ಕಲೆಗೆ ಕೊಳೆ ಇಲ್ಲ ಅಲ್ಲವೇ
ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ ಮೂಲದವು.
ನವೆಂಬರ್ ೧ ರಂದು ನಡೆದ ಯಕ್ಷಗಾನ ಹಲವು ಪ್ರಶ್ನೆ ಮತ್ತು ಚರ್ಚೆಗಳಿಗೆ ದಾರಿಮಾಡಿಕೊಟ್ಟಿತ್ತು
" ಯಕ್ಷಗಾನ ಜಾನಪದವೋ ಶಾಸ್ತ್ರಿಯವೋ " ಎಂಬ ಜಿಜ್ಞಾಸೆ "
ಇದರ ಸಲುವಾಗಿಯೇ ಯಕ್ಷಗಾನ ಪ್ರದರ್ಶನದ ನಂತರ, ರಂಗಶಂಕರ ಒಂದು ಸೆಮಿನಾರ್ ಏರ್ಪಡಿಸಿತ್ತು .
ಸೆಮಿನಾರ್ ನಡೆಸಿಕೊಟ್ಟವರು : ಪ್ರಕಾಶ್ ಬೆಳವಾಡಿ ಮತ್ತು ಮನು ಚಕ್ರವರ್ತಿ
Repondents :
ಪೃಥ್ವಿರಾಜ್ ಕವತಾರ್
ಗೋಪಾಲ್ ವೇಣು
ಕಪಿಲ ವೇಣು
Papers by :
ಪ್ರೊ. ಚಂದ್ರಶೇಖರ್ ಕಂಬಾರ್
ಡಾ. ಯು . ಆರ್ . ಅನಂತಮೂರ್ತಿ
ಡಾ. ಲಿಂಗದೇವರು ಹಳೆಮನೆ
ಡಾ. ಹನ್ನೆ ಡಿ ಬ್ರುನ್ - Netherland
ಪೃಥ್ವಿರಾಜ್ ಕವತಾರ್ : ಯಕ್ಷಗಾನದ ಹಲವು ವಿಭಾಗಗಳು ಮತ್ತು ಅದು ಬೆಳೆದು ಬಂದ ಹಾದಿಯನ್ನು ತಿಳಿಸುತ್ತ , ಕರಾವಳಿ ನಾಡಿನಲ್ಲಿ ಯಕ್ಷಗಾನದ ಪ್ರಭಾವಗಳನ್ನು ತಿಳಿಸಿಕೊಟ್ಟರು. ಅವರು ಕೊಟ್ಟ ಕೆಲವು ಅಂಕಿ ಅಂಶಗಳು ನಿಜಕ್ಕೂ ಆಶ್ಚರ್ಯಕರ.
ಕರಾವಳಿ ಪ್ರದೇಶದಲ್ಲಿ ಯಕ್ಷಗಾನ ತಂಡಗಳನ್ನು ದೇವಸ್ಥಾನಗಳು ನಡೆಸುತ್ತಿವೆ. ಮುಖ್ಯವಾದ ದೇವಸ್ಥಾನಗಳೆಂದರೆ ಕಟೀಲು , ಉಡುಪಿ ಮತ್ತು ಧರ್ಮಸ್ಥಳ . ಈ ತಂಡದ ಪ್ರದರ್ಶನಗಳು ಮುಂದಿನ ೨೫ ವರ್ಷಗಳಿಗೆ ಮುಂಗಡವಾಗಿ ಕಾಯ್ದಿರಿಸಿವೆ.
