ಏಕೆ ಓದಬೇಕು?
ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ*
ಪರರ ಕವಿತೆಗಳನೂ ಓದಿ ಸಂತೋಷಿಪರು
ಹೂಗಳಲೆ ಜೇನು ತುಂಬಿರುವ ಮಾವಿನ ಮರವು
ಕೊಡತುಂಬ ನೀರುಣಿಸ ಬಯಸದೇನು?
ಸಂಸ್ಕೃತ ಮೂಲ:
ಅಪಿ ಮುದಮುಪಯಾಂತೋ ವಾಗ್ವಿಲಾಸೈಃ ಸ್ವಕೀಯೈಃ
ಪರಭಣಿತಿಷು ತೋಷಂ ಯಾಂತಿ ಸಂತಃ ಕಿಯಂತಃ
ನಿಜಘನಮಕರಂದಸ್ಯಂದಪೂರ್ಣಾಲವಾಲಃ
ಕಲಶಸಲಿಲಸೇಕಂ ನೇಹತೇ ಕಿಂ ರಸಾಲಃ
*ಅರಿಗ = ಅರಿತವ, ತಿಳಿದವ,ವಿದ್ವಾಂಸ (ಶಂಕರಭಟ್ಟರು ಈ ಪದವನ್ನು ಬಳಸಿದ್ದನ್ನು ನೋಡಿದೆ - ಹಿಡಿಸಿತು - ಅದಕ್ಕೇ ಉಪಯೋಗಿಸಿದೆ)
ನೀರುಣಿಸ = ನೀರಿನ ಉಣಿಸನ್ನು
-ಹಂಸಾನಂದಿ
ಕೊ.ಕೊ: ಓದಬೇಕೇಕೆ? ಅಂತ ಒಬ್ಬರು ಸಂಪದಿಗರು ಕೇಳಿದ್ದನನ್ನ ಈಗ ತಾನೇ ನೋಡಿದೆ. ಅದರ ಫಲವೇ ಈ ಅನುವಾದ :)
Rating
Comments
ಉ: ಏಕೆ ಓದಬೇಕು?