ಕೇಳಬಾರದ್ದು
ಮೇಲ್ಮೆಯನು ಕೇಳು ನೀ ಚೆಲುವನಲ್ಲ
ನಡತೆಯೆಂಬುದ ಕೇಳು ಕುಲವನಲ್ಲ;
ಕೈಗೂಡಿಸಿದ ಕೇಳು ಕಲಿಕೆಯಲ್ಲ
ನಲಿವು ಪಡೆದುದ ಕೇಳು ಗಳಿಕೆಯಲ್ಲ!
ಸಂಸ್ಕೃತ ಮೂಲ:
ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ
ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾ ಸುಖಂ ಪೃಚ್ಛಸ್ವ ಮಾ ಧನಂ
-ಹಂಸಾನಂದಿ
ಕೊ: ಇವತ್ತು ತಾನೇ ಶತಾವಧಾನಿ ಗಣೇಶ್ ಅವರ ಉಪನ್ಯಾಸದಲ್ಲಿ ಕೇಳಿದ ಸುಭಾಷಿತವಿದು.
Rating