ನಾ. ಕಸ್ತೂರಿ ಅವರ 'ಗಾಳಿಗೋಪುರ'ದಿಂದ ನಾಲಕ್ಕು ಸಾಲು !

ನಾ. ಕಸ್ತೂರಿ ಅವರ 'ಗಾಳಿಗೋಪುರ'ದಿಂದ ನಾಲಕ್ಕು ಸಾಲು !

...... ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ತುಂಬಾ ವಿಚಕ್ಷಣೆಯಿಂದ ರಚಿಸಿದ್ದರು . ಸಂಗೀತದ ಬೇಸರವನ್ನು ಪರಿಹರಿಸಲು ನಾಟ್ಯ , ನಾಟ್ಯದ ಅಸಹ್ಯತೆಯನ್ನು ನೀಗಿಸಲು ಉಪನ್ಯಾಸ , ಉಪನ್ಯಾಸದ ಕೊರೆತವನ್ನು ಸಂತೈಸಲು ನಾಟಕ , ನಾಟಕದ ನೋವನ್ನು ಮರೆಯಲು ಅಧ್ಯಕ್ಷೆಯ ಮುಕ್ತಾಯ ಭಾಷಣ , ಅವರ ಭಾಷಣದಿಂದಾಗುವ ತಲೆನೋವನ್ನು ತೀರಿಸಲು ಮತ್ತೊಬ್ಬ ಅಧ್ಯಕ್ಷೆಯ ಎರಡನೆಯ ಮುಕ್ತಾಯ ಭಾಷಣ ! ಇದಲ್ಲದೆ ಇಬ್ಬರು ಅಧ್ಯಕ್ಷೆಯರಿಗೂ ಅಕಸ್ಮಾತ್ತಾಗಿ ನಡುವೆ ವಾಗ್ವಾದ ಉಂಟಾಗಿ ಮುಷ್ಟಿಯುದ್ಧಕ್ಕೆ ತಿರುಗಬಹುದೆಂಬ ನಿರೀಕ್ಷೆಯೂ ಮಹಾಜನಗಳಿಗಿತ್ತು.........

Rating
No votes yet