ಉಡುಪಿ ವಿವಾದ; ಭಕ್ತಪಂಥಕ್ಕೆ ತಣ್ಣೀರು!

ಉಡುಪಿ ವಿವಾದ; ಭಕ್ತಪಂಥಕ್ಕೆ ತಣ್ಣೀರು!

ಉಡುಪಿ ಶ್ರೀಬಾಲಕೃಷ್ಣನ ಪೂಜಾರಿ ವರ್ಗ ಪರಸ್ಪರ ಜಗಳಕ್ಕಿಳಿದಿರುವುದನ್ನು ಭಕ್ತಿಪಂಥಕ್ಕೆ ತಣ್ಣೀರೆರೆಚುವ ಭ್ರಷ್ಟತೆ. ಪರ‍್ಯಾಯದಲ್ಲಿ ಪೂಜಾಧಿಕಾರ ವಹಿಸಿಕೊಳ್ಳುತ್ತಿರುವ ಮಠದ ಸ್ವಾಮಿ ತಮಗೆ ಆಹ್ವಾನ ನೀಡಿಲ್ಲವೆಂಬುದು, ಅಷ್ಟಮಠಗಳಲ್ಲಿ ಪುತ್ತಿಗೆ ಮಠವೆಂಬುದರ ಸ್ವಾಮಿಗಳ ದುಮ್ಮಾನ. 'ಅವರವರವರ ಮಠದ ಸಂಪ್ರದಾಯ; ತಾವು ಮಧ್ಯೆ ಪ್ರವೇಶಿಸುವುದಿಲ್ಲ' ಎಂದು ವಯೋವರದ್ಧರೆಂಬ ಮರ‍್ಯಾದೆಯ ಪೇಜಾವರ ಸ್ವಾಮಿಗಳು ನುಣುಚಿಕೊಂಡಿದ್ದಾರಂತೆ. ಉಡುಪಿಯದು ಕೃಷ್ಣಮಠ. ಹಾಗೆಂದೇ ಬರೆದುಕೊಂಡಿದ್ದಾರೆ. ಅಷ್ಟಮಠದವರು ಎರಡು ವರ್ಷಕ್ಕೊಮ್ಮೆ ಅದರ ವಹಿಸಿಕೊಳ್ಳುತ್ತಾರೆ. ಹಾಗೆಂದಮೇಲೆ ಒಂದೊಂದು ಮಠಕ್ಕೂ ಬೇರೆ ಬೇರೆ ಅನುಕೂಲ ಸಿಂಧೂ ಸಂಪ್ರದಾಯವೇ?
 ಸಾಮಾಜದ ಹಿತದೃಷ್ಟಿಯಿಂದ ಹಾಕುವ, ಹಾಕಿಕೊಳ್ಳುವ ಕಟ್ಟು-ಪಾಡಿನ ಸಂಪ್ರದಾಯ, ವಿವಾದಗಳಿಗೆ ತಂಗಳನ್ನದ ಕುಪ್ರದಾಯವಾಗುತ್ತಿದೆ! ಸುಗುಣೇಂದ್ರತೀರ್ಥರೆಂಬುವವರನ್ನು, ಅಮೆರಿಕಾದ ಮಾಧ್ವ ಶಿಷ್ಯರು ಎಂದೋ ಪ್ರವಚನಕ್ಕಾಗಿ ಆಹ್ವಾನಿಸಿದ್ದರು. ಅಂತಹ ಪ್ರವಚನದ ಅಧ್ಯಯನ ಮತ್ತು ಅನ್ವಯನದ ಯೋಗ್ಯತೆಯಿರಲಾರದವರೊಬ್ಬರು ಇವರಮೇಲೆ ಹೀಗೆ ಹೊಟ್ಟು ಉರಿದುಕೊಳ್ಳಬೇಕೆ?
 ಇದು ಘಟ್ಟದ ಕೆಳಗಿನ ಉಡುಪಿ ಕೃಷ್ಣಪೂಜಾರಿಗಳ ಸಂಪ್ರದಾಯ ವಿವಾದ. ಘಟ್ಟದ ಮೇಲೆ, ಮಧ್ವಶಾಸ್ತ್ರ-ಸಂಪ್ರದಾಯಗಳ ಜವಾಬ್ದಾರಿ ಮೈಮೇಲೆಳೆದುಕೊಂಡಿರುವ ಒಂದು ಮಠ ಮತದರ ದಿವಾನರಿಗೆ ಇದರ ಉಸಾಬರಿಯ ರಾಜಕಿಯವೇಕೆ?
 ಪ್ರಾಮಾಣಿಕ ಭಕ್ತ-ಭಾಗವತರಿಗೆ ಇನ್ನು ಮುಂದೆ ಇಸ್ಕಾನ್ ಅಂತಹ ಸಂಸ್ಥೆಗಳೇ ಗತಿಯೇ?
 

Rating
No votes yet