧಾಂತಗಳಲ್ಲಿ ಬೇರೆ ಬೇರೆ ಯಾಗಿ ವರ್ಣನೆಯಾಗಿದೆ. ಆದರೂ ಅವುಗಳು ( ಎಲ್ಲಕ್ಕಿಂತ ಮೊದಲು) ಇವೆಯೋ ಇಲ್ಲವೋ ಎಂದು ತಿಳಿದುಕೊಂಡು / ಅವುಗಳ ಸ್ವರೂಪ ವನ್ನು ಗ್ರಹಿಸಿ ನಾವು ಸಿಧಾನ್ತಗಳ ಬಗ್ಗೆ ಮಾತಾಡುವುದು ಒಳ್ಳೆಯದು.

ಕೆಲವು ವಚನಗಳು ನನ್ನ ಕಣ್ಣಿಗೆ ಬಿದ್ದವು. ಅವುಗಳನ್ನು ಇಲ್ಲಿ ಬರೆಯುತ್ತಿದ್ದೇನೆ. ಸುಲಿದ ಬಾಳೆ ಹಣ್ಣಿನಂತಹ ಕನ್ನಡದಲ್ಲಿರುವ ಈ ವಚನಗಳು self explanatory . ನಮ್ಮ ಸೀಮಿತ ಅರಿವಿನ ವ್ಯಾಪ್ತಿಯಲ್ಲಿ ಈ ವಚನಗಳನ್ನು ಅರ್ಥ ಮಾಡಿಕೊಂಡರೆ .. ಅವು ಅರ್ಥವಾಗುವುದಕ್ಕಿಂತ ಅಪಾರ್ಥವಾಗುವ ಸಂಭವವೇ ಹೆಚ್ಚು. ಆದರೂ ಈ ವಚನಗಳು ನಮಗೆ ಅವರ ಚಿಂತನೆಯ ಬಗ್ಗೆ ಸ್ವಲ್ಪ ವಾದರೂ ಸುಳಿವನ್ನು ಕೊಡುವುದಾದರೆ ಅದಕ್ಕಿಂತ ಹೆಚ್ಚಿನ ಭಾಗ್ಯವೇನಿಲ್ಲ . ತಿಳಿದವರು ಯಾರಾದ್ರೂ ಈ ವಚನಗಳ ಬಗ್ಗೆ ಸ್ವಲ್ಪ ವಿವರವಾಗಿ ಬರೆಯಿರಿ.

ನನಗೆ ಇಲ್ಲಿ ಶರಣರ ವಚನಗಳು ಏಕೆ ಮುಖ್ಯವಾಗಿತ್ತೆ ಅಂದ್ರೆ ಆವ್ರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಋುಷಿಗಳು. ( ಋಷಿ=ಸತ್ಯವನ್ನು ಅರಸುವವ=seer). ಅವರಲ್ಲಿ ನಾನು ಎಲ್ಲಿಯೂ ಕುರುಡು ಭಕ್ತಿ / ನಂಬಿಕೆಯನ್ನು ಕಂಡಿಲ್ಲ.

1. ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ, ಅದು ತನ್ನ ವಿಶ್ವಾಸದ ಭಾವ ,
ತನಗೆ ಅನ್ಯಭಿನ್ನವಿಲ್ಲ, ಅರ್ಕೇಶ್ವರ ಲಿಂಗ ತಾನಾದ ಕಾರಣ..........................ಮಧುವಯ್ಯ

2.ಉಂಟೆಂಬ ವಸ್ತು ಇಲ್ಲೆಂಬ ಪ್ರಮಾಣ ಬಹುದು
ಆಚಾರಕ್ಕಿಕ್ಕುವುದಿದು ಭಕ್ತಿಯೆ?
ಉಂಟೆಂಬ ಉಧ್ಭಾವಿಯಲ್ಲ, ಇಲ್ಲೆಂಬ ನಿರ್ಭಾವಿಯಲ್ಲ,
ಇದು ಕಾರಣ ಕೂಡಲಚೆನ್ನಸನ್ಗಾ
ಸಜ್ಜನ ಶುದ್ದ ಶಿವಾಚಾರಿಗಲ್ಲದೇ ಲಿನ್ಗೈಕ್ಯವಳವಡದು.....................ಚೆನ್ನಬಸವಣ್ಣ

3. ಉನ್ಟೆಮ್ಬಲ್ಲಿಯೇ ಜ್ಞಾನಕ್ಕೆ ದೂರ ; ಇಲ್ಲಾ ಎಮ್ಬಲ್ಲಿಯೇ ಸಮಯಕ್ಕೆ ದೂರ;
ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಯಿತ್ತು
ಪ್ರಾಪ್ತಿಯನುಮ್ಬುದು ಘಟವೋ, ಆತ್ಮನೋ?
ಒಂದನಹುದು, ಒಂದನಲ್ಲಾ ಎನಬಾರದು
ಇಲ್ಲಾ ಎನ್ದಡೆ ಕ್ರೀವಂತರಿಗೆ ಭಿನ್ನ; ಅಹುದೆನ್ದಡೆ ಆರಿದಾತಂಗೆ ವಿರೋಧ
ತೆರಪಿಲ್ಲದ ಘನವ ಉಪಮಿಸಲಿಲ್ಲ
ಕಾಮ ಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ , ಹಿಂದೆ ಉಳಿಯಲಿಲ್ಲ...................ಮಾದಾರ ಧೂಳಯ್ಯ

