ಕಡೆಗೂ ನಾವು ಗೆದ್ದೇಬಿಟ್ವಿ!

ಕಡೆಗೂ ನಾವು ಗೆದ್ದೇಬಿಟ್ವಿ!

28 ವರುಶಗಳ ನಂತರ ಕಡೆಗೂ ಇಂಡಿಯಾ ತನ್ನ ಮುಡಿಗೆ ವಿಶ್ವಕಪ್ ಮುಕುಟವನ್ನು ಏರಿಸಿಕೊಂಡಿತು! ಇದು ಇಡೀ ದೇಶಕ್ಕೆ ಟೀಂ ಇಂಡಿಯಾ ಕೊಟ್ಟ ಉಗಾದಿ ಉಡುಗೊರೆ ಎಂದೇ ಭಾವಿಸಬೇಕು.

 

ಈ 28 ವರುಶಗಳ ಅವಧಿಯನ್ನು ನೆನೆಸಿಕೊಂಡಾಗಲೇ ಈ ವಿಶ್ವಕಪ್ ಅನ್ನೋದು ಎಷ್ಟು ದೊಡ್ಡದು ಎಂಬ ಮನವರಿಕೆ ಆಗೋದು...

 

ಅಚ್ಚರಿಯ ಸಂಗತಿಯೆಂದರೆ, ಶುರುಯಿಂದಲೂ ಎಲ್ಲರ 'ಫೇವರಿಟ್' ಆಗೇ ಇದ್ದ ಇಂಡಿಯಾ ಎಲ್ಲರೂ ಕಾತರದಿಂದ ಎದುರುನೋಡುತ್ತಿದ್ದ ಚಣವನ್ನು ತಮ್ಮದಾಗಿಸಿಕೊಂಡಿದ್ದು.  ಪ್ರಾಕ್ಟಿಕಲ್ ಆಗಿ ನೋಡಿದರೆ, 1983ರ ಕಪಿಲ್ ದೇವ್ ಮುಂದಾಳತ್ವದ ವಿಶ್ವಕಪ್ ತಂಡಕ್ಕೆ ಹೋಲಿಸಿದರೆ ಈಗಿನ ತಂಡ ಏನೇನೂ ಅಲ್ಲ ಎಂದೇ ಹೇಳಬೇಕು. ಈಗಲೂ ಆ ಹನ್ನೊಂದೂ ಆಟಗಾರರ ಹೆಸರು ಹೇಳಬಹುದು. ಆದರೆ. ಈಗಿನ ತಂಡದ ನಾಲ್ಕೈದು ಮಂದಿ ಆಟಗಾರರ ಹೆಸರು ಬಿಟ್ಟರೆ ಇನ್ನಾರ ಹೆಸರು ಇನ್ನು ಸ್ವಲ್ಪ ದಿನಗಳಲ್ಲಿ ನೆನಪಾಗಲಾರದೇನೋ!

 

ಏನೇ ಆದರೂ, ಗೆಲುವು ಗೆಲುವೇ! ಗೆಲುವಿನ ಮುಂದೆ ಎಲ್ಲಾ ಒರೆಕೊರೆಗಳೂ ಮುಚ್ಚಿಹೋಗುತ್ತವೆ. ಈ ಒಂದು ಗೆಲುವು ಇಡೀ ಇಂಡಿಯಾ ಕ್ರಿಕೆಟ್ ಗೆ ಒಂದು ಹೊಸ ಚೈತನ್ಯ, ಹುರುಪು, ಶಕ್ತಿ ತುಂಬಬಹುದು.

 

ಆದರೆ, ಸೋತ ಶ್ರೀಲಂಕಾ ಗೆಳೆಯರು ಇಂಡಿಯಾವನ್ನು ಈ ಮುಕುಟ ಗಳಿಸಲು ಅರ್ಹರು ಎಂದು ಹೇಳಿ, ನಮ್ಮ ಬೆನ್ನುತಟ್ಟಿ ಸೋಲಿನಲ್ಲೂ ಗೆದ್ದಿತು. ಆದರೆ, ನಾವಾರು ಶ್ರೀಲಂಕಾ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನಾಡಿದ್ದುದಷ್ಟೇ ಬೇಸರ! ಕನ್ಡಡಿಗರಿಗೆ ಮತ್ತೊಂದು ಬೇಸರವೆಂದರೆ, ನಮ್ಮ ನಾಡನ್ನು ಪ್ರತಿನಿಧಿಸುವಂತಹ ಒಬ್ಬನೇ ಒಬ್ಬ ಆಟಗಾರನೂ ಈ ಗೆದ್ದ ತಂಡದಲ್ಲಿ ಇಲ್ಲದ್ದು!

