ದಯವಿಟ್ಟು ಎಲ್ಲರೂ ನನ್ನನ್ನು ಕ್ಷಮಿಸಿ

ದಯವಿಟ್ಟು ಎಲ್ಲರೂ ನನ್ನನ್ನು ಕ್ಷಮಿಸಿ

"ಏನು ಸಾಧಿಸಿದೆ ಆ ಎರೆಡು ದಿನಗಳಲ್ಲಿ?"
ನೆನ್ನೆ ರಾತ್ರಿ ನನ್ನ ಮನಸು ಕೇಳಿತು
ನೆನ್ನೆ ರಾತ್ರಿ ಮನೆಗೆ ಹೋದಾಗ ೧೦ ಘಂಟೆ.,ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದೆ .
ಆಗಲೇ ಮನಸ್ಸು ಕೇಳಿದ್ದು.
ಘಂಟಾನುಘಂಟೇ ಕಾಮೆಂಟ್ ಕುಟ್ಟಿ ಕುಟ್ಟಿ ಕೆಲಸಗಳನ್ನು ಮರೆತು ಲಾಸ್ ಆಗಿದ್ದು ಜೊತೆಗೆ ಮನಸು ಕೆಡಿಸಿಕೊಂಡದ್ದು ಬಿಟ್ಟರೆ ಏನು ಸಾಧಿಸಿದೆ?
ಸಂಪರ್ಕ ಮನರಂಜನೆಗೆ ಅಥವ ಮನೋವಿಕಾಸಕ್ಕೆ ಎಡೆ ಮಾಡಬೇಕೆ ಹೊರತು ಶಾಂತಿನಾಶಕವಾಗಿರಬಾರದು.
ನಾನು ಬರೆದ ಕೆಲವು ಕಟುವಾಕ್ಯಗಳು ಎಷ್ಟು ಜನರ ಮನಸನ್ನು ನೋಯಿಸಿದೆಯೋ . ಅವರೆಲ್ಲಾ ದಯವಿಟ್ಟು ಕ್ಶಮಿಸಿ (ಮಾಯ್ಸ,ಸುಪ್ರೀತ್, ಕಕ್ಕಿಲಾಯರು, ಸಮ್ಮರ್ ಗ್ಲೂ
ಕನ್ನಡಕಂದರು)
ಹಾಗೆಯೇ ನೆನ್ನೆ ಸಮ್ಮರ್ ಗ್ಲೂ ಅವರ ಚರ್ಚಾ ವಿಷಯಗಳಲ್ಲಿನ ನಿಯಮಗಳನ್ನು ಓದಿದೆ. ಅವರ ಆ ನಿಯಮಗಳು ನನ್ನ ಮನಸನ್ನು ಸ್ವಲ್ಪ ಬದಲಾಯಿಸಿತೆಂದರೆ ಸುಳ್ಳಲ್ಲ
ಹಾಗೆಯೇ ನನಗೆ ಈ ನಿಟ್ಟಿನಲ್ಲಿ ಸಲಹೆ ನೀಡಿದ ಸುರೇಶ್ ಹಾಗು ಎಲ್ಲರಿಗೂ ಧನ್ಯವಾದಗಳು.
ಸಂಪದ ಸಹೃದಯಿಗಳ ತಾಣ, ಬರಹಕ್ಕೆ ಅನುವು ಮಾಡಿರುವ ತಾಣ . ಕನ್ನಡದಲ್ಲಿ ಬರೆಯೋದಕ್ಕೆ ಸ್ಪೂರ್ತಿ ಕೊಟ್ಟ ತಾಣ
ಈ ತಾಣವನ್ನು ದ್ವೇಷ ಅಸೂಯೆ ಕಾಲೆಳೆಯುವ ಸ್ಥಳವನ್ನಾಗಿ ಮಾಡುವಂತಹ ಕೆಲಸಕ್ಕೆ ನಾನು ಕೈ ಹಾಕಲಾರೆ

-------------------------------------------------------******************************************------------------
*ಈ ಬದಲಾವಣೆಗೆ ಕಾರಣವಾದ ದೇವರಿಗೆ ನನ್ನ ವಂದನೆಗಳು.

Rating
No votes yet

Comments