ಗ್ರಾಮೀಣ ಪ್ರದೇಶದ ಜನಸಾಮಾನ್ಯರ ವೈದ್ಯ ಡಾ. ಎನ್.ಜೋಗೇಂದ್ರನಾಥ್

ಗ್ರಾಮೀಣ ಪ್ರದೇಶದ ಜನಸಾಮಾನ್ಯರ ವೈದ್ಯ ಡಾ. ಎನ್.ಜೋಗೇಂದ್ರನಾಥ್

ಚಿತ್ರ

ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯೆರು ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಕರ್ತವ್ಯಕ್ಕೆ ಸೇರಿದ ವೈದ್ಯರೊಬ್ಬರು ಮೂವತ್ತು ವರ್ಷಗಳ ಕಾಲ ಅದೇ ಹಳ್ಳಿಯಲ್ಲಿ ಸತತವಾಗಿ ಸೇವೆ ಸಲ್ಲಿಸಿ ಜನರ ಅಪಾರ ಪ್ರೀತಿಯನ್ನು ಗಳಿಸಿ ಸೇವೆಗೆ ಸೇರಿದ ಆಸ್ಪತ್ರೆಯಲ್ಲಿಯೇ ಸೇವಾ ನಿವೃತ್ತಿ ಪಡೆದು ಅದೇ ಹಳ್ಳಿಯಲ್ಲಿ ತನ್ನ ಪ್ರೀತಿಯ ಜನರಿಗಾಗಿ ಸಕಲ ವ್ಯವಸ್ಥೆಯುಳ್ಳ ಆಸ್ಪತ್ರೆಯೊಂದನ್ನು ಕಟ್ಟಿಸಿರುವ ಯಶಸ್ವಿ ಕತೆಯಿದು.

                ಕತೆಯ ನಾಯಕ ಡಾ. ಎನ್. ಜೋಗೇಂದ್ರನಾಥ್. 1993ರಲ್ಲಿ ಎಂಬಿಬಿಎಸ್ ವ್ಯಾಸಂಗ ಮುಗಿಸಿದ ಅವರು ಆರಂಭದಲ್ಲಿ ಒಂದು ವರ್ಷದ ಕಾಲ ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. 1996ರಲ್ಲಿ ಹನಗೋಡಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರಿ ವೈದ್ಯರಾಗಿ ನೇಮಕಾತಿ ಆದೇಶ ಬಂದಿತು. ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಸೇವೆ ಮಾಡಬೇಕೆಂಬ ಉತ್ಕಟ ಮನೋಭಿಲಾಷೆಯನ್ನು ಹೊಂದಿದ್ದ ಅವರು ಹಿಂದೆ ಮುಂದೆ ಯೋಚಿಸದೆ, ನಗರದ ಸಕಲ ಸೌಲಭ್ಯವುಳ್ಳ ಖಾಸಗಿ ವೈದ್ಯ ವೃತ್ತಿಯನ್ನು ತ್ಯಜಿಸಿ, ಅಂದಿಗೆ ತೀರಾ ಹಿಂದುಳಿದ ಮತ್ತು ನಾಗರಹೊಳೆ ಅಭಯಾರಣ್ಯದ ಅಂಚಿನ ಗ್ರಾಮವಾದ ಹನಗೋಡಿಗೆ ಹೋಗಿ ಸೇವೆಗೆ ಸೇರಿದರು. ಹನಗೋಡನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡ ಅವರು ಅಲ್ಲಿಂದ ಇಲ್ಲಿಯವರೆಗೂ ನಗರದ ಕಡೆಗೆ ಎಂದೂ ತಿರುಗಿ ನೋಡಲಿಲ್ಲ.

                ಇಂದಿಗೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ವೈದ್ಯರು ವಸತಿ ಸೌಕರ್ಯವಿದ್ದರೂ ಅವರು ಸೇವೆ ಸಲ್ಲಿಸುವ ಹಳ್ಳಿಗಳಲ್ಲಿ ವಾಸಿಸದೆ ಹತ್ತಿರದ ನಗರಗಳಲ್ಲಿ ಮನೆ ಮಾಡಿಕೊಂಡು ದಿನನಿತ್ಯ ಬಂದು ಹೋಗುವುದು ಸಾಮಾನ್ಯ. ಡಾ.ಜೋಗಿಂದ್ರನಾಥ್ ಸರ್ಕಾರಿ ಸೇವೆಗೆ ಸೇರಿದಾಗ ೩೦ರ ಅರೆಯದ ಯುವಕ. ಸಾಮಾನ್ಯವಾಗಿ ವಯಸ್ಸಿನ ಯುವಕರಿಗೆ ನಗರದ ಶೋಕಿ ಜೀವನ ಆಕರ್ಷಿಸುತ್ತದೆ. ಆದರೆ ಅವರು ಮೂಲಭೂತ ಸೌಕರ್ಯಗಳಿಂದ ವಂಚಿತವಾದ, ನಗರ ಪ್ರದೇಶದಿಂದ ದೂರದಲ್ಲಿ ಹುಣಸೂರು ತಾಲ್ಲೂಕಿನ ಕಟ್ಟಕಡೆಯ ಗ್ರಾಮವಾದ ಹನಗೋಡಿನಲ್ಲಿಯೇ ಮನೆ ಮಾಡಿಕೊಂಡು ಅಲ್ಲಿನ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

                ಟಿ.ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಎಸ್. ನಂಜುAಡಯ್ಯ ಮತ್ತು ಮುಲ್ಲಾಜಮ್ಮನವರ ಮೂರನೇ ಪುತ್ರನಾಗಿ 08.11.1963 ರಂದು ಜನಿಸಿದ ಡಾ. ಜೋಗಿಂದ್ರನಾಥ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದÀರು. ಮೈಸೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದರು. ಓದಿನಲ್ಲಿ ಸದಾ ಮುಂದಿದ್ದ ಅವರು ಯುವಕನಾಗಿದ್ದಾಗಲೇ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಧ್ವನಿಯಾಗಬೇಕೆಂಬ ಹಂಬಲವನ್ನು ಹೊಂದಿದ್ದರು. ಹಂಬಲವೇ ಮುಂದೆ ಅವರು ಮೂವತ್ತು ವರ್ಷಗಳ ಕಾಲ ಒಂದೇ ಹಳ್ಳಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಕಾರಣವಾಯಿತು.

                ೨೦೨೩ರಲ್ಲಿ ಸೇವೆಯಿಂದ ನಿವೃತ್ತರಾದ ನಂತರವೂ ಅವರಿಗೆ ನಗರದಲ್ಲಿ ನಿವೃತ್ತಿ ಜೀನವ ನಡೆಸಬೇಕೆಂಬ ಕಿಂಚಿತ್ತು ಆಸೆ ಕೂಡ ಬರಲಿಲ್ಲ. ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಗ್ರಾಮವನ್ನು ಬಿಡಲು ಅವರಿಗೆ ಮನಸ್ಸಾಗಲಿಲ್ಲ. ಅವರು ಜನರ ಪ್ರೀತಿ ಮತ್ತು ಸೇವೆಯ ಹಂಬಲದಿA ಗೌರವ ಸಂಭಾವನೆಯ ಮೇಲೆ ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯನ್ನು ಮುಂದುವರೆಸಿಕೊAಡು ಬಂದಿದ್ದಾರೆ. ಸರ್ಕಾರ ಕೂಡ ಅವರ ಸೇವೆಗೆ ಮನ್ನಣೆ ನೀಡಿದೆ. ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿಯೂ ರೋಗಿಗಳು ಮತ್ತು ಗರ್ಭಿಣಿ ಮಹಿಳೆಯರು ಡಾ. ಜೋಗಿಂದ್ರನಾಥ್ ಅವರ ಕೈಗುಣ ಒಳ್ಳೆಯದೆಂದು ಅಭಿಮಾನದಿಂದ  ಅವರು ಸೇವೆ ಸಲ್ಲಿಸುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಸಾಲು ಸಾಲಗಿ ತಮ್ಮ ಸರದಿಗಾಗಿ ಕಾಯುವುದನ್ನು ನೋಡಬಹುದು.