ಈಗಿನ ಒಂದು ಜೀವನ ಶೈಲಿಯಲ್ಲಿ ಯಕ್ಷಗಾನದಂತ ಒಂದು ಕಲೆಯನ್ನು ಮುಂದಿನ ೨೫ ವರ್ಷಗಳಿಗೆ ಕಾಯ್ದಿರಿಸಲು ಸಾಧ್ಯವೇ ಎಂದು ಯೋಚಿಸಿದಾಗ ತಿಳಿದು ಬಂದಂತಹ ವಿಷಯವೆಂದರೆ , ಕರಾವಳಿ ಜನ ಯಕ್ಷಗಾನ ಪ್ರದರ್ಶನ ಅಥವ ಆಟವನ್ನು ದೇವರಿಗೆ ಹರಕೆಯ ರೂಪದಲ್ಲಿ ತೀರಿಸುತ್ತಾರೆ , ಇಲ್ಲಿ ೨೫% ಯಕ್ಷಗಾನದ ಮೇಲಿನ ಪ್ರೀತಿಯಾದರೆ ೭೫% ದೇವರೆಡಗಿನ ಭಕ್ತಿಯಿರುತ್ತದೆ.
ಬೇರೆ ಎಲ್ಲಾ ಅಥಿತಿಗಳು ಸಾಕಷ್ಟು ವಿಷಯಗಳನ್ನು ಪ್ರಸ್ತುತಪಡಿಸಿರುತ್ತಾರೆ, ಇಲ್ಲಿ ನನ್ನ ಚರ್ಚೆಯಲ್ಲಿ ಆದರ ಆಗತ್ಯ ಕಾಣದೆ ಇರುವುದರಿಂದ ಇಲ್ಲಿ ಪ್ರಸ್ತುತ ಪಡಿಸಿಲ್ಲ
ನನ್ನ ಅಭಿಪ್ರಾಯ
ಒಂದು ಜಾನಪದ ಕಲೆ ಆಳಿದರೆ ಆದರೋಡೆಗಿನ ಅಥವಾ ಆ ಕಾಲಮಾನದ ಸಂಸ್ಕೃತಿಯು ಆಳಿದಂತೆ. ಈ ನಮ್ಮ ಜಾನಪದ ಕಲೆಗಳನ್ನು ಜೀವಂತವಾಗಿಡಲು ಯಾಕೆ ಸಾಧ್ಯವಾಗುತ್ತಿಲ್ಲ , ಈ ಕೆಳಕಂಡ ಕಲೆಗಳು ಅವಸಾನದ ಅಂಚಿನಲ್ಲಿವೆ.
ಬಹುರೂಪಿ , ಬಯಲಾಟ ಮತ್ತು ಜೋಗತಿಯರ ಆಟ ಇನ್ನು ಕೆಲವು
ಜೋಗತಿಯರ ಆಟ : ಜೋಗತಿಯರ ಆಟ ಒಂದು ಸಮುದಾಯ ನಡೆಸಿಕೊಂಡು ಬಂದಂತ ಕಲೆ , ಈ ಆಟವನ್ನು ದೇವದಾಸಿಯರು ಪ್ರದರ್ಶಿಸುತ್ತಿದ್ದರು. ದೇವದಾಸಿ ಪದ್ಧತಿ ಸಮಾಜದ ಒಂದು ಕಂಟಕ ಎಂದು ಬಹುಪಾಲು ಸಮಾಜದ ಜನರು ನಿರ್ದರಿಸಿದ ಮೇಲೆ , ಈ ಪದ್ದತಿಯೇನೋ ನಿಂತಿದೆ ಆದರೆ ಅದರೊಂದಿಗೆ ಅಂಟಿಕೊಂಡಿದ್ದ ಒಂದು ಜಾನಪದ ಕಲೆ ಅವಸಾನದ ಅಂಚಿನಲ್ಲಿದೆ. ಕಾರಣ ಈ ಸಮುದಾಯದ ಇಂದಿನ ಪೀಳಿಗೆಯ ಜನ ಈ ಕಲೆಯೊಂದಿಗೆ ಗುರುತಿಸಿಕೊಳ್ಳಲು ಒಪ್ಪದಿರುವುದು.
ಇಲ್ಲಿ ಒಪ್ಪಬೇಕಾದ ವಿಷಯವೆಂದರೆ , ದೇವದಾಸಿ ಪದ್ಧತಿ ಸ್ವಸ್ತ ಸಮಾಜಕ್ಕೆ ಕಂಟಕ.
