ಕವನ..!.

ಕವನ..!.



ನನಗೂ ಅನಿಸುತ್ತದೆ

ಕವನ ಬರೆಯಬೇಕೆಂದು.

ಆದರೆ ?

ಕಮರಿಹೋದ ಬಾವನೆಗಳು,

ಬಿಡಿಸಲಾರದ ಸಾಲುಗಳು,

ನನ್ನನ್ನು ಅಂಧಕಾರಕ್ಕೆ ತಳ್ಳುತ್ತವೆ.

ಮರಳಿ ಅದೇ ಯತ್ನ, ಪ್ರಯತ್ನ.

ನೆನ್ನೆಯಿದ್ದ ನೆನಪುಗಳು

ಇಂದು ಇರುವುದಿಲ್ಲ.

ಬರೆಯಬೇಕೆಂದರೆ

ಪದಗಳೇ ಹುಟ್ಟುವುದಿಲ್ಲ.

ಎಂತಹ ವಿಪರ್ಯಾಸ !

ಆದರೂ ಬಿಡುವುದಿಲ್ಲ

ನಾನೇ ಕವಿತೆಯಾಗಬೇಕು.

ನನ್ನ ಜೀವನವೇ

ಸಾಲುಗಳಾಗಬೇಕು.

ನನ್ನಲ್ಲಿ ವಿಶ್ವಾಸವಿದೆ

ಬರವಸೆಯಿದೆ.

ಬರೆದೇ ಮುಗಿಸುತ್ತೇನೆ ಎಂದು.

ಇಂದಲ್ಲ ನಾಳೆ

ನನ್ನ ಕವನ ಚಿಗುರಿ

ಮರವಾಗಿ, ಹೆಮ್ಮರವಾಗಿ,

ಬೆಳೆಯುತ್ತದೆ.

ಆಗ ತಿಳಿಯುತ್ತದೆ

ನನಗೂ ಕವನ ಬಿಡಿಸಲು

ಬರುತ್ತದೆ ಎಂದು.

 

                                             ವಸಂತ್

Rating
No votes yet

Comments