ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಜೆ ಡಿ ಎಸ್ ಹಿನ್ನಡೆ!

ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಜೆ ಡಿ ಎಸ್ ಹಿನ್ನಡೆ!

    ರಾಮನಗರ ತಾಲೂಕು ಜೆ ಡಿ ಎಸ್ ಭದ್ರಕೋಟೆ ಎಂಬುದು ನಿರ್ವಿವಾದ ಎಂಬುದು ಸತ್ಯವಾದರೂ ಜೆ ಡಿ ಎಸ್  ನ ಕೆಲವು ಘಟಾನುಘಟಿಗಳು ಇತ್ತಿಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಸೋಲನ್ನಪ್ಪಿರುವುದು ಜೆ ಡಿ ಎಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಮಂಚನಾಯ್ಕನ ಹಳ್ಲಿಯ ಶೇಷಪ್ಪ, ಕೇತೋಹಳ್ಳಿಯ ಶಂಕರಪ್ಪ, ದೊಡ್ಡಗಂಗವಾಡಿಯ ಶಿವಪ್ರಕಾಶ್, ಕವಣಾಪುರದ ಶಿವಲಿಂಗಯ್ಯ, ಹುಣಸೇಮರದದೊಡ್ಡಿಯ ಸದಾನಂದ ಮುಂತಾದ ದೊಡ್ಡ ಹಸರುಗಳೇ ಮಣ್ಣು ಮುಕ್ಕಿರುವುದು ಜೆ ಡಿ ಎಸ್ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ. ಇವರ ವಿರುದ್ಧ ಕಡು ವೈರಿ ಕಾಂಗ್ರಸ್ಸಿಗರು ವಿಜೇಯಿಗಳಾಗಿರುವುದು ಗಾಯದ ಮೇಲೆ ಬರೆ ಎಳದಂತಾಗಿದೆ.
    ಒಟ್ಟಾರೆ ಫಲಿತಾಂಶದಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಮೇಲುಗೈಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ಸಿಗರು ಬೀಗುತ್ತಿದ್ದಾರೆ. ರಾಮನಗರ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿ ನೇಪಥ್ಯಕ್ಕೆ ಸೇರಿದ್ದ ಕಾಂಗ್ರೆಸ್ಸ್ ಪಕ್ಷಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆಗಳು ಹೊಸ ಹುರಪನ್ನು ತಂದಿದೆ ಎನ್ನುವುದು ಸತ್ಯ. ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವ ಪ್ರೀತಿಯ ಕ್ಷೇತ್ರವಾಗಿರುವ ರಾಮನಗರ ಜೆ ಡಿ ಎಸ್ ಭದ್ರಕೋಟೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಜೆ ಡಿ ಎಸ್ಗೆ ಹಿನ್ನಡೆ ಯಾಕಾಯಿತು ಎಂಬ ಕಾರಣಕ್ಕೆ ಸಿಂಪಲ್ ಉತ್ತರ ಕುಮಾರಸ್ವಾಮಿ ಪ್ರಚಾರಕ್ಕೆ ಬರದಿರುವುದು!
    ಕುಮಾರಸ್ವಾಮಿ ಬಂದರೇನೇ ಅದು ಚುನಾವಣೆ, ಸ್ಥಳಿಯ ಯಾವ ಮುಖಂಡರನ್ನು ಮತದಾರ ನಂಬೋದಿಲ್ಲ ಎಂಬುದಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆಗಳೇ ಸಾಕ್ಷಿ!
    ರಾಜ್ಯದಲ್ಲಿ ಆಡಳಿತಾ ರೂಢ ಬಿಜೆಪಿ ಪಕ್ಷದ ಕಾರ್ಯಕರ್ತರ ಸಹ ಮೀಸಿ ತಿರುವಲಾರಂಭಿಸಿದ್ದಾರೆ. ಕುಮಾರಸ್ವಾಮಿಯವರ ಭದ್ರಕೋಟೆಗೆ ನಾವೂ ಲಗ್ಗೆ ಇಡಲಿದ್ದೇವೆ. ಮಾಯಗಾನಹಳ್ಳಿ ಗ್ರಾಮ ಪಂಚಾಯ್ತಿ ನಮ್ಮ ತಕ್ಕೆಗೆ ಬೀಳಲಿದೆ ಎಂದು ಬೀಗುತ್ತಿದ್ದಾರೆ. ೨೩ ಪಂಚಾಯ್ತಿಗಳ ಪೈಕಿ ಎಷ್ಟು ಪಂಚಾಯ್ತಿಯಲ್ಲಿ ಎಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ತಾರೆ ಎಂಬ ಪ್ರಶ್ನೆಗೆ ಬಿಜೆಪಿ ಮುಖಂಡರಲ್ಲಿ ಉತ್ತರವೇ ಇಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂಬದು ಬಿಜೆಪಿಯವರ ಧೋರಣೆ.

ಗ್ರಾಮ ಪಂಚಾಯ್ತಿಗಳು ಪಕ್ಷ ರಹಿತವಾಗಿರಬೇಕು ಎಂಬ ನಿಯಮ ವಿದೆಯಾದರು ಈಗಾಗಲೆ ಇಲ್ಲಿ ರಾಜಕೀಯ ಹಾಸುಹೊಕ್ಕಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಎಲ್ಲ ಪಕ್ಷಗಳು ಪ್ರತಿಷ್ಟೆಯನ್ನಾಗಿ ಸ್ವಿಕರಿಸಿದ್ದರಿಂದ ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಅಂತಿಮವಾಗಿ ಯಾವ ಪಕ್ಷ ಎಷ್ಟು ಗ್ರಾಮ ಪಂಚಾಯ್ತಿಗಳನ್ನು ತಮ್ಮ ತಕ್ಕೆಗೆ ಹಾಕಿಕೊಳ್ಳುವುದೋ ಬಹುಶಃ ಇನ್ನೊಂದು ವಾರದಲ್ಲಿ ತಿಳಿಯಲಿದೆ.

 

Rating
No votes yet