                 ಜನರಿಗೆ ಕಷ್ಟವಾಗಬಾರದೆಂಬ ಕಾರಣಕ್ಕೆ ಇವರದು ನಿರಂತರ ಸೇವೆ. ಹೆರಿಗೆ ನೋವಿವ ಗರ್ಭಿಣಿಯರನ್ನು, ಬೆಳೆಗಳಿಗೆ ಸಿಂಪಡಿಸುವ ಕಿಟನಾಶಕ ಔಷಧಿಗಳನ್ನು ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ಕರೆದುಕೊಂಡು ಬಂದವರು ಅವರ ವಸತಿ ಗೃಹದ ಬಾಗಿಲು ಬಡಿದರೆ ತಕ್ಷಣ ಸ್ಪಂದಿಸಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ಮುಂದಾಗುವ ಅವರು ತಿಂಗಳಲ್ಲಿ ಐದರು ರಾತ್ರಿಗಳನ್ನಾದರೂ ಅವರು ನಿದ್ದೆ ಇಲ್ಲದೆ ಕಳೆಯುತ್ತಾರೆ.

ಹನಗೋಡು ಗ್ರಾಮದ ಸುತ್ತಲಿನ ಕಾಮೇಗೌಡನಹಳ್ಳಿ, ಗೌಡಿಕೆರೆ, ಮಾದಿಹಳ್ಳಿ ಸೇರಿದಂತೆ ೩೪ ಹಳ್ಳಿಗಳ ಜನರನ್ನು ಅಪಾರವಾಗಿ ಪ್ರೀತಿಸುವ ಅವರು ತಮ್ಮ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂಬ ಮಹತ್ವಾಕಾಂಕ್ಷೆಯಿA ಅದೇ ಗ್ರಾಮದಲ್ಲಿ ೩೦ ಹಾಸಿಗೆಗಳಎನ್ಜೆಎಂ ಡಾ. ಎನ್. ಜೋಗೇಂದ್ರನಾಥ್ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಚಿಕ್ಕ ಪುಟ್ಟ ರಕ್ತ ಪರೀಕ್ಷೆ ಅಥವಾ ಮೂತ್ರ ಪರೀಕ್ಷೆಗಾಗಿ ತಾಲ್ಲೂಕು ಕೇಂದ್ರ ಹುಣಸೂರು ಅಥವಾ ದೂರದ ಮೈಸೂರಿಗೆ ತೆರಳಬೇಕಾಗಿದ್ದ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಮತ್ತು ಆದಿವಾಸಿಗಳು ವಾಸಿಸುವ ಹಾಡಿಯ ಜನರಿಗೆ ಅನೂಕೂಲವಾಗುವಂತೆ ಎಲ್ಲಾ ರೀತಿಯ ರಕ್ತಪರೀಕ್ಷೆ, ಎಕ್ಸ್ರೇ, ಅಲ್ಟಾçಸೌಂಡ್ ಸ್ಕಾö್ಯನಿಂಗ್, ತುರ್ತು ಚಿಕಿತ್ಸೆ ವಿಭಾಗ, ಆಪರೇಷನ್ ಥಿಯೇಟರ್, ಸಕಲ ಸೌಲಭ್ಯಗಳನ್ನು ಹೊಂದಿರುವ ಹೆರಿಗೆ ಕೊಠಡಿ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ.

ವ್ಯದ್ಯ ವೃತ್ತಿ ವಾಣೀಜ್ಯೀಕರಣ ಮತ್ತು ನಗರೀಕರಣವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗ್ರಾಮೀಣ ಜನರಿಗಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಹೋಬಳಿ ಕೇಂದ್ರವೊAದರಲ್ಲಿ ಅತ್ಯಾಧುನಿಕ ಆಸ್ಪತ್ರೆಯನ್ನು ಕಟ್ಟಿಸುವ ಮೂಲಕ ಸದ್ದಿಲ್ಲದೆ, ಪ್ರಚಾರದ ಬೆನ್ನು ಹತ್ತದೆ, ಎಲೆಮರೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಡಾ. ಜೋಗಿಂದ್ರನಾಥ್ ನಿಜಕ್ಕೂ ಅಭಿನಂದನಾರ್ಹರು.

ಇದೇ ತಿಂಗಳ 18ರಂದು ನಾದಬ್ರಹ್ಮ ಡಾ. ಹಂಸಲೇಖ, ಗಾವಡಗೆರೆಯ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರ ಹಾಜರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪನವರು ಸದುದ್ದೇಶದ ಆಸ್ಪತ್ರೆಯನ್ನು ಜನತೆಗೆ ಅರ್ಪಿಸಲಿದ್ದಾರೆ.

-ಡಾ. ಅಮ್ಮಸಂದ್ರ ಸುರೇಶ್               

Rating
Average: 4 (2 votes)