ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !

ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !

೧. "ಕಡಿದಾಳ್ ಮತ್ತು ಚೆನ್ನಿ ಅಂತಹವರನ್ನು ನಕ್ಸಲ್ ಹಿತೈಷಿ ಅಂತ ಘೋಷಿಸಿದ ರಾಜ್ಯದ ಪೋಲಿಸ್ ಇಲಾಖೆ ಒಂದು ದೊಡ್ಡ ಜೋಕ್"
೨. "ಈ ಬೆಂಬಲಿಗರ ಪಟ್ಟಿಯ ಕ್ರಮ ಪೋಲಿಸ್ ಇಲಾಖೆಯ ವೃತ್ತಿ ದಾರಿದ್ರ್ಯಕ್ಕೆ ಹಿಡಿದ ಕೈಗನ್ನಡಿ"
೩. "ಕೋಮುವಾದಿ ಸರ್ಕಾರದ ಫ್ಯಾಸಿಸ್ಟ್ ಮನೋಭಾವಕ್ಕೆ ಇದೊಂದು ಉದಾಹರಣೆ"

೪. "ಅಭಿಪ್ರಾಯ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಧೋರಣೆ"

೫. "ಇದೊಂದು ರಾಜಕೀಯ ದುರುದ್ದೇಶ ಪ್ರೇರಿತ ಕ್ರಿಯೆ"

೬. "ಸಮಾಜವಾದಿ ಎಂ.ಪಿ. ಪ್ರಕಾಶ್ ರ ಇಲಾಖೆಯಿಂದ ಇಂತಹ ಕ್ರಮ ಅನೀರೀಕ್ಷಿತ"

ಮೇಲಿನವುಗಳು ನಕ್ಸಲ್ ಬೆಂಬಲಿಗ ಸಂಘ, ಸಂಸ್ಥೆಗಳು ಮತ್ತು ವ್ಯಕ್ತಿಗಳ ಮಾಹಿತಿ ಕುರಿತ ಪಟ್ಟಿ ಹೊರಬಿದ್ದ ತಕ್ಷಣ ನಮ್ಮ ಪ್ರಗತಿಪರರು, ಚಿಂತಕರು ಎನ್ನಿಸಿಕೊಂಡವರು ಉದುರಿಸಿದ ನುಡಿಮುತ್ತುಗಳು !!

ಅವರ ಹೇಳಿಕೆಗಳ ರಭಸ, ಆವೇಶ, ಸಿಟ್ಟು ನೋಡಿದರೆ ಬಹುಶಃ ರಾಜ್ಯ ಪೋಲಿಸ್ ಇಲಾಖೆ ಏನೋ ದೊಡ್ಡ ದುರಂತಕ್ಕೆ ಕಾರಣವಾಗಿದೆ ಎಂದು ಭಾಸವಾಗುವಂತಿತ್ತು. ಅನೇಕರು ಶಂಕರ ಬಿದರಿಯವರ ಮೇಲೆ ಹರಿಹಾಯ್ದರು. ಇದೆಲ್ಲಾ ರಾಜಕೀಯ ಕುತಂತ್ರ ಎಂದರು. ಎಲ್ಲಾ ಹೋಗಲಿ ಸಮಾಜವಾದಿ ಕಡಿದಾಳ್ ಮತ್ತು ಚಿಂತಕ ಚೆನ್ನಿಯವರನ್ನು ಸೇರಿಸುವದೆಂದರೆ? ಇತ್ಯಾದಿ ಪ್ರಶ್ನೆಗಳು ಹೊರಹೊಮ್ಮಿದ್ದವು.

ಈ ಮಾದರಿಯ ಹೇಳಿಕೆಗಳಿಗೆ ಇಲ್ಲಿಯ ಸಂಪದ ಲೇಖನ ನೋಡಿ : http://sampada.net/blog/d_s_nagabhushana/27/06/2007/4705

ಇವರೆಲ್ಲರ ಒತ್ತಡಕ್ಕೆ ಮಣಿದು ಸರ್ಕಾರ ಪಟ್ಟಿಯನ್ನೇನೋ ಹಿಂತೆಗೆದುಕೊಂಡಿದೆ. ಆದರೆ ಅದರಿಂದ(ಕೀಳು ರಾಜಕೀಯದಿಂದ!) ಪೋಲಿಸ್ ಇಲಾಖೆಯ ಮೇಲಾಗುವ ಪರಿಣಾಮ ವಿಚಾರಿಸಿ!

ಇವರೆಲ್ಲರ ಹಾರಾಟ ಎಷ್ಟು ಖೋಟಾ ಎಂದು ತಿಳಿಯಲು ಇವತ್ತಿನ ವಿ.ಕ ಮುಖಪುಟದಲ್ಲಿರುವ ಚಿತ್ರ ನೋಡಿ. ಅಲ್ಲಿ ಅದೇ ಕಡಿದಾಳು ನಕ್ಸಲರ ಪಕ್ಕದಲ್ಲಿ ವಿರಾಜಮಾನರಾಗಿದ್ದಾರೆ!
ಚಿತ್ರದ ಕೊಂಡಿ : http://vijaykarnatakaepaper.com/pdf/2007/07/03/20070703a_001101006.jpg

ಏನು ಹೇಳಲಿ ಇವರ ಹಾರಾಟಕ್ಕೆ? ಬಲ್ಲವರು ವಿಚಾರಿಸಿ ;-)

Rating
No votes yet

Comments