ಪುಸ್ತಕನಿಧಿ - "July 22 1947" ಕನ್ನಡ ಕಾದಂಬರಿ - ಓದುತ್ತ

ಪುಸ್ತಕನಿಧಿ - "July 22 1947" ಕನ್ನಡ ಕಾದಂಬರಿ - ಓದುತ್ತ

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  ಇದು ಚಲನಚಿತ್ರವೂ  ಆಗಿದೆ

ಇದು ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ತಂದೆ ಮಗ, ಮೊಮ್ಮಗನ ಕಥೆಯನ್ನು ಹೇಳುತ್ತದೆ. ಚೆನ್ನಾಗಿದೆ. ಬಹಳ ದೊಡ್ಡದೂ ಏನಲ್ಲ,   ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಏಕೋ ಇದನ್ನು ಓದಲು ಆರಂಭಿಸಿದೆ. ಏನಿದು ಈ ತಾರೀಕು ? ಇದು ರಾಷ್ಟ್ರೀಯ ಧ್ವಜದಿನ . ಏನು ಹಾಗಂದರೆ ? ಇಂಟರ್ ನೆಟ್ಟಿನಲ್ಲಿ ನೋಡಿದೆ . ಅನೇಕ ಕುತೂಹಲಕರ ಸಂಗತಿಗಳು ದೊರಕಿದವು. ಭಾರತ ದೇಶಕ್ಕೆ ಒಂದೇ ಧ್ವಜ ಬೇಕು ಎ೦ದು ಮೊದಲು ಯೋಚಿಸಿದ್ದು ಯಾರು ಗೊತ್ತೇ - ಆಶ್ಚರ್ಯ ! - ಬ್ರಿಟಿಶರು  1857 ರಲ್ಲಿ, 

ಆಮೇಲೆ ಅದರಲ್ಲೆಲ್ಲೋ 'ರಾಷ್ಟ್ರೀಯ ಸಪ್ತಾಹ'ದ ಉಲ್ಲೇಖ ಇದೆ. ಆ ಅವಧಿಯಲ್ಲಿ ಯಾರೇ ಮರಣ ಹೊಂದಿದರೂ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದಿಲ್ಲವಂತೆ. ಏನಿದು ರಾಷ್ಟ್ರೀಯ ಸಪ್ತಾಹ ಅಂತ ಹುಡುಕಲು ಹೋದರೆ - ಭಗವದ್ಗೀತೆಯ ಲೋಕ ಸಂಗ್ರಹ ದ ಕಲ್ಪನೆ ಎದುರಾಯಿತು. ಏನಿದು ಲೋಕ ಸಂಗ್ರಹ  ? ಅದೂ ಒಂದು ಅದ್ಭುತ ಕಲ್ಪನೆ. (ಆ ಬಗ್ಗೆ ನಾನು ಇನ್ನಷ್ಟು ತಿಳಿಯಬೇಕಿದೆ ) ಇವೆಲ್ಲವನ್ನು ನಿಮಗೆ ಆಸಕ್ತಿ ಇದ್ದರೆ ನೀವೇ ಕಂಡುಕೊಳ್ಳಬೇಕು.

Rating
Average: 4 (8 votes)