4.ಉಂಟೆಂಬುದು ಭಾವದ ನೆಂಬುಗೆ, ಇಲ್ಲ ಎಂಬುದು ಚಿತ್ತದ ಪ್ರಕೃತಿ
ಉಭಯಾನಾಮ ನಷ್ಟವಾಗಿ ನಿಂದುಳುಮೆ
ಐಘಟದೂರ ರಾಮೇಶ್ವರಲಿನ್ಗ ಇಕ್ಕಿದ ಗೊತ್ತು.......................ಮೆರೆ ಮಿನ್ಡಯ್ಯ

5. ಉಂಟು ಇಲ್ಲಾ ಎಮ್ಬುದನರಿತು ನುಡಿವುದು ಕ್ರೀಯೋ? ನಿಃಕ್ರೀಯೋ ?
ಇವೆಲ್ಲವನರಿತು ನುಡಿವುದು ಘಟದೊಳಗಣ ಮಾತಲ್ಲದೇ ಅದು ಮಾಯಾವಾದದ ಇರವು,
ಭಾವಕಾಯವಲ್ಲಿ ಸಿಕ್ಕಿ ಸಕಲವನಡೊಗೂಡಿ ಭೋಗನ್ಗಳನುಣುತ
ನಾನಲ್ಲ ಎಂಬ ಮಾಯಾವಾದಿಗಳ ಮಾತು
ಕನ್ನದ ಬಾಯಲ್ಲಿ ಸಿಕ್ಕಿದ ಕಳ್ಳನ ಬಾಯಾಲಿನನ್ತೆ ಬಲ್ಲವರು ಮೆಚ್ಚುವರೆ?
ಶರೀರವುಳ್ಳನ್ನಕ್ಕ ಇಷ್ಟಪ್ರಾಣ ಮುಕ್ತನಾಗಬೇಕು
ಇದೆ ನಿಶ್ಚಯ , ಸದಾಶಿವಮೂರ್ತಿ ಲಿನ್ಗವನರಿವುದಕ್ಕೆ...............ಅರಿವಿನ ಮಾರಿತನ್ದೆ

6.ಉಂಟು ಉನ್ಟೆಮ್ಬನ್ನಕ್ಕ ಸನ್ದೇಹಕ್ಕೀಡಾಗದೆ ,
ಇಲ್ಲಾ ಇಲ್ಲಾ ಎಂದು ಶೂನ್ಯಕ್ಕೊಳಗಾಗದೆ
ಇಂತೀ ಕ್ರೀಯ ಒಳಗಿನಲ್ಲಿ, ನಿಃಕ್ರೀಯ ತೆರಪಿನಲ್ಲಿ ,
ಉಭಯಚಕ್ಶು ಒಡಗೂಡಿ ಕಾಬಂತೆ ,
ನೋಡುವುದು , ಉಭಯ ನೋಡಿಸಿಕೊಂಬು ದು ಒಂದೇ
ಕ್ರೀಯಲ್ಲಿ ಇಷ್ಟ , ಅರಿವಿನಲ್ಲಿ ಸ್ವಸ್ಥ
ಈ ಉಭಯ ನೀನಾಹನ್ನಕ್ಕ ದೃಷ್ಟವಾದೆಯಲ್ಲ ,
ನಿಃಕಳನ್ಕ ಮಲ್ಲಿಕಾರ್ಜುನಾ .............ಮೋಳಿಗೆ ಮಾರಯ್ಯ

7. ಉಂಟಾದುದು ಉಂಟೆ? ಉನ್ಟಾದುದನಿಲ್ಲವೆಮ್ಬುದು ಮಿಥ್ಯೆ
ಅದು ತಾ ನಾಮ ರೂಪು ಕ್ರಿಯೆ ಇಲ್ಲವಾಗಿ ಇಲ್ಲ
ಇಲ್ಲವಾದುದನುನ್ಟನ್ದಡೆ ಘಟಿಸದು ,
ಉಂಟು ಇಲ್ಲ ವೆಂಬ ಉಳುಮೆಯಿಲ್ಲದೆ ನಿಜ ತಾನೇ , ಸೌರಾಷ್ಟ್ರ ಸೋಮೆಶ್ವರ ................ಅದಯ್ಯ

ನಾನು ಉಂಟು / ಇಲ್ಲ ಎಂಬುದರ ಬಗ್ಗೆ ಶರಣರು ಏನು ಹೇಳುತ್ತಾರೆ ಎಂಬಲ್ಲಿ ಮಾತ್ರ ಈ ವಚನಗಳಲ್ಲಿ ಗಮನಹರಿಸಿದ್ದೇನೆ. ಇವು ನನ್ನ ಕಣ್ಣಿಗೆ ಬಿದ್ದ ಕೆಲವೇ ಕೆಲವು ವಚನಗಳು.
ಆತ್ಮ -ಪರಮಾತ್ಮದ ಸ್ವರೂಪ ದ ಬಗ್ಗೆ / ಸಂಬಂಧದ ಬಗ್ಗೆ ಅವರು ವಿವರವಾಗಿ ಹೇಳಿದ್ದಾರೆ . ನಾನು ಆ ಬಗ್ಗೆ ಇಲ್ಲಿ ಗಮನ ಹರಿಸಿಲ್ಲ.

Rating
No votes yet

Comments