ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

 (೩೬೬) ’ಅಡುಗೆಮನೆ’ ಮತ್ತು ’ವಸ್ತ್ರ’ ಎಂಬ ಎರಡು ಹೆಜ್ಜೆಗಳಿಂದಾಗಿ ಮಾನವ ಪ್ರಕೃತಿಯಿಂದ ದೂರ ಸರಿದುಬಿಟ್ಟ. ಭಗವಂತ ದೊರಕಿಸಿಕೊಡುವುದೇ ನಿಜವಾದ ಅಡುಗೆ ಮತ್ತು ಆತನೇ ಸರಿಯಾದ ದರ್ಜಿ ಎಂದು ಇತರೆ ಪ್ರಾಣಿಗಳಿಗೆ ಸ್ಪಷ್ಟವಾಗಿ ತಿಳಿದಿದೆ.

(೩೬೭) ’ಆಗಿಬಿಟ್ಟಿರುವುದು’ ಆಗುತ್ತಿರುವುದರ ಒಂದು ಭಾಗವಷ್ಟೇ. ’ನೆನ್ನೆ’ ಎಂಬುದು ಇಂದಿನ ಕಲ್ಪನೆಯಷ್ಟೇ.

(೩೬೮) ಭಾಷಣವೊಂದನ್ನು ನಾವು ಕೇಳುವುದೇಕೆಂದರೆ ನಮಗಿಂತಲೂ ಆತನಿಗೆ/ಆಕೆಗೆ ಹೆಚ್ಚು ತಿಳಿದಿದೆ ಎಂಬ ಕೀಳರಿಮೆಯಿಂದಾಗಿ. ಜೊತೆಗೆ ನಮ್ಮಂತೆ ಅವರು ಸಮಸ್ಯೆಗಳನ್ನು ಪರಿಹರಿಸಬಲ್ಲರು ಎಂಬ ವಿಷಯವನ್ನು ನಾವು ನಂಬುವುದೂ ಇಲ್ಲ.

(೩೬೯) ಊಟದಲ್ಲಿನ ಅಸಮತೆ ಮತ್ತು ಒಳ್ಳೆಯ ಅಡುಗೆ ಮಾಡಬಲ್ಲ ಸಾಮರ್ಥ್ಯಗಳ ನಡುವಣ ಸಂಬಂಧವೇನೆಂದರೆ ಒಬ್ಬನೇ/ಳೇ ವ್ಯಕ್ತಿಯು ಎರಡೂ ವರ್ಗಕ್ಕೆ ಒಮ್ಮೆಲೆ ಸೇರಲಾರನು/ಳು!

(೩೭೦) ಮಾನವರು ವ್ಯಸನಿಗಳಾಗಿರುವುದು ಮತ್ತು ಚಟಕ್ಕೆ ಬಿದ್ದಿರುವುದಕ್ಕೆ ಕಾರಣವೆಂದರೆ ಅತ್ಯಂತ ಕೆಟ್ಟ ಚಟವೆಂಬುದು ಸ್ವತಃ ಬದುಕೇ ಆಗಿರುವುದು!

Rating
No votes yet

Comments