 

ಇಂಡಿಯಾದ ಪರಮಶತ್ರುಗಲು ಎಂದು ಮಾಧ್ಯಮಗಳು ಬಿಂಬಿಸುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಅಫ್ರೀದಿಯಂತಹವನೂ ಇಂಡಿಯಾದ ಬಗ್ಗೆ, ಕ್ರಿಕೆಟ್ ಬಗ್ಗೆ ಸೆನ್ಸಿಬಲ್ ಆಗಿ ಮಾತಾಡಿರೋದು ನಿಜಕ್ಕೂ ಖುಶಿಯ ವಿಶಯ. ಅವರೆಲ್ಲರಿಗೂ ಇಂಡಿಯಾ ನಮಿಸಲೇಬೇಕು.

 

ಸೋಲು-ಗೆಲುವು ಇದ್ದುದೇ. ಯಾವ ತಂಡವೇ ಗೆದ್ದರೂ ಅಲ್ಲಿ ದೊಡ್ಡದಾಗಿ ಗೆಲ್ಲೋದು ಕ್ರಿಕೆಟ್ ಅಲ್ವ?!

 

ಇನ್ನೊಂದು ವಿಶಯ ಅಂದ್ರೆ, ವಿಶ್ವಕಪ್ ನ ಕಡೆಯ ದಿನ ಇಡೀ ದೇಶವನ್ನ ಯಾವ ಪರಿ ಒಗ್ಗೂಡಿಸಿತ್ತು ಅಂದ್ರೆ, ಅದಕ್ಕೆ ಕಾರಣವಾದ ಕ್ರಿಕೆಟ್ ಗೆ ನಾವೆಲ್ಲವೂ ತಲೆಬಾಗಲೇಬೇಕು. ಹೀಗೆ ಇಂಡಿಯಾದಂತಹ ದೇಶದಲ್ಲಿ ಇಶ್ಟೊಂದು ಜಾತಿ, ಮತ, ಧರ್ಮಗಳ ನಡುವೆ ಯಾವುದೇ ಒಂದು ಸಂಗತಿ ಇಡೀ ದೇಶವನ್ನು ಒಗ್ಗೂಡಿಸುತ್ತೆ ಅಂದ್ರೆ ಅದು ಪವಾಡವೇ ಸರಿ! ಆ ಶಕುತಿಗೆ ತಲೆಬಾಗಲೇಬೇಕು. ಇದು ಎಲ್ಲ ವಿಶಯಗಳಲ್ಲೂ ಸಾಧ್ಯವಿಲ್ಲ ಅನ್ನೋದು ಗೊತ್ತಿರೋದೆ ಆದ್ರೂ, ನಾವೆಲ್ಲರೂ ಹೀಗೆ ಒಗ್ಗೂಡುವಂತಹ ಸಂಗತಿಗಳು ಹೆಚ್ಚಿದಷ್ಟೂ ನಮ್ಮ ದೇಶ ಸುಖ,ಶಾಂತಿ, ನೆಮ್ಮದಿಯಿಂದಿರುತ್ತೆ.

 

ಈ ಒಗ್ಗೂಡುವಿಕೆ ಕ್ರಿಕೆಟ್ ಅಲ್ಲದೆ ಬೇರಾವ ಸಂಗತಿಗೂ ಯಾಕೆ ಸಾಧ್ಯವಿಲ್ಲ ಅನ್ನೋ ಸರಳ ಸವಾಲಿಗೆ ಜವಾಬು ಸರಳವಾಗಿಲ್ಲ!

 

ಎಲ್ಲ ಸಂಪದಿಗರಿಗೂ ಯುಗಾದಿಯ ಹದುಳೊರೆಗಳು....

 

ಹೊಸವರುಶ ಹೊಸಹರುಶವನ್ನು ತರಲಿ...

 

ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ...

Rating
No votes yet

Comments