ಆದರೆ ಕಲೆ - ಕಲೆಗೆ ಕೊಳೆ ಇಲ್ಲ ಅಲ್ಲವೇ
ಹಾಗಾದರೆ ಈ ಒಂದು ಜಾನಪದ ಕಲೆಯನ್ನು ನಮ್ಮ ಸಮಾಜ ತಿರಸ್ಕರಿದ್ದೇಕೆ
ಇದೆ ಸಮುದಾಯಕ್ಕೆ ಸೇರಿದ ಹೆಸರು......... ಹೇಳಬಯಸದ ಹಾಡುಗಾರ್ತಿ ಒಬ್ಬರನ್ನು ಮತ್ತು ಅವರ ಗಾಯನವನ್ನು ಬಹುವಾಗಿ ಮೆಚ್ಚಿಕೊಂಡ ಮತ್ತು ಆ ಕಲೆಯನ್ನು ಒಪ್ಪಿಕೊಂಡ ಈ ಮುಂದುವರಿದ ಸಮಾಜ ಈ ಒಂದು ಜಾನಪದ ಕಲೆಯನ್ನು ತಿರಸ್ಕರಿದ್ದೇಕೆ, ಹಾಡುಗಾರ್ತಿಯನ್ನು ಒಪ್ಪಿಕೊಂಡಿದ್ದೇಕೆ ಸಂಗೀತ ಶಾಸ್ತ್ರಿಯವೆಂದೆ.
ನನ್ನ ಪ್ರಶ್ನೆ
ಕೆಲವೇ ಕೆಲವು ಜಾನಪದ ಕಲೆಗಳನ್ನು ಮತ್ತು ಶಾಸ್ತ್ರಿಯ ಕಲೆಗಳನ್ನು ವೈಭವಿಕರಿಸುವ ಅಥವಾ ಪೋಷಿಸುವ ಆತುರದಲ್ಲಿ, ಉಳಿದ ಜಾನಪದ ಕಲೆಗಳ ಅವಸಾನಕ್ಕೆ ನಾವು ಕಾರಣರಾದೆವೆ.
ಪ್ರಗತಿಪರರೆಂದು ಕರೆದುಕೊಳ್ಳುವ ಒಂದು ಸಮಾಜದ ಗುಂಪು ಅಥವಾ modern artist ಗಳು ಈ ಜೋಗತಿತರ ಆಟವನ್ನು ಯಾಕೆ ತಿರಸ್ಕರಿಸಿದರು, ಜೋಗತಿಯರ ಆಟ ಎಂಬ ಕಲೆ ದೇವದಾಸಿಯರಿಂದ ಬಂದದ್ದು ಎಂಬ ಒಂದೇ ಕಾರಣಕ್ಕೆ ಆ ಕಲೆ ತಿರಸ್ಕೃತವಾಯಿತೆ.
ಕಲೆಗೆ ಕೊಳೆ ಇಲ್ಲ ಅಲ್ಲವೇ
ಈ ಪ್ರಶ್ನೆಯನ್ನು ನಾನು ಸೆಮಿನಾರ್ ನಲ್ಲಿ ಎತ್ತಿದ್ದು ಹೌದು ಹಾಗು ಸಮಾಧಾನಕರ ಉತ್ತರ ದೊರೆಯದ ಕಾರಣ, ಈ ಪ್ರಶ್ನೆಯನ್ನು ಸಂಪದದ ಪ್ರಗತಿಪರರು ಮತ್ತು ಕಲಾರಾಧಕರ ಮುಂದಿಡುತ್ತಿದ್ದೇನೆ.
ಒಂದು ಉತ್ತಮ ಚರ್ಚೆಯೊಂದಿಗೆ ಉತ್ತರ ದೊರೆಯಬಹುದೆಂಬ ನಂಬಿಕೆ
Comments
ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ
ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ
In reply to ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ by santhosh_87
ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ
In reply to ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ by raghusp
ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ
ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ
In reply to ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ by srimiyar
ಉ: ಕಲೆಗೆ ಕೊಳೆ ಇಲ್ಲ ಅಲ್ಲವೇ