ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿವಾರಣೆ ಆದೀತೇ?!

ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿವಾರಣೆ ಆದೀತೇ?!

ಮಹಾರಾಷ್ಟ್ರದ ನಾಂದೇಡ್‍ನ  ಡಾ. ಸಂಜಯ್ ಗಾಯಕ್‍ವಾಡ್ ಏಳು ನೂರ ಐವತ್ತು ವರುಷಗಳ ಹಿಂದೆ, ೧೨೪೦ರ ದಶಕದಲ್ಲಿ ಮಂಗಳೂರಿನಲ್ಲಿ ಓರ್ವ ಬ್ರಾಹ್ಮಣನಾಗಿ ಜೀವಿಸುತ್ತಿದ್ದವರಂತೆ. ಆಗ ವಿಕ್ರಮಾದಿತ್ಯನ ರಾಜ್ಯಭಾರ ನಡೆಯುತ್ತಿತ್ತಂತೆ. ಆತನ ಕಣ್ಮುಂದೆ ಓರ್ವ ಪೂಜಾರಿ ಕಾಗೆಯ ಬಲಿ ನೀಡಿದ್ದನ್ನು ಕಣ್ಣಾರೆ ಕಂಡು ಆತ ನೊಂದುಕೊಂಡಿದ್ದರು. ಆತನ ಸ್ನೇಹಿತೆ, ಕೆಳಜನಾಂಗದವಳಾಗಿದ್ದ ಕಾರಣ ಆಕೆಗೆ ದೇವಸ್ಥಾನದ ಒಳಗೆ ಪ್ರವೇಶ ಇರಲಿಲ್ಲ. ಆಕೆ ಕದ್ದು ಮುಚ್ಚಿ ದೇವಸ್ಥಾನದ ಒಳಗೆ ಪ್ರವೇಶಿಸಿದ್ದನ್ನು ಕಂಡ ಆ ಪೂಜಾರಿ ಆಕೆಯನ್ನು ವಧೆ ಮಾಡುತ್ತಾನೆ. ತನ್ನನ್ನು ರಕ್ಷಿಸದೇ ಮೂಕ ಪ್ರೇಕ್ಷಕನಾದ ತನ್ನ ಸ್ನೇಹಿತನಿಗೆ ಆಕೆಯ ಆತ್ಮ ಶಾಪ ನೀಡುತ್ತದೆ. "ನೀನು ಯಾವ ಹೆಣ್ಣು ಮಗಳಿಗೆ ಉಪಕಾರ ಮಾಡಿದರೂ ನೀನು ಕೊನೆಗೆ ಆಕೆಯಿಂದ ಛೀಮಾರಿ ಹಾಕಿಸಿಕೊಂಡು ಆಕೆಯಿಂದ ದೂರವಾಗು". ಇತ್ತ ಪೂಜಾರಿಗೆ ಈತ ಕಾಗೆಯಾಗುವಂತೆ ಶಾಪನೀಡುತ್ತಾನೆ. ಕಾಗೆಯಾದ ಆ ಪೂಜಾರಿ ಈತನ ಜೀವನಾವಧಿವರೆಗೂ ಈತನ ಬೆನ್ನಹಿಂದೇ ಸುತ್ತುತ್ತಿರುತ್ತದೆ.


ಅಲ್ಲಿಂದಿತ್ತ ೮೪ ವಿವಿಧ ಜನ್ಮಗಳನ್ನು ಎತ್ತಿದ್ದ ಆತನ ಆತ್ಮ, ಈಗ ಸಂಜಯ್ ಗಾಯಕ್‍ವಾಡ್‍ನ ರೂಪದಲ್ಲಿ ಜನ್ಮವೆತ್ತಿರುತ್ತದೆ. ಮತ್ತೆ ಈ ಜನ್ಮದಲ್ಲಿ, ಈತನಿಗೆ ಕಾಗೆಗಳ ಕಾಟ ಶುರುವಾಗಿರುತ್ತದೆ. ಯಾವಾಗಲೂ, ಕಾಗೆಗಳು ಗುಂಪುಕಟ್ಟಿಕೊಂಡು ಈತನನ್ನು ಹಿಂಬಾಲಿಸ್ತುತ್ತಿರುತ್ತವೆ. ಅದೂ ಅಲ್ಲದೆ, ಈತ ಯಾವ ಹೆಣ್ಣಿನ ಸ್ನೇಹ ಬಯಸಿ ಹೋದರೂ, ಎಷ್ಟೇ ಒಳ್ಳೆದನ್ನು ಮಾಡಿದರೂ ಕೊನೆಗೂ ಆ ಹೆಣ್ಣಿನಿಂದ ಛೀಮಾರಿ ಹಾಕಿಸಿಕೊಂಡು ಅಪಮಾನಕ್ಕೀಡಾಗುತ್ತಿದ್ದಾರೆ.


ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಡಾ. ತೃಪ್ತಿ ಜೈನ್‍ರಲ್ಲಿಗೆ ಬಂದಿದ್ದ ಈತನಿಗೆ, ಎನ್‍ಡಿಟಿವಿ ಇಮಾಜಿನ್‍ನ ಕಾರಕ್ರಮವೊಂದರಲ್ಲಿ (ರಾಝ್ ಪಿಛ್‍ಲೇ ಜನಮ್ ಕಾ)
ಸಂಜಯ್‍ಗೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುವಂತೆ, ಸಮ್ಮೋಹಿನಿ ವಿದ್ಯೆಯ ಮೂಲಕ, ಪರಿಹಾರ ನೀಡಿ (ಎಲ್ಲಾ ಸಮಸ್ಯೆಗಳಿಂದ ಆತನ ಆತ್ಮಕ್ಕೆ ಮುಕ್ತಿ ದೊರಕಿಸಿ) ಮನೆಗೆ ಕಳುಹಿಸಿರುತ್ತಾರೆ (ನಿನ್ನೆ ರಾತ್ರಿ ಪ್ರಸಾರವಾದ ಕಂತಿನಲ್ಲಿ) .


ಆದರೆ, ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿಜವಾಗಿಯೂ, ನಿವಾರಣೆ ಆದೀತೇ?

Rating
No votes yet

Comments